ಯುವಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ MY Bharat ಯುವಜನರಿಗೆ ವಿವಿಧ ಅವಕಾಶಗಳನ್ನು ಒದಗಿಸುತ್ತಿದೆ. ಯುವಕರಲ್ಲಿ ನಾಯಕತ್ವ ಗುಣ, ಸ್ವಯಂಸೇವಾ ಮನೋಭಾವ, ಕೌಶಲ್ಯ, ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದರೊಂದಿಗೆ, ದೇಶದ ಅಭಿವೃದ್ಧಿಯಲ್ಲಿ ಯುವಕರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವುದು MY Bharatನ ಪ್ರಮುಖ ಉದ್ದೇಶವಾಗಿದೆ. ಯುವಕರು ತಮ್ಮ ಆಸಕ್ತಿ, ಪ್ರತಿಭೆ ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಸ್ವಯಂಸೇವಾ ಚಟುವಟಿಕೆಗಳು, ಅನುಭವಾಧಾರಿತ ಕಲಿಕೆ, ನಾಯಕತ್ವ ಕಾರ್ಯಕ್ರಮಗಳು ಹಾಗೂ ವಿವಿಧ ಅವಕಾಶಗಳಲ್ಲಿ ಭಾಗವಹಿಸಲು MY Bharat ವೇದಿಕೆಯನ್ನು ಒದಗಿಸುತ್ತದೆ.
ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಆಯೋಜಿಸಲಾಗುತ್ತಿದ್ದ ರಾಷ್ಟ್ರೀಯ ಯುವ ಜನೋತ್ಸವವನ್ನು 2025ರಿಂದ Viksit Bharat Young Leaders Dialogue (VBYLD) ರೂಪದಲ್ಲಿ ಪುನರ್ರಚಿಸಲಾಗಿದ್ದು, Viksit Bharat @2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವಕರನ್ನು ದೇಶದ ಅಭಿವೃದ್ಧಿಯೊಂದಿಗೆ ಮತ್ತಷ್ಟು ನೇರವಾಗಿ ಸಂಪರ್ಕಿಸುವ ಉದ್ದೇಶ ಹೊಂದಿದೆ. VBYLD ಮೂಲಕ ದೇಶದ ವಿವಿಧ ಭಾಗಗಳ ಯುವಕರು ತಮ್ಮ ಆಲೋಚನೆಗಳು, ನವೀನ ಪರಿಹಾರಗಳು ಮತ್ತು ಭಾರತದ ಭವಿಷ್ಯದ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ರಾಷ್ಟ್ರೀಯ ವೇದಿಕೆಯನ್ನು ಪಡೆಯುತ್ತಿದ್ದಾರೆ.
VBYLD 2026ರಲ್ಲಿ ದೇಶಾದ್ಯಂತ ಯುವಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ವಿಕಸಿತ ಭಾರತ ಚಾಲೆಂಜ್ನ ಕ್ವಿಜ್ನಲ್ಲಿ 50 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ವಿವಿಧ ಹಂತಗಳ ಮೂಲಕ ಪ್ರತಿಭಾವಂತ ಯುವ ನಾಯಕರನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ವೇದಿಕೆಗೆ ತರುವ ಪ್ರಯತ್ನವೂ ನಡೆದಿದೆ. VBYLD 2026ರಲ್ಲಿ ಕ್ವಿಜ್, ಪ್ರಬಂಧ ಮತ್ತು ಪ್ರಸ್ತುತಿ ಸೇರಿದಂತೆ ವಿವಿಧ ಹಂತಗಳ ಜೊತೆಗೆ ಸಾಂಸ್ಕೃತಿಕ ಮತ್ತು ನವೀನತೆ, Design for Bharat ಹಾಗೂ Hack for Social Cause ವಿಭಾಗಗಳಲ್ಲಿಯೂ ಯುವಕರಿಗೆ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದೀಗ VBYLD 2027ರ ಪ್ರಕ್ರಿಯೆ ಆರಂಭವಾಗಿದ್ದು, ಇದರ ಮೊದಲ ಹಂತವಾಗಿ Viksit Bharat Quiz ಅನ್ನು MY Bharat ಪೋರ್ಟಲ್ನಲ್ಲಿ ಆಯೋಜಿಸಲಾಗಿದೆ. 