Thursday, March 19, 2026
Thursday, March 19, 2026

ಅಲ್ಲಿ “ಬಿಗ್ ಬಾಸ್” .”ಗಿಲ್ಲಿ “ಫುಲ್ ಪಾಸ್

Date:

“ಬಿಗ್ ಬಾಸ್ ” ನೋಡುತ್ತಿರುವವರು ಈವರೆಗೂ ಒಂದು ರೀತಿ ಇದೇನು ಮಾಧ್ಯಮ ಯಾವ ಲೆವೆಲ್ಲಿಗೆ ಇಳೀತು ಅಂತ ಅಂದುಕೊಂಡಿದ್ದು ಸಹಜ. ಈಗ ಖ್ಯಾತ ನಟ ಸುದೀಪ್ ನಡೆಸಿಕೊಟ್ಟ
” ಬಿಗ್ ಬಾಸ್ -12″
ಅದನ್ನೆಲ್ಲಾ ಹಿಂಡಿಹಾಕಿದೆ.
ಕಾರಣ ಇಷ್ಟೆ. ಇಲ್ಲಿಯವರೆಗೂ ರಿಯಾಲಿಟಿ ಶೋ ಗಳಲ್ಲಿ ಯಾರು ಗೆದ್ರೆ ಏನು ? ಎಂಬಂತೆ ಮೂಗುಮ್ಮಾಗಿದ್ದ ಪ್ರೇಕ್ಷಕ ವರ್ಗ ಈ ಹನ್ನೆರಡನೇ ಸಂಚಿಕೆಯನ್ನ ಎಂದಿಗಿಂತ ಆಸಕ್ತಿ,ಕುತೂಹಲಗಳಿಂದಲೇ ವೀಕ್ಷಿಸಿತು.

ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ವಾರದಿಂದ ವಾರಕ್ಕೆ ಪಾದರಸದಂತೆ ಆಟ ನಿರ್ವಹಿಸುವ ಓರ್ವ ಕಲಾವಿದ. ಮತ್ತು ಎರಡನೇಯದು ಅಣ ಕಲಾವಿದನ ಬ್ಯಾಗ್ರೌಂಡು. ಈ ಎರಡೂ ಅಂಶಗಳು ಗಿಲ್ಲಿ ನಟನ ಅದೃಷ್ಟ ಬರೆದಿವೆ ಎನ್ನಬಹುದು.
ಈಗಾಗಲೇ ಬೇರೆ ಬೇರೆ ಟೀವಿ ಶೋಗಳಲ್ಲಿ ಮಾಧ್ಯಮ ಮತ್ತು ಚಿತ್ರ ನಟರ ಗಮನ ಸೆಳಯುವಲ್ಲಿ “ಗಿಲ್ಲಿ ನಟ “
ಯಶಸ್ವಿಯಾಗಿದ್ದರು.
ಅದೊಂದು ಇಮೇಜೇ ಸೃಷ್ಟಿಯಾಗಿತ್ತು. ಜೊತೆಗೆ ಆತನ ಗ್ರಾಮೀಣ ಹಿನ್ನೆಲೆ ಮುಂಚಿತವಾಗೇ ಓಪನ್ ಸೀಕ್ರೆಟ್ ಆಗಿಬಿಟ್ಟಿತ್ತು. ನಾಲ್ವೆತ್ತೆಂಟು ಕೋಟಿಗೂ ಅಧಿಕ ಮತಗಳು ಸೆಳೆದನೆಂದರೆ ಅದೇ ಆತನ ಜನಪ್ರಿಯತೆಗೆ ಸಾಕ್ಷಿ.

ಈಗ ಐವತ್ತುಲಕ್ಷರೂಪಾಯಿ ಜೇಬಿಗಳಿಸಿದ್ದಲ್ಲದೇ ಸುದೀಪ್ ಮನಮೆಚ್ಚಿ ಹತ್ತು ಲಕ್ಷರೂಪಾಯಿ ನೀಡಿದ್ದಾರೆ. ಜೊತೆ ಒಂದು ಕಾರನ್ನೂ ಪ್ರಾಯೋಜಕರು ನೀಡಿದ್ದಾರೆ.
ಯಾರೂ ಹುಬ್ಬೇರಿಸಬೇಕಿಲ್ಲ. ಅದು ನಟನ ತಾಕತ್ತು.ಯೋಗ್ಯತೆಗೆ ಸಿಕ್ಕ ಪ್ರತಿಫಲ.

ಖ್ಯಾತ ಚಿತ್ರನಟ ಜಗ್ಗೇಶ್ ,ಗಿಲ್ಲಿ ಬಗ್ಗೆ ” ಮುಂದೊಂದು ದಿನ ನಿನಗೆ ಜೊತೇಲಿ ಒಬ್ಬ ಚತ್ರಿ ಹಿಡೀತಾನೆ. ಮತ್ತೆ ಸುತ್ತ ನಾಕುಜನ ಬಾಡಿಗಾರ್ಡ್ ಗಳು ಬರ್ತಾರೆ” ಅಂತ ಹೇಳಿದ ಮಾತು ಇಂತಹ ಗ್ರಾಮೀಣ ಪ್ರತಿಭೆಗೆ ಆಶೀರ್ವಾದ ಮಾಡಿ ಹೇಳಿದ ಮಾತು ಅತಿಶಯೊಕ್ತಿ ಅಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...