Wednesday, April 8, 2026
Wednesday, April 8, 2026

ಖ್ಯಾತ ಗಾಯಕಿ ಶಿವಶ್ರೀ ತೇಜಸ್ವಿ ಸೂರ್ಯ ಅವರಿಂದ ವಿಶೇಷ ಗಾಯನ ಕಾರ್ಯಕ್ರಮ”ನಾಮಾಮೃತ”

Date:

ಈಕೆ ನಮ್ಮ ಕರ್ನಾಟಕದ ಸೊಸೆ . ಯುವ ನಾಯಕ , ಬೆಂಗಳೂರು ದಕ್ಷಿಣ ಕ್ಷೇತ್ರದ ಜನಾನುರಾಗಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಧರ್ಮಪತ್ನಿ .

ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಜಿ ಈಕೆ ಹಾಡಿದ ಎರಡು ಕನಸು ಕನ್ನಡ ಚಲನ ಚಿತ್ರದ “ ಪೂಜಿಸಲೆಂದೇ…. ಹೂಗಳ ತಂದೆ” ಗೀತೆಯನ್ನು ಪ್ರಶಂಸಿಸಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು !!! . ಅಂದೇ ಈ ಕಲಾವಿದೆಯ ಕಂಠ ಮಾಧುರ್ಯಕ್ಕೆ ದೇಶವೇ ಮಾರುಹೋಗಿತ್ತು !!! .

ಶ್ರೀಮತಿ ಶಿವಶ್ರೀ ತೇಜಸ್ವಿಸೂರ್ಯ (ಶಿವಶ್ರೀ ಸ್ಕಂದಪ್ರಸಾದ್) ಸಂಗೀತ ಮನೆತನದಲ್ಲಿ ಹುಟ್ಟಿ ಬೆಳೆದ ಕಲಾವಿದೆ . ಸಂಗೀತ ಮಾತ್ರವಲ್ಲದೇ ಭರತ ನೃತ್ಯದಲ್ಲೂ ಪ್ರವೀಣೆ . ಈಕೆಯ ಧ್ವನಿ ಮಾರ್ದವತೆಯನ್ನು ಮೆಚ್ಚಿ ಸಂಗೀತ ಮಾಂತ್ರಿಕ A R ರೆಹಮಾನ್ ಖ್ಯಾತ ಸಿನಿಮಾ ನಿರ್ದೇಶಕ ಮಣಿರತ್ನಂ ಅವರ “ಪೊನ್ನಿಯನ್ ಸೆಲ್ವನ್” ಚಿತ್ರದಲ್ಲಿ ಹಾಡಿಸಿದ್ದಾರೆ.

ಎಲ್ಲಾ ರೀತಿಯ ಸಂಗೀತವನ್ನೂ ಹಾಡುವ ಸಾಮರ್ಥ್ಯವಿರುವ ಈ ಕಲಾವಿದೆಯ ವಿಶೇಷ ಆಸಕ್ತಿ ಎಂದರೆ ಅದು ಭಕ್ತಿ ಸಂಗೀತ . ಭಜನೆ, ನಾಮಾವಳಿ, ದಾಸರ ಪದಗಳನ್ನು ಅಮೋಘವಾಗಿ ಹಾಡುವ ಶಿವಶ್ರೀ ತನ್ನ ಭಕ್ತಿಪೂರ್ಣ ಗಾಯನದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ .

ಇಂತಹ ಅಪರೂಪದ ಕಲಾವಿದೆಯ ಸಂಗೀತ ಕಾರ್ಯಕ್ರಮ “ನಾಮಾಮೃತ”ಪ್ರಪ್ರಥಮ ಬಾರಿಗೆ ಇದೇ ಗುರುವಾರ 9ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ .

ಶಿವಮೊಗ್ಗದ ಪ್ರಸಿದ್ಧ ಪಂಚತಾರ ಐಸ್ರೀಮ್ಮ್ಸ್ ಸಂಸ್ಥೆಯ ಮಾಲೀಕರಾದ ಶ್ರೀಯುತ ಪ್ರಕಾಶ್ ಪ್ರಭು ಅವರ ನೇತೃತ್ವದ ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್ ಆಯೋಜಿಸಿರುವ ಈ ಭಕ್ತಿ-ಭಾವದ ಸಂಗೀತಮಯ ಕಾರ್ಯಕ್ರಮಕ್ಕೆ ಸಿಹಿಮೊಗೆಯ ಸಂಗೀತ ರಸಿಕ ಮನಸ್ಸುಗಳಿಗೆ ಆತ್ಮೀಯ ಆಹ್ವಾನ 🙏

~ ವಿನಯ್ ಶಿವಮೊಗ್ಗ. ಸಂಚಾಲಕರು, – ದಿ. ಮಣೂರು ಗೋವಿಂದರಾಯ ಪ್ರಭು ಚಾರಿಟಬಲ್ ಟ್ರಸ್ಟ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...