ಆಟೋ ಕಾಂಪ್ಲೆಕ್ಸ್ ನ ಮಾಲೀಕರ ಸಂಘದ ಕಚೇರಿಯಲ್ಲಿ ಅಧ್ಯಕ್ಷರಾದ ಚಿನ್ನಪ್ಪನವರ ಅಧ್ಯಕ್ಷತೆಯಲ್ಲಿ
ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಆಟೋ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಪ್ರಾಮಾಣಿಕ ಹಾಗೂ ನಿಷ್ಠಾವಂತ ಕಾರ್ಮಿಕರಗಳಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಚಿನ್ನಪ್ಪನವರು ಮಾತನಾಡುತ್ತ ಪ್ರತಿ ವರ್ಷ ತಮ್ಮ ವೃತ್ತಿ ಜೀವನದಲ್ಲಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನ ಗುರುತಿಸಿ ನಮ್ಮ ಸಂಸ್ಥೆಯಿಂದ ಗೌರವಿಸುತ್ತಾ ಬಂದಿದ್ದೇವೆ ಹಾಗೆ ಕಾರ್ಮಿಕರಿಗೆ ನ್ಯಾಯ ಬದ್ಧವಾಗಿ ಸಿಗುವ ಸರ್ಕಾರದ ಸೌಲಭ್ಯಗಳು ಸಕಾಲದಲ್ಲಿ ಸಿಗಲಿ ಎಂದು ನುಡಿದರು ಹಾಗೆ ಆಟೋ ಕಾಂಪ್ಲೆಕ್ಸ್ ನ ಹಲವಾರು ಸಮಸ್ಯೆಗಳಿಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದು ನುಡಿದರು. ಗೌರವಾಧ್ಯಕ್ಷರಾದ ದಯಾನಂದ್ರವರು ಉಪಾಧ್ಯಕ್ಷರಾದ ಜಾರ್ಜ್ ಕುರಿಯನ್. ಸಂಘದ ಕಾರ್ಯದರ್ಶಿಯಾದ ಎಂಬಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಪಿ ವೆಂಕಟೇಶ್, ಖಜಾಂಚಿ ವಿ ವೆಂಕಟೇಶ್ ಹಾಗೂ ಸದಸ್ಯರಾದ ಪ್ರಕಾಶ್ ಅಣ್ಣಪ್ಪ ,ಮಾಲ್ತೇಶ್ ರಮೇಶ್ ಬಾಬು ಅಂತೋನಿ ರಾಜ್ ಹಿದಾಯತ್ ಖಾನ್ ಉಪಸ್ಥಿತರಿದ್ದರು.
✒️
ಪ್ರಾಮಾಣಿಕವಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತರುವ ಕಾರ್ಮಿಕರನ್ನ ಗುರುತಿಸಿ, ಗೌರವಿಸುತ್ತಿದ್ದೇವೆ: ಚಿನ್ನಪ್ಪ
Date:
