Friday, June 19, 2026
Friday, June 19, 2026

Kirloskar Ferrous Industries Limited ಕೊಪ್ಪಳ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆ ಆಶ್ರಯದಲ್ಲಿ ವಲಯ ಸುರಕ್ಷತಾ ದಿನಾಚರಣೆ

Date:

Kirloskar Ferrous Industries Limited ದಿನಾಂಕ 17-06-2026 ರಂದು ಹೊಸಪೇಟೆಯ ಸ್ಟೇಷನ್ ರಸ್ತೆಯಲ್ಲಿರುವ ಹೋಟೆಲ್ ಪ್ರಿಯದರ್ಶಿನಿ ತೋರಣಂ ಸಭಾಂಗಣದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ (KFIL) ಹಾಗೂ ಬಿಕೆರೈಸ್ (BKRISE) ಸಹಯೋಗದಲ್ಲಿ ಬಳ್ಳಾರಿ–ಕೊಪ್ಪಳ ವಲಯ ಸುರಕ್ಷತಾ ದಿನಾಚರಣೆ–2026ರ ಅಂಗವಾಗಿ 55ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವು ಬೆಳಿಗ್ಗೆ 9.30 ಗಂಟೆಗೆ ಆರಂಭಗೊಂಡಿತು. ಮೊದಲಿಗೆ ವಿವಿಧ ಸುರಕ್ಷತಾ ಸಾಧನಗಳ ವಿತರಕರು ಭಾಗವಹಿಸಿದ್ದ 16 ಸುರಕ್ಷತಾ ಪ್ರದರ್ಶನ ಸ್ಟಾಲ್‌ಗಳನ್ನು ಕರ್ನಾಟಕ ಸರ್ಕಾರದ ಕಾರ್ಖಾನೆಗಳು, ಬಾಯ್ಲರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕರಾದ ಶ್ರೀ ಕೆ.ಜಿ. ನಂಜಪ್ಪ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಅವರು ಉದ್ಘಾಟಿಸಿದರು.

ಸುರಕ್ಷತಾ ವಿಷಯದ ತಾಂತ್ರಿಕ ಸೆಮಿನಾರ್‌ಗೆ ಚಾಲನೆ ನೀಡಲಾಯಿತು. ಓಪನ್ ಸೇಫ್ಟಿ ಬ್ರಿಫಿಂಗ್ ಹಾಗೂ ಬಿಕೆರೈಸ್ ಪರಿಚಯದ ಬಳಿಕ ಸುರಕ್ಷತಾ ವಿಭಾಗದ ಅಧಿಕಾರಿ ಶ್ರೀ ಮುರುಳೀಧರ ನಾಡಿಗೇರ್ ಅವರು ಗಣ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.

ಪ್ರಾರ್ಥನೆ, ವಂದೇ ಮಾತರಂ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಿತು.

ಶ್ರೀ ವರುಣ್, ಹಿರಿಯ ಸಹಾಯಕ ನಿರ್ದೇಶಕರು (ಬಳ್ಳಾರಿ ವಿಭಾಗ) ಅವರು ಸ್ವಾಗತ ಭಾಷಣ ಮಾಡಿ ಸಭಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಗಣ್ಯರಿಂದ ಜ್ಯೋತಿ ಬೆಳಗಿಸುವ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಶ್ರೀ ಕೆ.ಜೆ ನಂಜಪ್ಪ ಹಾಗೂ ಶ್ರೀ ಆರ್.ವಿ. ಗುಮಾಸ್ತೆ ಅವರನ್ನು ಬಿಕೆರೈಸ್ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ವೆಂಕಟೇಶ್ ರಾಥೋಡ್, ಜಂಟಿ ನಿರ್ದೇಶಕರು, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಹುಬ್ಬಳ್ಳಿ ವಿಭಾಗ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂಧರ್ಭದಲ್ಲಿ ಬಿ ಎಂ ಎಂ ಇಸ್ಪಾತ್ ಲಿಮಿಟೆಡ್ ಮುಖ್ಯಸ್ಥರಾದ ಶ್ರೀ ಮಂಜುನಾಥ್ ಪ್ರಭುರವರು ವೇದಿಕೆಯ ಮೇಲೆ ಇದ್ದು ಅವರು ಸಹ ಸುರಕ್ಷತೆಯ ಬಗ್ಗೆ ತಮ್ಮ ಭಾಷಣದಲ್ಲಿ ಅರಿವು ಮೂಡಿಸಿದರು. ಮುಖ್ಯ ಅತಿಥಿಗಳಾಗಿ ಪ್ರಥಮವಾಗಿ ನಿರ್ದೇಶಕರಾದ ನಂತರ ಬಳ್ಳಾರಿ- ಕೊಪ್ಪಳ ಭಾಗಕ್ಕೆ ಆಗಮಿಸಿದ ಶ್ರೀ ಕೆ.ಜೆ. ನಂಜಪ್ಪ ಅವರು ಹೊಸದಾಗಿ ಅನುಮೋದನೆಯಾಗಿರುವ ನೂತನ ಕಾರ್ಮಿಕ ಸಂಹಿತೆ (New Labour Code) ಕುರಿತು ಮಾಹಿತಿ ಸಮೃದ್ಧ ಉಪನ್ಯಾಸ ನೀಡಿದರು.

ಅಧ್ಯಕ್ಷೀಯ ಭಾಷಣದಲ್ಲಿ ಶ್ರೀ ಆರ್.ವಿ. ಗುಮಾಸ್ತೆ ಅವರು “Safety Excellence Journey” ವಿಷಯದ ಕುರಿತು ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು.

ಮುಕುಂದ ಸುಮಿ ಪ್ರೈವೇಟ್ ಲಿಮಿಟೆಡ್‌ನ ಸಿಒಒ ಶ್ರೀ ಓ.ಪಿ. ಸಿಂಗ್ ಅವರು ತಮ್ಮ ಸಂಸ್ಥೆಯಲ್ಲಿ ಅನುಸರಿಸುತ್ತಿರುವ ಅತ್ಯುತ್ತಮ ಸುರಕ್ಷತಾ ಪದ್ಧತಿಗಳ (Best Safety Practices) ಕುರಿತು ವಿವರಿಸಿದರು.

ಮಧ್ಯಾಹ್ನದ ಭೋಜನದ ಬಳಿಕ ಜಿಂದಾಲ್ ಸ್ಟೀಲ್ ಸಂಸ್ಥೆಯ ಶ್ರೀ ಧರ್ಮಪಾಲ್ ಅವರು ಉಕ್ಕು ಉದ್ಯಮದಲ್ಲಿನ ಸುರಕ್ಷತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ನಂತರ ಮಿನರಲ್ಸ್ ಪವರ್ ಅಂಡ್ ಸ್ಟೀಲ್ಸ್ ಸಂಸ್ಥೆಯ ಡಿಜಿಎಂ ಶ್ರೀ ಅಜಿಜ್ ಅವರು “Environment Excellence” ವಿಷಯದ ಕುರಿತು ಉಪನ್ಯಾಸ ನೀಡಿದರು.

ಸುರಕ್ಷತಾ ಸಾಧನ ಸಾಮಗ್ರಿಗಳ ವಿತರಕರಿಂದ ವಯಕ್ತಕ ಸುರಕ್ಷರಾ ಸಾಧನ ಸಾಮಾಗ್ರಿಗಳ ಬಗ್ಗೆ ತಿಳಿಸಿದರು.

ಕೊಪ್ಪಳದ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಅವರು ವಿವಿಧ ಕೈಗಾರಿಕೆಗಳಲ್ಲಿ ಸಂಭವಿಸಿದ ಅಪಘಾತಗಳ ವಿಶ್ಲೇಷಣೆ, ಅಪಘಾತ ತಡೆಗಟ್ಟುವ ಕ್ರಮಗಳು ಹಾಗೂ ಸುರಕ್ಷತಾ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು.

