ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿ ಕುಂಟಗಳಲೆ ಅರಣ್ಯದಲ್ಲಿ ಸುಮಾರು ೧೦ ವರ್ಷ ಪ್ರಾಯದ ಚಿರತೆಯೊಂದು ಅಸು ನೀಗಿದೆ. ಬಹುಷಃ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಆರೋಪ ಕೇಳಿ ಬರುತ್ತಿದ್ದು ಅರಣ್ಯ ಇಲಾಖೆಯವರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಕಾಡುಕೋಣಗಳ, ಕಡವೆ, ಜಿಂಕೆಗಳ ಸಾವು ಕಾಣಿಸಿದ್ದು ಎಲ್ಲವನ್ನೂ ವಿದ್ಯುತ್ ಹರಿಸಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನಿಸಿದ್ದಾರೆ. ಕಾಡು ಪ್ರಾಣಿಗಳನ್ನು ಕೊಂದು ಮಾರುವ ಜಾಲವೊಂದು ಈ ಭಾಗದಲ್ಲಿದ್ದು ಪ್ರಭಾವಿಗಳಿಂದಾಗಿ ಬೆಳಕಿಗೆ ಬರುತ್ತಿಲ್ಲ. ಅರಣ್ಯ ಇಲಾಖೆಯವರಿಗೆ ತಿಳಿದಿದ್ದರೂ ಹತಾಶೆಯಿಂದ ಕೈಚೆಲ್ಲಿಕುಳಿತಿದ್ದಾರೆಯೆ, ಪ್ರಾಣಿ ಹತ್ಯೆಗೆ ಕಡಿವಾಣ ಇಲ್ಲವೇ ಎಂಬ ಆತಂಕ ಸ್ಥಳೀಯರದ್ದಾಗಿದೆ.
ಸೊರಬದ ಕುಂಟಗಳಲೆ ಅರಣ್ಯದಲ್ಲಿ ಚಿರತೆ ಸಾವು: ವಿದ್ಯುತ್ ಹರಿಸಿ ಕೊಂದಿರುವ ಶಂಕೆ
Date:
