ಇತ್ತೀಚಿಗೆ ಶಿವಮೊಗ್ಗದ ಪ್ರಿಸ್ಕೂಲ್ ಆದ ಅಭ್ಯಾಸ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮುಖ್ಯ ಅತಿಥಿಯಾಗಿ ಶಿವಮೊಗ್ಗದ ಖ್ಯಾತ ಹಿರಿಯ ಮನೋವೈದ್ಯ ಡಾ.ಟಿ.ಅರವಿಂದ ಅವರು ಆಗಮಿಸಿದ್ದರು.
ಮಕ್ಕಳ ಬೆಳವಣಿಗೆ ವಿಚಾರವಾಗಿ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಪೋಷಕರಿಗೆ ಕಿವಿಮಾತುಗಳನ್ನ ಹೇಳಿದರು
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಆದರ್ಶಪ್ರಾಯವಾಗಿರಬೇಕು ಭಾಷೆ ನಡೆ-ನುಡಿ ಹಾಗೂ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತುವ ಕೆಲಸ ಮೊದಲಿನಿಂದಲೇ ಪೋಷಕರು ಮಾಡಬೇಕು.
ಅದೇ ರೀತಿ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ದೊಡ್ಡ ದೊಡ್ಡ ಪ್ರಾಜೆಕ್ಟ್ಸ್ ಮಾಡುವ ಬದಲು ಮಾನವೀಯತೆ ಕರುಣೆ ಸಹ ಬಾಳ್ವೆ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಿದರೆ ಮುಂದೆ ವಿಜ್ಞಾನ ಗಣಿತ ಹಾಗೂ ಯಾವುದೇ ವಿಷಯದಲ್ಲೂ ಕೂಡ ಪರಿಣಿತಿ ಹೊಂದಬಹುದು ಎಂದು ಡಾ.ಅರವಿಂದ್ ತಿಳಿಸಿದರು.