ಸಮಾರೂಪ ಸಮಾರಂಭ

Kirloskar Ferrous Industries Limited ಸಂಜೆಯ ವೇಳೆಗೆ ಕಾರ್ಯಕ್ರಮದ ಸಾಂಸ್ಕೃತಿಕ ಭಾಗವಾಗಿ ಜಿಂದಾಲ್ ಉದ್ಯೋಗಿಗಳಿಂದ ಸುರಕ್ಷತಾ ನಾಟಕ ಮತ್ತು ಹೊಸಪೇಟೆಯ ಅಂಜಲಿ ಭರತನಾಟ್ಯ ಅಕಾಡೆಮಿಯ ಕಲಾವಿದರು ಮನಮೋಹಕ ಭರತನಾಟ್ಯ ಪ್ರದರ್ಶನ ನೀಡಿದರು. ಈ ಪ್ರದರ್ಶನ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

ಸುರಕ್ಷತಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಕೈಗಾರಿಕೆಗಳು ಹಾಗೂ ಸಿಬ್ಬಂದಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸುರಕ್ಷತಾ ಜಾಗೃತಿ ಮೂಡಿಸುವಲ್ಲಿ, ಅಪಘಾತ ತಡೆಗಟ್ಟುವಲ್ಲಿ ಹಾಗೂ ಸುರಕ್ಷಿತ ಕಾರ್ಯಸ್ಥಳ ನಿರ್ಮಾಣದಲ್ಲಿ ಸಲ್ಲಿಸಿದ ವಿಶೇಷ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಮೆಷಿನ್ ಶಾಪ್ ವಿಭಾಗವು ಸಣ್ಣ ಪ್ರಮಾಣದ ಕೈಗಾರಿಕೆ ವಿಭಾಗದಲ್ಲಿ ಮತ್ತು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮೇಗಾ ಇಂಡಸ್ಡೀಸ್ ವಿಭಾಗದಲ್ಲಿ “ಉತ್ತಮ ಕಾರ್ಖಾನೆ” ಪ್ರಶಸ್ತಿಯನ್ನು ಪಡೆದುಕೊಂಡಿತು.

ಶ್ರೀ ಆನಂದ್ ಶಿರಿಶಾಡ್ ಅವರು “ಉತ್ತಮ ಸುರಕ್ಷತಾ ಅಧಿಕಾರಿ”, ಡಾ. ಪ್ರವೀಣ್ ಕುಮಾರ್ ಅವರು “ಉತ್ತಮ ವೈದ್ಯಾಧಿಕಾರಿ” ಪ್ರಶಸ್ತಿಗಳನ್ನು ಪಡೆದರು. ಕಿರ್ಲೋಸ್ಕರ್ ತಂಡವು ಸುರಕ್ಷತಾ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರೆ, ಫೌಂಡ್ರಿ ವಿಭಾಗದ ಕಾರ್ಮಿಕರಾದ ಶ್ರೀ ರುದ್ರೇಶ್ ಅವರು ಸುರಕ್ಷತಾ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಯನ್ನು ಸ್ವೀಕರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಕೆ.ಜಿ. ನಂಜಪ್ಪ, ಶ್ರೀ ವೆಂಕಟೇಶ್ ರಾಥೋಡ್, ಶ್ರೀ ಶ್ರೀವತ್ಸನ್, ಶ್ರೀ ಸಿ. ರಮೇಶ್, ಡಾ. ರಶೀದ್, ಶ್ರೀ ಓ.ಪಿ. ಸಿಂಗ್, ಶ್ರೀ ರಾಜಕುಮಾರ್ ದಂಪೆ, ಶ್ರೀ ವರುಣ್ ಹಾಗೂ ಶ್ರೀ ವಿಜಯಕುಮಾರ್ ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ನೆರವೇರಿಸಿದರು.

“Engage, Educate and Empower People to Enhance Safety” ಎಂಬ ಈ ವರ್ಷದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆಯ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಪ್ರತಿಯೊಬ್ಬ ಉದ್ಯೋಗಿಯೂ ಸುರಕ್ಷತೆಯ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ಗಣ್ಯರು ಕರೆ ನೀಡಿದರು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮುರುಳಿಧರ್ ನಾಡಿಗೇರ್ (ಸುರಕ್ಷತಾ ವಿಭಾಗ), ಶ್ರೀಮತಿ ಅಂಬಿಕಾ ಕಟ್ಟಿ (ಆಡಳಿತ ವಿಭಾಗ) ಶ್ರೀ ಕಿರಣ್ (ಪರಿಸರ ವಿಭಾಗ) ಹಾಗೂ ಶ್ರೀ ನಯನ್ (ಮಾರ್ಕೆಟಿಂಗ್ ವಿಭಾಗ) ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಅಂತಿಮವಾಗಿ ಶ್ರೀ ಶಿವಯ್ಯ ಸ್ವಾಮಿ ಅವರು ವಂದನಾರ್ಪಣೆ ಸಲ್ಲಿಸಿದರು.
ಬಿಕೆರೈಸ್ ಹಾಗೂ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ತಂಡಗಳ ಸಮರ್ಪಕ ಯೋಜನೆ ಮತ್ತು ವ್ಯವಸ್ಥಾಪನೆಯಿಂದ ಕಾರ್ಯಕ್ರಮವು ನಿಗದಿತ ಸಮಯಕ್ಕೆ ಆರಂಭವಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಸುರಕ್ಷತಾ ಜಾಗೃತಿ, ಕೈಗಾರಿಕಾ ಸಹಭಾಗಿತ್ವ ಹಾಗೂ ಸುರಕ್ಷಿತ ಕಾರ್ಯಸಂಸ್ಕೃತಿಯ ವೃದ್ಧಿಗೆ ಈ ಕಾರ್ಯಕ್ರಮ ಮಹತ್ವದ ವೇದಿಕೆಯಾಗಿದ್ದು, ಭಾಗವಹಿಸಿದ ಎಲ್ಲರ ಸಹಕಾರದಿಂದ ಅರ್ಥಪೂರ್ಣ ಹಾಗೂ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿತು.

ವರದಿ:
ಮುರುಳೀಧರ ನಾಡಿಗೇರ್
ಸುರಕ್ಷತಾ ವಿಭಾಗ
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

“ಕರ್ತವ್ಯ ಆ್ಯಪ್ ” ನಲ್ಲಿ ಶೇ. 70.6 ಕ್ಕೂ ಹೆಚ್ಚು ನೌಕರರ ನೋಂದಾವಣೆ. ಸರ್ಕಾರದ ಸ್ಪಷ್ಠಿಕರಣ

"ಕರ್ತವ್ಯ ಆಪ್‌ನಲ್ಲಿ 2.13 ಲಕ್ಷ ಉದ್ಯೋಗಿಗಳು ನೋಂದಣಿಯಾಗಿಲ್ಲ" ಎಂಬ ಕೆಲವು ಮಾಧ್ಯಮಗಳ...

S.N.Channabasappa ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸಿದ ಪ್ರಕಾಶ್ ರಾಜ್ ಬಂಧನಕ್ಕೆ ಶಾಸಕ ಎಸ್.ಎನ್‌.ಚನ್ನಬಸಪ್ಪಆಗ್ರಹಿಸಿ ಪತ್ರ

S.N.Channabasappaಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿದೆ ಎನ್ನಲಾದ ಷಡ್ಯಂತ್ರದಲ್ಲಿ ನಟ ಪ್ರಕಾಶ್ ರಾಜ್...