15ರಿಂದ 29 ವರ್ಷದೊಳಗಿನ ಯುವ ಭಾರತೀಯರು ಈ ಕ್ವಿಜ್ನಲ್ಲಿ ಭಾಗವಹಿಸಬಹುದು. ಕ್ವಿಜ್ 17 ಆಗಸ್ಟ್ 2026ರಿಂದ 30 ಸೆಪ್ಟೆಂಬರ್ 2026ರವರೆಗೆ ಆನ್ಲೈನ್ನಲ್ಲಿ ನಡೆಯಲಿದ್ದು, ವಿವಿಧ ಭಾರತೀಯ ಭಾಷೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಭಾರತ, ಭಾರತೀಯ ಪರಂಪರೆ, ದೇಶದ ಸಾಧನೆಗಳು, ಅಭಿವೃದ್ಧಿಯ ಪಯಣ ಹಾಗೂ Viksit Bharat @2047ರ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಯುವಕರ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
Viksit Bharat Quizನಲ್ಲಿ ಭಾಗವಹಿಸುವುದು ಬಹಳ ಸರಳವಾಗಿದೆ. ಯುವಕರು MY Bharat ಪೋರ್ಟಲ್ಗೆ ತೆರಳಿ ನೋಂದಣಿ ಮಾಡಿಕೊಂಡು ಕ್ವಿಜ್ನಲ್ಲಿ ಭಾಗವಹಿಸಬೇಕು. ಕ್ವಿಜ್ನಲ್ಲಿ 20 ಪ್ರಶ್ನೆಗಳಿಗೆ 10 ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕಾಗಿದ್ದು, ಭಾಗವಹಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2026 ಆಗಿದೆ. ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳುವಂತೆ MY Bharat ವತಿಯಿಂದ ಮನವಿ ಮಾಡಲಾಗಿದೆ.
ಈ ಕ್ವಿಜ್ ಕೇವಲ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲ; ಇದು ಯುವಕರನ್ನು Viksit Bharat @2047ರ ಚಿಂತನೆಯೊಂದಿಗೆ ಸಂಪರ್ಕಿಸುವ ಮೊದಲ ಹೆಜ್ಜೆಯಾಗಿದೆ. VBYLD 2027ರ ಐದು ಹಂತಗಳ ಪ್ರಕ್ರಿಯೆಯಲ್ಲಿ ಮೊದಲಿಗೆViksit Bharat Quiz, ನಂತರ Essay Challenge, District Championship, State/UT VBYLD ಹಾಗೂ ಅಂತಿಮವಾಗಿ National VBYLD ನಡೆಯಲಿದೆ. ಕ್ವಿಜ್ನಲ್ಲಿ ಉತ್ತಮ ಸಾಧನೆ ಮಾಡುವ ಅಗ್ರ 10 ಶೇಕಡಾ ಸ್ಪರ್ಧಿಗಳು, ಗರಿಷ್ಠ 4 ಲಕ್ಷದವರೆಗೆ, ಮುಂದಿನ ಹಂತವಾದ Viksit Bharat Essay Challenge ಗೆ ಅರ್ಹರಾಗಲಿದ್ದಾರೆ. ನಂತರದ ಹಂತಗಳಲ್ಲಿ ಆಯ್ಕೆಯಾಗುವ ಯುವಕರಿಗೆ ತಮ್ಮ ಆಲೋಚನೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಮಂಡಿಸುವ ಅವಕಾಶ ದೊರೆಯಲಿದೆ.
