Monday, February 2, 2026
Monday, February 2, 2026

ಜ. 28ಕ್ಕೆ ಕೆಂಡದಾರ್ಚನೆ, ಕೃತಿ ಬಿಡುಗಡೆ ಕಾರ್ಯಕ್ರಮ

Date:

ಶಿವಮೊಗ್ಗ ನಗರದ ಗೆಟ್ಟೇನಹಳ್ಳಿ ರಸ್ತೆಯಕೆ.ಹೆಚ್.ಬಿ.ಪ್ರೆಸ್ ಕಾಲೋನಿಯಲ್ಲಿರುವ
ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಇಲ್ಲಿ ಮೂರನೇ ಕೆಂಡದಾರ್ಚನೆ ಕಾರ್ಯಕ್ರಮ ಜ. 28 ಬುಧವಾರದಂದು ಬೆಳಿಗ್ಗೆ 7 ಗಂಟೆಯಿಂದ ಗಂಗಾ ಪೂಜೆಯಿಂದ ಪ್ರಾರಂಭವಾಗಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಎಮ್ ಎನ್ ಸುಂದರರಾಜು, ಅಂದು ಬೆಳಗ್ಗೆ ದೊಡ್ಡಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ ಇದೆ. ಬೆಳಿಗ್ಗೆ 9.30ಕ್ಕೆ ಸಾವಿರ ಮಹಿಳೆಯರಿಂದ ಆರತಿ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ “ ಶ್ರೀ ದೊಡ್ಡಮ್ಮ ದೇವಿ ಕೆಂಡದಾರ್ಚನೆ” ಹಮ್ಮಿಕೊಳ್ಳಲಾಗಿದೆ.
ಕೆಂಡದಾರ್ಚನೆ ಸಂಬಂಧ 27 ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ದೇವಿ ಆರಾಧನಾ ಪೂಜೆ ನಂತರ ಚಂಡಿಕಾ ಬೀಜಾಕ್ಷರ ಹೋಮವಿದೆ ಎಂದರು.
ಬೆಳಿಗ್ಗೆ 8 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ನಂತರ ಬೆಳಿಗ್ಗೆ 11 ಗಂಟೆಗೆ ರಾಧಾ ಎಂ. ಸಿದ್ಧಪ್ಪಾಜಿ ಸಂಗ್ರಹಿಸಿರುವ ಶ್ರೀ ಸಿದ್ಧಪ್ಪಾಜಿಯವರ ನುಡಿಮುತ್ತುಗಳ ಸಂಗ್ರಹ “ತಾಯಿನುಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಶಾಂತಾರಾಮ ಪ್ರಭು, ನಿಟ್ಟೂರು ಇವರು ಆಗಮಿಸಲಿದ್ದಾರೆ. ಸಾಹಿತಿ ಎಂ.ಎನ್.ಸುಂದರ ರಾಜ್, ಉಪಸ್ಥಿತರಿರುತ್ತಾರೆ ಎಂದರು.
ಅಂದು ನಡೆಯುವ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಬಿ. ಶ್ರೀನಿವಾಸ ರೆಡ್ಡಿ, ಸಂಸ್ಥಾಪಕರು ರಮಣ ಮಹರ್ಷಿ ಆಶ್ರಮ, ಬೆಂಗಳೂರು, ಡಾ!! .ಪ್ರಸನ್ನ ಬಸವರಾಜಪ್ಪ, ಸರ್ಜಿಕಲ್ ಗ್ಯಾಸ್ಟ್ ಆಂಡೋಲಜಿಸ್ಟ್, ಮ್ಯಾಕ್ಸ್ ಆಸ್ಪತ್ರೆ, ಶಿವಮೊಗ್ಗ, ಡಿ.ಎಂ.ದೇವರಾಜ್, ಸಂಸ್ಥಾಪಕರು, ರಾಮಕೃಷ್ಣ ವಸತಿ ವಿದ್ಯಾಲಯ, ಎಂ.ಎಲ್.ಹಳ್ಳಿ, ವಾಸುದೇವ್, ಹಿರಿಯ ಭೂ ವಿಜ್ಞಾನಿಗಳು, ಬೆಂಗಳೂರು ಇವರಿಗೆ ಸನ್ಮಾನವಿದೆ. ಸಿದ್ಧಪ್ಪಾಜಿ, ದೇವಿ ಉಪಾಸಕರು, ಶಿವಮೊಗ್ಗ ಇವರು ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಅಂದು ಬೆಳಿಗ್ಗೆ 8 ಗಂಟೆಯಿಂದ ದೇವಿ ಭಜನಾ ಕಾರ್ಯಕ್ರಮದಲ್ಲಿ ಗಾಯತ್ರಿ ಭಜನಾ ಮಂಡಳಿ ಶಿವಮೊಗ್ಗ, ಗಾಯತ್ರಿ ಭಜನಾ ಮಂಡಳಿ ಹೊನ್ನಾಳಿ, ಸಿರಿ ಭಜನಾ ಮಂಡಳಿ, ರಾಜೇಂದ್ರ ನಗರ, ಶಿವಮೊಗ್ಗ, ವಿದ್ಯಾ ಭಜನಾ ಮಂಡಳಿ, ವಿದ್ಯಾನಗರ ಶಿವಮೊಗ್ಗ, ಮೊದಲಾದವರಿಂದ ಭಜನೆ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...