Sunday, August 2, 2026
Sunday, August 2, 2026

K.S. Eshwarappa ಕಾರ್ತೀಕ ದೀಪ ಬೆಳಗಲು ಮದ್ರಾಸ್ ಕೋರ್ಟ್ ಅನುಮತಿ. ಸಂತಸ ಪಡುವ ವಿಚಾರ- ಕೆ.ಎಸ್.ಈಶ್ವರಪ್ಪ

Date:

K.S. Eshwarappa ಮದುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿರುವುದು ನನಗೆ ಸಂತಸ ತಂದಿದೆ. ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ತಮಿಳುನಾಡು ದೇಗುಲದಲ್ಲಿ ದೀಪಸ್ತಂಭಗಳಲ್ಲಿ ದೀಪ ಬೆಳಗುವ ವಿವಾದ ಕುರಿತು ಅನುಮತಿಯುಳ್ಳ ತೀರ್ಪು ಮದ್ರಾಸು ನ್ಯಾಯಾಲದಿಂದ ಹೊರಬಿದ್ದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.

ಈ ಪವಿತ್ರ ಹಿಂದೂ ಶ್ರದ್ಧಾಕೇಂದ್ರಕ್ಕೆ ಇಂದೇ ಬೇಟಿ ನೀಡುವ ಅವಕಾಶ ಲಭಿಸಿದ್ದು ನಮ್ಮ ಸೌಭಾಗ್ಯ. ಹಿಂದೂ ವಿರೋಧಿ ಮನಃಸ್ಥಿತಿಯ ತಮಿಳುನಾಡು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಅಲ್ಲಿ ಹಿಂದೂಗಳು ಕಾರ್ತಿಕ ದೀಪೋತ್ಸವ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದವು ಇತ್ತೀಚೆಗೆ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರ ಏಕಸದಸ್ಯ ನ್ಯಾಯ ಪೀಠ ತಮಿಳುನಾಡು ಸರ್ಕಾರ ಮತ್ತು ವಕ್ಫ್ ಬೋರ್ಡಿನ ಅರ್ಜಿ ತಿರಸ್ಕರಿಸಿ ಹಿಂದೂಗಳಿಗೆ ದೀಪ ಬೆಳಗಿಸಲು ಅವಕಾಶ ನೀಡಿದ್ದರು ಆದರೆ ಈ ತೀರ್ಪಿನ ವಿರುದ್ಧ ಹೈಕೋರ್ಟಿನ ಮದುರೈ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಆಗಿತ್ತು. K.S. Eshwarappa ಇಂದು ಮಾನ್ಯ ಉಚ್ಚ ನ್ಯಾಯಾಲಯವೂ ಸಹಾ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಈ ಮೊದಲು ತೀರ್ಪು ನೀಡಿದ್ದ ಜಸ್ಟೀಸ್ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ತಮಿಳುನಾಡು ಸರ್ಕಾರ ಮತ್ತು ಹಿಂದೂ ವಿರೋಧಿಗಳು ಸಜ್ಜಾಗಿದ್ದರು ಇದಕ್ಕೆ 50 ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದರು, ಸಹಿ ಹಾಕಿದವರಲ್ಲಿ ಕರ್ನಾಟಕದ ಮೂರು ಸಂಸದರೂ ಸೇರಿದ್ದಾರೆ ಎಂಬುದು ಬೇಸರದ ಸಂಗತಿ. ಇಂದು ಮಾನ್ಯ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿಂದೂ ವಿರೋಧಿ ಮನಃಸ್ಥಿತಿಗಳ ಬಾಯಿ ಮುಚ್ಚಿಸಿದೆ. ಸತ್ಯಕ್ಕೆ, ಹಿಂದುತ್ವಕ್ಕೆ ಮತ್ತೊಮ್ಮೆ ಜಯವಾಗಿದೆ ಎಂದು ರಾಜ್ಯದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...