VBYLD 2027ರ ಮುಂದಿನ ಹಂತವಾಗಿ Essay Challenge ಅಕ್ಟೋಬರ್ 5ರಿಂದ 19ರವರೆಗೆ, District Championship ನವೆಂಬರ್ 10ರಿಂದ 16ರವರೆಗೆ, ಹಾಗೂ State/UT VBYLD ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ನಡೆಯಲಿದೆ. ಅಂತಿಮವಾಗಿ ಜನವರಿ 10ರಿಂದ 12, 2027ರವರೆಗೆ ನವದೆಹಲಿಯಲ್ಲಿ National VBYLD ನಡೆಯಲಿದೆ. ಆಯ್ಕೆಯಾದ ಯುವ ನಾಯಕರಿಗೆ ರಾಷ್ಟ್ರೀಯ ನಾಯಕರು, ನೀತಿ ನಿರೂಪಕರು ಮತ್ತು ತಜ್ಞರೊಂದಿಗೆ ಸಂವಾದ ನಡೆಸುವ ಹಾಗೂ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ.
VBYLD ಮೂಲಕ ಕೇವಲ ಕ್ವಿಜ್ಮತ್ತು ಪ್ರಬಂಧ ಸ್ಪರ್ಧೆಗಳಷ್ಟೇ ಅಲ್ಲದೆ, ಯುವಕರ ವಿವಿಧ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ಮತ್ತು ನವೀನತೆ design for Bharath ಹಾಗೂ Design for Bharath ಹಾಗೂ Hack for Social Cause ಮುಂತಾದ ಹಲವು ಅವಕಾಶಗಳನ್ನು MY Bharat ಒದಗಿಸುತ್ತಿದೆ. ಕಲೆ, ಸಾಹಿತ್ಯ, ವಿಜ್ಞಾನ ಮತ್ತು ನವೀನತೆ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹಾಗೂ ತಂತ್ರಜ್ಞಾನ ಆಧಾರಿತ ಸಾಮಾಜಿಕ ಉಪಕ್ರಮಗಳಂತಹ ವಿವಿಧ ಕ್ಷೇತ್ರಗಳಲ್ಲಿ ಯುವಕರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಬಹುದು.
ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಪ್ರತಿಯೊಬ್ಬ ಯುವಕರೂ Viksit Bharat Quizನಲ್ಲಿ ಭಾಗವಹಿಸುವ ಮೂಲಕ ಈ ರಾಷ್ಟ್ರೀಯ ಅವಕಾಶದ ಭಾಗವಾಗಬೇಕು ಎಂದು MY Bharat ವತಿಯಿಂದ ಮನವಿ ಮಾಡಲಾಗಿದೆ. ಸೆಪ್ಟೆಂಬರ್ 30 ಕೊನೆಯ ದಿನವಾಗಿರುವುದರಿಂದ ಯುವಕರು ಯಾವುದೇ ವಿಳಂಬ ಮಾಡದೆ MY Bharat ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ಕ್ರಿಜ್ನಲ್ಲಿ ಭಾಗವಹಿಸಬೇಕು. ಒಂದು ಕ್ವಿಜ್ನಿಂದ ಆರಂಭವಾಗುವ ಈ ಪ್ರಯಾಣವು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೇದಿಕೆಯವರೆಗೆ ಕೊಂಡೊಯ್ಯುವ ಅವಕಾಶವಾಗಿದ್ದು, ಯುವಕರ ಆಲೋಚನೆಗಳು 2047ರ ವಿಕಸಿತ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು VBYLD ಒಂದು ಮಹತ್ವದ ವೇದಿಕೆಯಾಗಿದೆ ಎಂದು ಜಿಲ್ಲಾ ಯುವ ಅಧಿಕಾರಿ ಕು.ಐಶ್ವರ್ಯ ಶ್ರೀನಿವಾಸ್ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಜನರಿಗೋಸ್ಕರ “ಮೈ ಭಾರತ್” ಕಾರ್ಯಕ್ರಮದಲ್ಲಿ ವಿಕಸಿತ ಭಾರತ್ ಕ್ವಿಜ್, ಇಲಾಖೆ ಪ್ರಕಟಣೆ
Date:
