ಸಾಗರ ತಾಲ್ಲೂಕಿನ ಕಾಗೋಡು ಗ್ರಾಮ ವಾಸಿ ರೇಣುಕಮ್ಮ ಎಂಬುವವರ ಮಗ 40 ವರ್ಷ ವಯಸ್ಸಿನ ಗಿರೀಶ್ 2 ತಿಂಗಳಿಂದ ಕಾಣೆಯಾಗಿರುತ್ತಾರೆ. ಈತನು ಮಾನಸಿಕ ಅಸ್ವಸ್ಥನಾಗಿದ್ದು, 5.8 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಗೈ ಮೇಲೆ ದಿವ್ಯ ಎಂಬ ಹಚ್ಚೆ ಇರುತ್ತದೆ.
ಈ ಕಾಣೆಯಾದ ವ್ಯಕ್ತಿಯ ಬಗ್ಗೆ ಯಾರಿಗಾದರೂ ಸುಳಿವು ಇದ್ದಲ್ಲಿ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ 9480803361/ 9480803385, ಸಾಗರ ವಿಭಾಗ -08182-226082, ಶಿವಮೊಗ್ಗ ಎಸ್.ಪಿ ಕಚೇರಿ 08182-261400 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಸಾಗರದ ಕಾಗೋಡಿನಿಂದ ವ್ಯಕ್ತಿ ನಾಪತ್ತೆ. ಸಾಗರ ಗ್ರಾಮಾಂತರ ಪೊಲೀಸ್ ಟಾಣೆ ಪ್ರಕಟಣೆ
Date:
