Monday, February 16, 2026
Monday, February 16, 2026

ಅಲ್ಲಿ “ಬಿಗ್ ಬಾಸ್” .”ಗಿಲ್ಲಿ “ಫುಲ್ ಪಾಸ್

Date:

“ಬಿಗ್ ಬಾಸ್ ” ನೋಡುತ್ತಿರುವವರು ಈವರೆಗೂ ಒಂದು ರೀತಿ ಇದೇನು ಮಾಧ್ಯಮ ಯಾವ ಲೆವೆಲ್ಲಿಗೆ ಇಳೀತು ಅಂತ ಅಂದುಕೊಂಡಿದ್ದು ಸಹಜ. ಈಗ ಖ್ಯಾತ ನಟ ಸುದೀಪ್ ನಡೆಸಿಕೊಟ್ಟ
” ಬಿಗ್ ಬಾಸ್ -12″
ಅದನ್ನೆಲ್ಲಾ ಹಿಂಡಿಹಾಕಿದೆ.
ಕಾರಣ ಇಷ್ಟೆ. ಇಲ್ಲಿಯವರೆಗೂ ರಿಯಾಲಿಟಿ ಶೋ ಗಳಲ್ಲಿ ಯಾರು ಗೆದ್ರೆ ಏನು ? ಎಂಬಂತೆ ಮೂಗುಮ್ಮಾಗಿದ್ದ ಪ್ರೇಕ್ಷಕ ವರ್ಗ ಈ ಹನ್ನೆರಡನೇ ಸಂಚಿಕೆಯನ್ನ ಎಂದಿಗಿಂತ ಆಸಕ್ತಿ,ಕುತೂಹಲಗಳಿಂದಲೇ ವೀಕ್ಷಿಸಿತು.

ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ವಾರದಿಂದ ವಾರಕ್ಕೆ ಪಾದರಸದಂತೆ ಆಟ ನಿರ್ವಹಿಸುವ ಓರ್ವ ಕಲಾವಿದ. ಮತ್ತು ಎರಡನೇಯದು ಅಣ ಕಲಾವಿದನ ಬ್ಯಾಗ್ರೌಂಡು. ಈ ಎರಡೂ ಅಂಶಗಳು ಗಿಲ್ಲಿ ನಟನ ಅದೃಷ್ಟ ಬರೆದಿವೆ ಎನ್ನಬಹುದು.
ಈಗಾಗಲೇ ಬೇರೆ ಬೇರೆ ಟೀವಿ ಶೋಗಳಲ್ಲಿ ಮಾಧ್ಯಮ ಮತ್ತು ಚಿತ್ರ ನಟರ ಗಮನ ಸೆಳಯುವಲ್ಲಿ “ಗಿಲ್ಲಿ ನಟ “
ಯಶಸ್ವಿಯಾಗಿದ್ದರು.
ಅದೊಂದು ಇಮೇಜೇ ಸೃಷ್ಟಿಯಾಗಿತ್ತು. ಜೊತೆಗೆ ಆತನ ಗ್ರಾಮೀಣ ಹಿನ್ನೆಲೆ ಮುಂಚಿತವಾಗೇ ಓಪನ್ ಸೀಕ್ರೆಟ್ ಆಗಿಬಿಟ್ಟಿತ್ತು. ನಾಲ್ವೆತ್ತೆಂಟು ಕೋಟಿಗೂ ಅಧಿಕ ಮತಗಳು ಸೆಳೆದನೆಂದರೆ ಅದೇ ಆತನ ಜನಪ್ರಿಯತೆಗೆ ಸಾಕ್ಷಿ.

ಈಗ ಐವತ್ತುಲಕ್ಷರೂಪಾಯಿ ಜೇಬಿಗಳಿಸಿದ್ದಲ್ಲದೇ ಸುದೀಪ್ ಮನಮೆಚ್ಚಿ ಹತ್ತು ಲಕ್ಷರೂಪಾಯಿ ನೀಡಿದ್ದಾರೆ. ಜೊತೆ ಒಂದು ಕಾರನ್ನೂ ಪ್ರಾಯೋಜಕರು ನೀಡಿದ್ದಾರೆ.
ಯಾರೂ ಹುಬ್ಬೇರಿಸಬೇಕಿಲ್ಲ. ಅದು ನಟನ ತಾಕತ್ತು.ಯೋಗ್ಯತೆಗೆ ಸಿಕ್ಕ ಪ್ರತಿಫಲ.

ಖ್ಯಾತ ಚಿತ್ರನಟ ಜಗ್ಗೇಶ್ ,ಗಿಲ್ಲಿ ಬಗ್ಗೆ ” ಮುಂದೊಂದು ದಿನ ನಿನಗೆ ಜೊತೇಲಿ ಒಬ್ಬ ಚತ್ರಿ ಹಿಡೀತಾನೆ. ಮತ್ತೆ ಸುತ್ತ ನಾಕುಜನ ಬಾಡಿಗಾರ್ಡ್ ಗಳು ಬರ್ತಾರೆ” ಅಂತ ಹೇಳಿದ ಮಾತು ಇಂತಹ ಗ್ರಾಮೀಣ ಪ್ರತಿಭೆಗೆ ಆಶೀರ್ವಾದ ಮಾಡಿ ಹೇಳಿದ ಮಾತು ಅತಿಶಯೊಕ್ತಿ ಅಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಫೆಬ್ರವರಿ 18. ಶಿವಮೊಗ್ಗದ ಬೊಮ್ಮನಕಟ್ಟೆ ಎ& ಬಿ ಬ್ಲಾಕ್ ಸುತ್ತಮುತ್ತ ವಿದ್ಯುತ್ ವ್ಯತ್ಯಯ

MESCOM 11 ಕೆವಿ ಮಾರ್ಗದ ನಿರ್ವಹಣಾ ಕೆಲಸವಿರುವುದರಿಂದ ಬೊಮ್ಮನಕಟ್ಟೆ ಎ ಮತ್ತು...

S.N. Channabasappa ಬ್ರಹ್ಮಕುಮಾರಿ ಈಶ್ವರೀಯ ವಿವಿ ಮೌಲ್ಯಾಧಾರಿತ ಜೀವನವನ್ನು ಉತ್ತೇಜಿಸುತ್ತಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ವಿಶ್ವಾದ್ಯಂತ ಆಧ್ಯಾತ್ಮಿಕ ಜಾಗೃತಿ,...

ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ವಿಚಾರಗೋಷ್ಠಿ ನಡೆಸಲು ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನ

2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ...