ಬಡವರಿಗೆ, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುತ್ತಾ ನೊಂದವರ ಬಾಳಿನಲ್ಲಿ ಬೆಳಕಾಗುತ್ತಿರುವ ಕೊಡುಗೈ ದಾನಿ ಯುವ ನಾಯಕ ಹರೀಶ್ ನಾಯ್ಕ್ ಮತ್ತೆ ನೊಂದ ಜೀವಕ್ಕೆ ಆಸರೆಯಾಗಿದ್ದಾರೆ.
ಕೈ ಕಾಲು ಬುದ್ಧಿ ಶಕ್ತಿ ಇವನ್ನೆಲ್ಲ ಕೊಟ್ಟು ಪರೀಕ್ಷೆ ಮಾಡ್ಲಿ. ಆದರೆ, ಎಲ್ಲವನ್ನು ಕಿತ್ಕೊಂಡು, ಒಂದು ಕಡೆ ಬದುಕೋಕೆ ಆಗದೆ, ಇನ್ನೊಂದು ಕಡೆ ಸಾಯಕ್ಕು ಆಗದೆ ಇಂತಹ ಜೀವನ ಕೊಟ್ಟು, ಜಗತ್ತನ್ನು ಫೇಸ್ ಮಾಡು ಜೀವನ ನಡೆಸು ಅಂದರೆ ಹೇಗಾಗುತ್ತೆ ? ಎಂದು ಪ್ರಶ್ನಿಸಿ, ಇಲ್ಲಿ ವಯಸ್ಸಾದ ಜೀವಕ್ಕೆ ಆಸರೆಯಾಗಿದ್ದಾರೆ ಯುವ ನಾಯಕ ಹರೀಶ್ ನಾಯ್ಕ್.
ಶಿವಮೊಗ್ಗದ ಇಂದಿರಾ ಕಾಲೋನಿ ಮಲವಗೊಪ್ಪ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಸೂರಿಲ್ಲದೇ ನಡೆದಾಡಲು ಸಹ ಪರದಾಡುತ್ತಿದ್ದ ನಾಗರಾಜ್ ಎಂಬುವವರಿಗೆ, ಸೂರು ನೀಡಿ, ಜೊತೆಗೆ ಓಡಾಡಲು, ಮೂರು ಚಕ್ರದ ಸೈಕಲ್ ನೀಡಿ ಉಪಚರಿಸಿದ್ದಾರೆ. ಸಮಾಜ ಸೇವಕ ಯುವ ನಾಯಕ ಹರೀಶ್ ನಾಯ್ಕ್ ನೊಂದ ಜೀವಕ್ಕೆ ಆಸರೆಯಾಗಿ, ಸಂಚರಿಸಲು ಮೂರು ಚಕ್ರದ ಸೈಕಲ್ ನೀಡಿ ಸಹಾಯಹಸ್ತ ಚಾಚಿದ್ದಾರೆ. ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ಶಶಿಕುಮಾರ್ ನಾಯ್ಕ್. ಕೆಂಚಪ್ಪ ರಘು ಹೇಮತ್ ಶಿವು ಸಿದ್ದು ಉಮೇಶ್ ಈಶಣ್ಣ ಗ್ರಾಮಸ್ಥರು ಉಪಸ್ಥಿತರಿದ್ದರು.
