RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ
ಆರ್ ಎಂ ಮಂಜುನಾಥ್ ಗೌಡ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಪ್ರಕರಣ ವಿವರಿಸಿ
ಆಕ್ರೋಶ ವ್ಯಕ್ತಪಡಿಸಿದ ಆರ್ ಎಂ ಮಂಜುನಾಥ್ ಗೌಡರು
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದುರಂತ ನಡೆದ ಸ್ಥಳಕ್ಕೆ ನಾನು ಕೂಡ ಬೇಟಿ ನೀಡಿದ್ದೇನೆ
ಅಂದು ನಾನು ಹೇಳಿದ್ದೇನೆ ಇದು ತಾಂತ್ರಿಕ ದೋಷದಿಂದ ಆದಂತಹ ಎಡವಟ್ಟು
ಇದಕ್ಕೆ ಪಿ ಡಬ್ಲ್ಯು ಡಿ ಎಂಜಿನಿಯರಿಗಳೆ ನೇರ ಹೊಣೆ
ತಾಂತ್ರಿಕವಾಗಿ ಸ್ಥಳವನ್ನು ಪರಿಶೀಲನೆ ಮಾಡದೆ ಇರುವುದು ಘಟನೆಗೆ ಕಾರಣ
ಈ ಘಟನೆಗೆ ಕಾರಣವಾಗಿದ್ದು ಏನು ಎನ್ನುವುದರ ತನಿಖೆ ಸಂಗಡ ಕಾಮಗಾರಿ ಕೆಲಸ ಕೂಡ ಜೊತೆಗೆ ಮುಂದುವರೆಯಬೇಕು
ಇದರಲ್ಲಿ ಇಂಜಿನಿಯರ್ ಅವರ ಬೇಜವಾಬ್ದಾರಿತನ ಎದ್ದು ಕಾಣುತ್ತದೆ
ಮಹತ್ವದ ಕಾಮಗಾರಿ ನಡೆಯುವಾಗ ಇಂಜಿನಿಯರ್ ಗಳು ಸ್ಥಳದಲ್ಲಿ ಇರಲೇಬೇಕು
ಆದರೆ ಯಾಕೆ ಆ ಸಮಯದಲ್ಲಿ ಇಂಜಿನಿಯರ್ ಗಳು ಸ್ಥಳದಲ್ಲಿ ಇರಲಿಲ್ಲ?
ಆಗುಂಬೆ ಘಾಟಿಗಿಂತ ಸ್ವಲ್ಪ ಸುಲಭವಾಗಿ ಏರಬಹುದಾದ ಘಾಟಿ ಹುಲಿಕಲ್ ಘಾಟಿ
ಕಾರ್ಮಿಕರನ್ನ ಬಳಸಿಕೊಳ್ಳುವಾಗ ಬಹಳ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗಿತ್ತು
ಸಂಪೂರ್ಣವಾಗಿ ಇಂಜಿನಿಯರಿಂಗ್ ವಿಭಾಗದಲ್ಲಿ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ
ಸಣ್ಣ ಸಣ್ಣ ಕೇಸ್ಗಳಿಗೆ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳುವ ಪೊಲೀಸರು ಈ ಪ್ರಕರಣದಲ್ಲಿ ಯಾಕೆ ಎಫ್ಐಆರ್ ಮಾಡುತ್ತಿಲ್ಲ?
ಮೂರು ಜನ ಈಗಾಗಲೇ ಇದರಿಂದ ಸತ್ತಿದ್ದಾರೆ ಹಾಗೂ ಇಬ್ಬರಿಗೆ ಗಂಭೀರ ಗಾಯಗಳಾಗಿವೆ
ಹಾಗಾಗಿ ನಾನು ಶಿವಮೊಗ್ಗದ ಎಸ್ ಪಿ ಅವರಿಗೆ ಎಫ್ ಐ ಆರ್ ದಾಖಲಿಸುವಂತೆ ಮನವಿ ಮಾಡುತ್ತೇನೆ
RM Manjunath Gowda ಕಾರ್ಮಿಕ ಇಲಾಖೆ ಇದರಲ್ಲಿ ಮೌನವಹಿಸಿದೆ ಎಂಬ ಬಗ್ಗೆಯೂ ಕೂಡ ಯೋಚನೆ ಮಾಡಬೇಕು
ಅವರು ಕೂಡ ಅಸಂಘಟಿತ ಕಾರ್ಮಿಕರ ಸಾವಿನ ಬಗ್ಗೆ ದೂರನ್ನ ಸಲ್ಲಿಸಬಹುದಿತ್ತು
ಆದರೆ ಇದುವರೆಗೂ ಯಾರು ಕೂಡ ಅಲ್ಲಿಗೆ ಬಾರದಿದ್ದು ವಿಷಾಧಕರ
ಪೊಲೀಸ್ ಇಲಾಖೆ ಕಾರ್ಮಿಕ ಇಲಾಖೆ ಹಾಗೂ ಪಿಡಬ್ಲ್ಯೂ ಇಲಾಖೆ 3 ಇಲಾಖೆ ಕೂಡ ನಿರ್ಲಕ್ಷವಹಿಸಬಾರದು
ಕೂಡಲೇ ಈ ಪ್ರಕರಣದ ಬಗ್ಗೆ ದೂರು ದಾಖಲಾಗಿ ಎಫ್ ಐ ಆರ್ ಆಗಬೇಕು
ಇದರಿಂದ ಮುಂದೆ ಈ ರೀತಿಯ ಘಟನೆಗಳು ಆಗದಂತೆ ನೋಡಿಕೊಳ್ಳಬಹುದು
ಕಾರ್ಮಿಕ ಇಲಾಖೆಯವರು ಕೂಡ ಈ ಬಗ್ಗೆ ದೂರ ನೀಡಬಹುದು ಆದರೆ ಯಾಕೆ ಮುಂದೆ ಬರುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ ಎಂದು ಮಂಜುನಾಥ್ ಗೌಡರು
ಆಕ್ರೋಶ ವ್ಯಕ್ತಪಡಿಸಿದರು.
