ಸಂಘ ಸಂಸ್ಥೆಗಳು ಆಯೋಜಿಸುವ ಕುಟುಂಬ ಮಿಲನದಂತಹ ಕಾರ್ಯಕ್ರಮ ಸದಸ್ಯರಲ್ಲಿ ಸ್ನೇಹಭಾವ ವೃದ್ಧಿಸುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ನಿದಿಗೆ ಬೋಟ್ನಲ್ಲಿ ಆಯೋಜಿಸಿದ್ದ ವಸುದೈವ ಕುಟುಂಬಕಂ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, 59 ವರ್ಷದಿಂದ ಸಂಸ್ಥೆಯು ಪ್ರತಿ ವರ್ಷ ವಿವಿಧ ಸ್ಥಳಗಳಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಮಾಡುತ್ತಿದ್ದು, ಸದಸ್ಯರಿಗೆ ಗಾಯನ, ಆಟೋಟ, ಪ್ರಶ್ನಾವಳಿ ಮತ್ತಿತರ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ವಸುದೈವ ಕುಟುಂಬಕಂ ಎನ್ನುವ ಹಾಗೆ ಕುಟುಂಬದ ಸದಸ್ಯರು ಆಗಾಗ ಒಂದೆಡೆ ಸೇರುವುದರಿಂದ ಉತ್ತಮ ಬಾಂಧವ್ಯ ವೃಧ್ದಿಯಾಗುತ್ತದೆ ಎಂದರು.
Friends Center ರಾಜ್ಯಮಟ್ಟದ ಚರ್ಚಾಸ್ಪರ್ಧೆ ಹಾಗೂ ಮಾನವೀಯ ಸೇವೆಗಳ ಮಾಡುವುದರಲ್ಲಿ ನಮ್ಮ ಫ್ರೆಂಡ್ಸ್ ಸೆಂಟರ್ ಶಿವಮೊಗ್ಗದಲ್ಲಿ ಪ್ರಚಲಿತವಾಗಿದೆ ಎಂದು ತಿಳಿಸಿದರು.
ನೇತ್ರ ಮತ್ತು ರಕ್ತ ಭಂಡಾರದ ಅಧ್ಯಕ್ಷ ವಿ.ನಾಗರಾಜ್ ಮಾತನಾಡಿ, ನಮ್ಮ ಸಂಸ್ಥೆಯ ಸದಸ್ಯರು ದೇಶದ ನಾನಾ ಭಾಗಗಳಲ್ಲಿ ಕೈಗಾರಿಕೋದ್ಯಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಮನೆ ಮಾತಾಗಿದೆ ಎಂದು ಹೇಳಿದರು.
ಎಂ.ವಿಜಯಕುಮಾರ್ ಮತ್ತು ಡಿ.ಪಿ.ಮೋಹನ್ ಮಾತನಾಡಿ, ಕುಟುಂಬ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಆರೋಗ್ಯ ಸಹ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ಉಮಾ ವೆಂಕಟೇಶ್ ಮತ್ತು ಮಹಿಳಾ ಅಧ್ಯಕ್ಷೆ ಸಪ್ನ ಬದ್ರಿನಾಥ್, ಸದಸ್ಯರು ಇದ್ದರು.
