SHARATH ANANTHAMURTHY ಕರ್ನಾಟಕದ ಸಂಸ್ಕೃತ ಚಳುವಳಿಗಳ ಇತಿಹಾಸದಲ್ಲಿ ಎಂದೆAದಿಗೂ ನೆನಪಾಗುವ ಮೊದಲ ವ್ಯಕ್ತಿ ಅಂದ್ರೆ ಡಿ ಎಸ್ ಎಸ್ ಸಂಸ್ಥಾಪಕ ಪ್ರೊ.ಬಿ ಷ್ಣಪ್ಪನವರು ಮೇಲ್ವರ್ಗಗಳನ್ನು ನಡುಗಿಸಿದವರು ಎಂದು ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಶರತ್ ಅನಂತ ಮೂರ್ತಿಯವರು ಹೇಳಿದರು. ಇತ್ತೀಚೆಗೆ ಶಿವಮೊಗ್ಗದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ನಡೆದ ಡಿ ಎಸ್ ಎಸ್ ಸಂಸ್ಥಾಪಕ ಪ್ರೊ. ಬಿ ಕೃಷ್ಣಪ್ಪ ನವರ ೮೯ ನೇ ಜನ್ಮ ದಿನ ಕಾರ್ಯಕ್ರಮವನ್ನು ಪ್ರೊ. ಬಿ ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ ಸಮಾನತೆ ಮತ್ತು ಅಸ್ಪöÈಶ್ಯತೆ ವಿರುದ್ಧ ಹೋರಾಟ ಕಟ್ಟಿ ಆಳುವ ಅಧಿಕಾರಸ್ತ ಮೇಲ್ವರ್ಗಗಳನ್ನು ನಡುಗಿಸಿದವರು. ತನ್ನ ಬದುಕಿನುದ್ದಕ್ಕೂ ಅನುಭವಿಸಿದ ಜಾತಿ ತಾರತಮ್ಯಗಳ ವಿರುದ್ಧ ಸಿಡಿದೆದ್ದ ಪ್ರೊ. ಬಿ ಕೃಷ್ಣಪ್ಪ ನವರು ದಲಿತ ಚಳುವಳಿಯನ್ನು, ದಲಿತ ಸಾಹಿತ್ಯ ಮತ್ತು ಚಿಂತನೆಯನ್ನು ಕರ್ನಾಟಕದ ಉದ್ದಗಲಕ್ಕೂ ಓಡಾಡಿ ತನಗೆ ದಕ್ಕಿದ ತಿಳುವಳಿಕೆಯನ್ನು ಕ್ರಾಂತಿಯ ಕಿಡಿಯಾಗಿ ಒತ್ತಿಸಿದವರು ಪ್ರೊ. ಬಿ. ಕೃಷ್ಣಪ್ಪನವರು ಎಂದು ಪ್ರೊ. ಅನಂತಮೂರ್ತಿ ಯವರು ಹೇಳಿದರು. ವೇದಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ಹೇಮಂತ್, ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಅಭಿಷೇಕ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀ ಕಾರ್ಯಪ್ಪ, ದಾವಣಗೆರೆ ವಿಶ್ವ ವಿದ್ಯಾಲಯದ ಡಾ. ಹೆಚ್ ವಿಶ್ವನಾಥ್,
SHARATH ANANTHAMURTHY ವಕೀಲರಾದ ಶ್ರೀಪಾಲ್, ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ಶ್ರೀಕಾಂತ್, ಡಿ ಎಸ್ ಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಶಿವಬಸಪ್ಪ, ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ಶ್ರೀ ಎಂ ಏಳುಕೋಟಿ, ಹಾಗೂ ವಿವಿಧ ತಾಲ್ಲೂಕ್ಗಳ ಸಂಚಾಲಕರುಗಳು ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಡಿ ಎಸ್ ಎಸ್ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ಇವರು ವಹಿಸಿದ್ದರು.
SHARATH ANANTHAMURTHY ಬಿ.ಕೃಷ್ಣಪ್ಪನವರು ಬದುಕಿನುದ್ದಕ್ಕೂ ಅನುಭವಿಸಿದ ಜಾತಿ ತಾರತಮ್ಯಗಳ ವಿರುದ್ಧ ಸಿಡಿದೆದ್ದವರು- ಪ್ರೊ.ಶರತ್ ಅನಂತಮೂರ್ತಿ.
Date:
