ದೇಶದ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯಲ್ಲಿ ಆಹಾರೋತ್ಪಾದನಾ ರಂಗದ ಕೊಡುಗೆ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ಅವರಿಂದು ನಗರದ ಸುಪ್ರಸಿದ್ಧ ಮೋತೀಸ್ ಬೇಕರಿ ಉತ್ಪಾದನಾ ಘಟಕದಲ್ಲಿ ಏರ್ಪಾಡಾಗಿದ್ದ ಭಾರತದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಮ್ಮ ದೇಶದ ಜಿಡಿಪಿ ಅಭಿವೃದ್ಧಿ ದರವು 6.8 ರಿಂದ 7.2 ರವರೆಗೆ ಇದ್ದು ಇದು ಅಮೆರಿಕಾ ಚೀನಾಗಳಿಗಿಂತ ಮುಂದಿದೆ, ದೇಶದ ಕೈಗಾರಿಕಾ ರಂಗದ ಸಾಧನೆಯಲ್ಲಿ ಉದ್ಯಮಿಗಳ ಪಾತ್ರ ಎಷ್ಟು ದೊಡ್ಡದೋ ಅಷ್ಟೇ ಕಾರ್ಮಿಕರ ಪಾತ್ರವೂ ಮುಖ್ಯವಾಗಿದೆ ಎಂದರಲ್ಲದೆ ಕಾರ್ಮಿಕ ಬಂಧುಗಳ ಹಾಗೂ ಅವರ ಕುಟುಂಬ ವರ್ಗದವರಿಗೂ ಸ್ವಾತಂತ್ರೋತ್ಸವದ ಶುಭಾಶಯ ಹೇಳಿದರು. ಮೋತಿ ಗುರುಪ್ರಸಾದ್, ಸನತ್ ಕುಮಾರ್, ಉತ್ಪಾದನಾ ಘಟಕದ ಹಿರಿಯ ನೌಕರ ತಿಮಣ್ಣ, ಬಸವರಾಜ್ ಲೆಕ್ಕದ್, ಷಣ್ಮುಖ್ ಮುಂತಾದವರು ಉಪಸ್ಥಿತರಿದ್ದು ದಿವ್ಯಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಮಿಕರು ರಾಷ್ಟ್ರ ಪ್ರೇಮದೊಂದಿಗೆ ಭಾಗವಹಿಸಿದ್ದರು.
