Wednesday, April 22, 2026
Wednesday, April 22, 2026

Dr. Ambedkar ನಿರಾಶ್ರಿತರ ಕೇಂದ್ರದಲ್ಲಿ ಸೌರಮಾನ ಯುಗಾದಿ ಮತ್ತು ಡಾ.ಅಂಬೇಡ್ಕರ್ ದಿನಾಚರಣೆ

Date:

Dr. Ambedkar ಸೌರಮಾನ ಯುಗಾದಿ ಹಾಗೂ ಅಂಬೇಡ್ಕರ್ ಜಯಂತಿ ಪ್ರಯುಕ್ತ, ನಿರಾಶ್ರಿತರ ಕೇಂದ್ರದಲ್ಲಿ ಸಾಂತ್ವನ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಕಲಗೋಡ ರತ್ನಾಕರ್ ಹಾಗೂ ರತ್ನಾಕುಮಾರಿ ಅವರು ಗಿಡ ನೆಡುವ ಮೂಲಕ ಉದ್ಘಾಟಿಸಿದರು. ನಂತರ ಸಮಿತಿಯ ಅಧ್ಯಕ್ಷರಾದ ಕಲಾವಿದ ಮತ್ತು ಕಲಗೋಡ ರತ್ನಾಕರ್ ಅವರು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶ್ರೀ ನಾರಾಯಣ ಗುರು ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರತ್ನಾಕರ್ ಅವರು ನಿರಾಶ್ರಿತರ ಕೇಂದ್ರದ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಎನ್.ಡಿ. ಸತೀಶ್ ಅವರು ನಿರಾಶ್ರಿತರಿಗೆ ಸಾಂತ್ವನದ ಮಾತುಗಳ ಮೂಲಕ ಧೈರ್ಯ ತುಂಬಿದರು. ಪರಿಸರ ಕಾರ್ಯಕರ್ತ ತ್ಯಾಗರಾಜ್ ಅವರು ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕಿರು ಪರಿಚಯ ನೀಡಿದರು.

ಭದ್ರಾವತಿ ವಾಸು ಮತ್ತು ತಂಡದವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಿಗೆ ಶ್ರೀ ನಾರಾಯಣ ಗುರು ಅವರ ಪುಸ್ತಕಗಳನ್ನು ವಿತರಿಸಲಾಯಿತು. ಜೊತೆಗೆ ನಿರಾಶ್ರಿತರಿಗೆ ಹಣ್ಣುಗಳನ್ನು ಹಂಚಲಾಯಿತು.

Dr. Ambedkar ಕಾರ್ಯಕ್ರಮದ ಅಂಗವಾಗಿ ಸಮಿತಿಯ ಅಧ್ಯಕ್ಷರು ಸಹ ಗಾಯನ ಮಾಡುವ ಮೂಲಕ ನಿರಾಶ್ರಿತರಿಗೆ ಮನೋರಂಜನೆ ನೀಡಿದರು.

ಈ ಕಾರ್ಯಕ್ರಮದ ಯಶಸ್ಸಿಗೆ ಗೌರವಧ್ಯಕ್ಷರು ಭದ್ರಾವತಿ ವಾಸುದೇವನ್, ಉಪಾಧ್ಯಕ್ಷರು ಶಿವಾನಂದ,ಪ್ರಧಾನ ಕಾರ್ಯದರ್ಶಿ ಕೆ. ಶಿವಕುಮಾರ್,ಖಜಾಂಚಿ ಪ್ರಕಾಶ ಎ,ಸಂಘಟನಾ ಕಾರ್ಯದರ್ಶಿ ಕನಕರಾಜು, ಸಹ ಕಾರ್ಯದರ್ಶಿ ಕುಮಾರ್, ಸುಬ್ರಮಣ್ಯ,ನಿರ್ದೇಶಕರುಗಳಾದ ತಂಗಪ್ಪನ್,ಅನಿಲ್, ಮುರುಳಿಧರನ್,ಕೆ. ರಾಘವೇಂದ್ರ ಸೇರಿದಂತೆ ಎಲ್ಲಾ ಸದಸ್ಯರ ಸಹಕಾರ ಪ್ರಮುಖವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Chennasappa ಪೆಹಲ್ಗಾಮ್ ದುರಂತ. ಹುತಾತ್ಮ ಮಂಜುನಾಥ್ ಅವರನ್ನ ಸ್ಮರಿಸಿ, ಪ್ರಣಾಮ ಸಲ್ಲಿಸಿದ ಶಾಸಕ‌ ಚೆನ್ನಿ

S.N. Chennasappa ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ...

CM Siddharamaiah ಮಾನವನಿಂದ ಪ್ರಕೃತಿಯ ಮೇಲಿನ ದಬ್ಬಾಳಿಕೆ ನಿಲ್ಲಬೇಕು- ಮುಖ್ಯಮಂತ್ರಿ ಸಿದ್ಧರಾಮಯ್ಯ

CM Siddharamaiah ಸಕಲ ಜೀವರಾಶಿಗಳಿಗೂ ವಾಸಿಸಲು ಯೋಗ್ಯವಿರುವ ಏಕೈಕ ಗ್ರಹ ಭೂಮಿ....

Shivamogga Rangayana ಏಪ್ರಿಲ್ 25 & 26 ರಂದು “ಸ್ವಾತಂತ್ರ್ಯದ ಓಟ” , ಶಿವಮೊಗ್ಗದ ರಂಗಾಯಣದಲ್ಲಿ ನಾಟಕ ಪ್ರದರ್ಶನ

Shivamogga Rangayana ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕ...