Madhu Bangarappa ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದು ತೇರ್ಗಡೆಯಾದ ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ನಿರಂತರ ಪರಿಶ್ರಮ ಮತ್ತು ಛಲ ಇಂದು ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿದೆ. ನಿಮ್ಮ ಈ ಯಶಸ್ಸು ನಾಡಿನ ಲಕ್ಷಾಂತರ ಯುವಜನತೆಗೆ ಮಾದರಿಯಾಗಲಿ. ಸಮಾಜ ಸೇವೆಯ ನಿಮ್ಮ ಮುಂದಿನ ಪಯಣ ಅರ್ಥಪೂರ್ಣವಾಗಿರಲಿ ಎಂದು ಹಾರೈಸುತ್ತೇನೆ.
Madhu Bangarappa ಇನ್ನು, ಈ ಬಾರಿ ಯಶಸ್ಸು ಕಾಣದವರು ಎದೆಗುಂದಬೇಡಿ. ಸೋಲು ಗೆಲುವಿನ ಹಾದಿಯ ಒಂದು ಭಾಗವಷ್ಟೇ. ನಿಮ್ಮ ಪ್ರಯತ್ನ ಮತ್ತು ಆತ್ಮವಿಶ್ವಾಸದ ಮೇಲೆ ನಂಬಿಕೆಯಿಟ್ಟು ಮುಂದಿನ ಗುರಿಯತ್ತ ಸಾಗಿ. ಯಶಸ್ಸು ಖಂಡಿತ ನಿಮ್ಮದಾಗಲಿದೆ.
