Monday, February 23, 2026
Monday, February 23, 2026

DVS College of Arts, Science and Commerce ಈಗ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ : ಕೆ.ಎಸ್.ಶ್ರೀಕಾಂತ್

Date:

DVS College of Arts, Science and Commerce ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವಲ್ಲಿ ಜನರು ಹೆಚ್ಚಿನ ಆಸಕ್ತಿ ಹೊಂದಿದ್ದು, ಪ್ರತಿ ವರ್ಷ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತದೆ ಎಂದು ಕುವೆಂಪು ವಿವಿ ಪ್ರವಾಸೋದ್ಯಮ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಶ್ರೀಕಾಂತ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಸಮಾಜ ಶಾಸ್ತ್ರ ವಿಭಾಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಮತ್ತು ನಿರ್ವಹಣೆ ವಿಷಯ ಕುರಿತು ಮಾತನಾಡಿದರು.

ಪ್ರವಾಸಕ್ಕೆ ಹೊರಡುವ ವ್ಯಕ್ತಿಯು ಅನೇಕ ಅಂಶಗಳನ್ನು ಪರಿಗಣಿಸಿ ವರ್ಷದಲ್ಲಿ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಾನೆ. ಪ್ರವಾಸಿ ಸ್ಥಳದ ಮಾಹಿತಿ, ಊಟ ವಸತಿ ಸೌಲಭ್ಯ, ಪ್ರಯಾಣ ಮಾಡುವ ರಸ್ತೆ ಹೀಗೆ ಅನೇಕ ಅಂಶಗಳು ಪ್ರವಾಸಿ ಸ್ಥಳದ ಮಹತ್ವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಪ್ರವಾಸೋದ್ಯಮ ಎಂದರೆ ಅದೊಂದು ಆರ್ಥಿಕತೆಯ ಉದ್ಯಮ. ಈಗ ನಮ್ಮ ಭಾರತದಲ್ಲಿ ಸಣ್ಣ ಹಳ್ಳಿ, ಗುಡಿಸಲುಗಳಿಗೂ ತುಂಬಾ ಬೇಡಿಕೆ ಬರುವ ಸಾಧ್ಯತೆ ಇದೆ. ಏಕೆಂದರೆ ನಗರ ಜೀವನಕ್ಕೆ ಬೇಸತ್ತು ತಮ್ಮ ಆತ್ಮ ಸಂತೋಷಕ್ಕಾಗಿ ಪ್ರಕೃತಿಯ ಮಡಿಲಲ್ಲಿ ಇರುವ ಗುಡಿಸಲು, ಜಲಪಾತಗಳನ್ನು ನೋಡಿ ಜೀವನವನ್ನು ಕಳೆಯಲು ಬಯಸುತ್ತಾರೆ ಎಂದು ತಿಳಿಸಿದರು.

DVS College of Arts, Science and Commerce ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಿ.ಎಸ್.ಪರಮೇಶ್ ಮಾತನಾಡಿ, ಪ್ರವಾಸೋದ್ಯಮ ಎನ್ನುವುದು ಕೇವಲ ಸ್ಥಳದ ಭೇಟಿಯಲ್ಲ ನಮ್ಮ ದೃಶ್ಯಮಾಧ್ಯಮದಲ್ಲಿ ಸ್ಥಳವನ್ನು ವೀಕ್ಷಿಸುವುದಲ್ಲ. ಬದಲಾಗಿ ಸ್ಥಳದ ಹಿನ್ನೆಲೆ, ಸಂಸ್ಕೃತಿ, ಸ್ಥಳದ ಮೌಲ್ಯ, ಜನರ ಜೀವನಶೈಲಿಗಳನ್ನು ತಿಳಿದುಕೊಳ್ಳುವುದು ಮತ್ತು ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾಗಿಸುವ ವೇದಿಕೆಯೇ ಪ್ರವಾಸೋದ್ಯಮ ಆಗಿದೆ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಎಸ್.ಪವಿತ್ರಾ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

India Scouts and Guides ಶಿಕಾರಿಪುರದಲ್ಲಿ ಸ್ಕೌಟ್ & ಗೈಡ್ಸ್ ಸಂಸ್ಥಾಪಕರ ದಿನಾಚರಣೆ

India Scouts and Guides ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ...

Chamber of commerce shivamogga ಮೌಲ್ಯಾಧಾರಿತ ಸಮಾಜ ಸ್ಥಾಪನೆಯ ಗುರಿ ಬ್ರಹ್ಮಕುಮಾರಿ ಸಂಸ್ಥೆಯದ್ದಾಗಿದೆ- ಜಿ. ವಿಜಯ ಕುಮಾರ್

Chamber of commerce shivamogga ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ...

ಸ್ವಾಭಿಮಾನ ಮತ್ತು ಸಂಘಟನೆಯ ಮೂಲಕ ಮಾದಿಗ ಸಮಾಜ ಮುಂದೆ ಬರಬೇಕು-ಶಿವಾಜಿ

ಸ್ವಾಭಿಮಾನ ಮತ್ತು ಸಂಘಟನೆಯ ಮೂಲಕ ಮಾದಿಗ ಸಮಾಜ ಮುಂದೆ ಬರಬೇಕು, ಮಕ್ಕಳನ್ನು...