B.Y. Raghavendra ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ 24 ಫೆಬ್ರವರಿ 2026 ರಂದು ನೂತನ ಪ್ರಧಾನಮಂತ್ರಿ ಕಚೇರಿ ‘ಸೇವಾ ತೀರ್ಥ’ದಲ್ಲಿ ಕೇಂದ್ರ ಸಚಿವ ಸಂಪುಟದ ಐತಿಹಾಸಿಕ ಮೊದಲ ಸಭೆ ನಡೆಯಿತು.
‘ಸೇವಾ ತೀರ್ಥ’ ಕೇವಲ ಒಂದು ಕಟ್ಟಡವಲ್ಲ, ಕರ್ತವ್ಯ, ಸೇವೆ ಮತ್ತು ಸಮರ್ಪಣಾ ಮನೋಭಾವದ ಮೇಲೆ ಆಧಾರಿತವಾದ ನವ ಭಾರತದ ನಾಗರಿಕ-ಕೇಂದ್ರಿತ ಆಡಳಿತ ಸಂಸ್ಕೃತಿಯ ಸಂಕೇತವಾಗಿದೆ.
ಇಲ್ಲಿ ತೆಗೆದುಕೊಳ್ಳಲಾಗುವ ಪ್ರತಿಯೊಂದು ನಿರ್ಧಾರವು 140 ಕೋಟಿ ದೇಶವಾಸಿಗಳಿಗೆ ಸೇವೆ ಸಲ್ಲಿಸುವ ಮನೋಭಾವ, ಸಾಂವಿಧಾನಿಕ ಮೌಲ್ಯಗಳು ಮತ್ತು ರಾಷ್ಟ್ರ ನಿರ್ಮಾಣದ ದೀರ್ಘಕಾಲೀನ ಗುರಿಗಳಿಂದ ಪ್ರೇರಿತವಾಗಿರುತ್ತದೆ.
B.Y. Raghavendra ವಿಕಸಿತ ಭಾರತ 2047 ರ ಸಂಕಲ್ಪದೊಂದಿಗೆ ನಡೆದ ಈ ಮೊದಲ ಸಭೆಯು ಭಾರತದ ಭವಿಷ್ಯವನ್ನು ರೂಪಿಸುವ ಐತಿಹಾಸಿಕ ಕ್ಷಣವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ತಮಗಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
