Wednesday, January 21, 2026
Wednesday, January 21, 2026

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Date:

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ ಬಿರಾದರರವರು ಭೌತಶಾಸ್ತ್ರ ವಿಷಯದಲ್ಲಿ ಡಾ. ಚಂದ್ರಶೇಖರ ಎಂ.ಎನ್. ಮತ್ತು ಪ್ರೋ. ದೇವಿದಾಸ್ ಜಿ.ಬಿ ಅವರ ಮಾರ್ಗದರ್ಶನದಲ್ಲಿ ಸಂಶೋಧಿಸಿದ “ಸಿಂಥೇಸಿಸ್ ಆಂಡ್ ಕ್ಯಾರೇಕ್ಟರೈಜೇಷನ್ ಆಫ್ ಹ್ಯವಿ ಮೆಟಲ್ ಆಕ್ಸೈಡ್ ಡೋಪ್ಡ್ ಬೋರೇಟ್ ಗ್ಲಾಸೆಸ್ ಫಾರ್ ರೇಡಿಯೇಷನ್ ಶೀಲ್ಡಿಂಗ್ ಅಪ್ಲಿಕೇಷನ್” ಎಂಬ ಪ್ರಬಂಧಕ್ಕೆ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯವು ಪಿಹೆಚ್‌ಡಿ ನೀಡಿ ಗೌರವಿಸಿದೆ.

ಇವರು ತಮ್ಮ ಪ್ರಬಂಧದಲ್ಲಿ ಕಿರಣ ರಕ್ಷಣೆಗೆ ಸೂಕ್ತವಾದ ನವೀನ ಬೊರೇಟ್ ಗ್ಲಾಸ್ ವಸ್ತುಗಳ ಅಭಿವೃದ್ಧಿ ಮತ್ತು ಅವುಗಳ ಗುಣಲಕ್ಷಣಗಳನ್ನು ಸಂಶೋಧಿಸಿದ್ದಾರೆ. ಈ ಅಧ್ಯಯನವು ಕಿರಣ ರಕ್ಷಣಾ ವಸ್ತುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ವಿಷಯದಲ್ಲದಿ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ.

ಭವಿಷ್ಯದಲ್ಲಿ ಯಂತ್ರಗಳು, ವೈದ್ಯಕೀಯ ಉಪಕರಣಗಳು ಮತ್ತು ಇತರ ರೇಡಿಯೇಷನ್ ಅಪ್ಲಿಕೇಶನ್‌ಗಳಿಗೆ ಬಳಸಬಹುದಾದ ಶಿಲ್ಡಿಂಗ್ ವಸ್ತುಗಳ ಅಭಿವೃದ್ಧಿಗೆ ದಾರಿತೋರಬಹುದೆಂದು ಶ್ರೀಕಾಂತ ಬಿರಾದರ ತಿಳಿಸಿದ್ದಾರೆ.

Kuvempu University ಶ್ರೀಕಾಂತ ಬಿರಾದರರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ, ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಲು ಅಭಿನಂದಿಸಿದ್ದಾರೆ. ಸಂಶೋಧನೆಗೆ ಸಹಕರಿಸಿದ ಗುರುಗಳು, ಕಾಲೇಜು ಮತ್ತು ಮನೆಯವರ ಬೆಂಬಲಕ್ಕೆ ಶ್ರೀಕಾಂತ ಬಿರಾದರ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಶಿವಮೊಗ್ಗ :ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ನಗರ ಉಪವಿಭಾಗ -3 ಕಛೇರಿಯಲ್ಲಿ...

S.N.Chennabasappa ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ ವಚನ ಅಳವಡಿಸಿಕೊಳ್ಳಬೇಕು –ಎಸ್.ಎನ್. ಚನ್ನಬಸಪ್ಪ

S.N.Chennabasappa ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿಜಶರಣರ...

Klive Special Article ದಾಖಲೆ ನಿರ್ಮಿಸಿದ ವೀಣೆಯ ಝೇಂಕಾರ

Klive Special Article ಶಿವಮೊಗ್ಗ ನಿಜವಾಗಿಯೂ ಸಾಂಸ್ಕೃತಿಕವಾಗಿ ಶ್ರೀಮಂತವಾದ ಊರು....

ಜ.24 ರಿಂದ ಮಲೆನಾಡು ಕರಕುಶಲ ಉತ್ಸವ – ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ : ಹೇಮಂತ್ ಎನ್.

ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ...