World Environment Day ದಿನಾಂಕ ೦೫.೦೬.೨೦೨೬ ರಂದು ಶುಕ್ರವಾರ ಬೆಳಿಗ್ಗೆ ೮ ಗಂಟೆಗೆ ಶಿವಮೊಗ್ಗ
ರಾಜೇಂದ್ರನಗರ ಬಡಾವಣೆಯ ಅನಿಕೇತನ ಪಾರ್ಕ್ನಲ್ಲಿ ಪರಿಸರ ದಿನಾಚರಣೆ ಅಂಗವಾಗಿ
ಸಸಿ ನೆಡುವ ಹಾಗೂ ಪರಿಸರ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ
ಪ್ರಶಸ್ತಿ ವಿತರಿಸುವ ಹಾಗೂ ಪರಿಸರ ಪ್ರೇಮಿಗಳಾಗಿ ರಾಜೇಂದ್ರನಗರ –ರವೀಂದ್ರನಗರ
ಪಾರ್ಕ್ಗಳಲ್ಲಿ ಪ್ರತಿದಿನ ಸಾರ್ವಜನಿಕ ಉದ್ಯಾನವನದಲ್ಲಿ ನೀರು ಹಾಕುವ ಸ್ವಯಂ
ಸೇವಕರಿಗೆ – ಪೌರಕಾರ್ಮಿಕರಿಗೆ ಅಭಿನಂದಿಸುವ ಕಾರ್ಯಕ್ರಮ ನಡೆಯಿತು.
ರಾಜೇಂದ್ರನಗರ ನಿವಾಸಿಗಳ ಸಂಘದ ಶ್ರೀ ಅಶಿತ್ ಗೌಡರವರ ಅಧ್ಯಕ್ಷತೆಯಲ್ಲಿ ನಡೆದ
ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ಧಿ
ಮತ್ತು ಸಮಾಜ ಪರಿವರ್ತನಾ ಟ್ರಸ್ಟ್ನ ನಿರ್ದೇಶಕರಾದ ಶ್ರೀ ಕೆ.ಸಿ. ಬಸವರಾಜು ರವರು
ಪರಿಸರದ ಅಳಿವು-ಉಳಿವು ನಮ್ಮ ಕೈಯಲ್ಲಿದ್ದು ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಪರಿಸರ
ಸಂರಕ್ಷಣೆ ಬಗ್ಗೆ ಒಲವು ಮೂಡಿಸಲು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಚಿತ್ರಕಲಾ
ಸ್ಪರ್ಧೆ ಏರ್ಪಡಿಸಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದಿನ ಕಾರ್ಯಕ್ರಮ
ನಡೆಸಲಾಯಿತು ಎಂದು ತಿಳಿಸಿದರು.
World Environment Day ಮುಂದುವರೆದು ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾಗಿರುವ
ನಾವು ಶಿವಮೊಗ್ಗದ ಬಗ್ಗೆ ಹೆಮ್ಮೆ ಪಡುವ ಜೊತೆಗೆ ಇಲ್ಲಿನ ಪರಿಸರ ಸಂರಕ್ಷಣೆಗಾಗಿ ಶಿವಮೊಗ್ಗ
ಜಿಲ್ಲೆ ಬಯಲುಸೀಮೆ ಯಾಗದಂತೆ ತಡೆಯಲು ಮರ-ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಿ
ಸಂರಕ್ಷಿಸಲು ಎಲ್ಲರ ಸಹಕಾರ ಮುಖ್ಯ ಆ ದಿಸೆಯಲ್ಲಿ ಶಿವಮೊಗ್ಗ ನಮ್ಮ ಹೆಮ್ಮೆ – ಜಿಲ್ಲೆಯ
ಪರಿಸರ ಉಳಿಸಲು ಪರಿಸರಕ್ಕಾಗಿ ಎಲ್ಲಾ ಬೇಧ-ಭಾವಗಳನ್ನು ಬದಿಗಿಟ್ಟು ಒಟ್ಟಾಗಿ
ಪ್ರಯತ್ನಿಸಬೇಕೆಂದು ಕರೆ ನೀಡಿದರು.
World Environment Day ಶಿವಮೊಗ್ಗದಲ್ಲಿ ಗಮನ ಸೆಳೆದ ವಿಶಿಷ್ಟ ರೀತಿಯ “ಪರಿಸರ ದಿನಾಚರಣೆ”
Date:
