Sunday, August 2, 2026
Sunday, August 2, 2026

IMA KARNATAKA ಸ್ಟೆಥಾಸ್ಕೋಪ್ ಹಿಡಿದ‌ ಕೈ ,ಕವನ ಬರೆದಾಗ…

Date:

IMA KARNATAKA ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಕನ್ನಡ ಪುಸ್ತಕಗಳನ್ನು ರದ್ದಿಗೆ ಕೊಡದಂತೆ ಆಗದಿರಲಿ. ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕವಯಿತ್ರಿ, ಸಾಹಿತಿ ಸವಿತಾ ನಾಗಭೂಷಣ ಹೇಳಿದರು.

ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ವಿಶೇಷ ಕವಿಗೋಷ್ಠಿಯಲ್ಲಿ ಮಾತನಾಡಿ, ವೈದ್ಯರಾದವರು ಕವನ ರಚನೆಯಲ್ಲಿ ಇಷ್ಟು ತೊಡಗಿಸಿಕೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.

ಪದ್ಯ, ಕವಿತೆ ರಚನೆಗೆ ಇಂತಹ ವೃತ್ತಿ ಎಂಬುದಿಲ್ಲ. ಸೂಕ್ಷ್ಮ ಮನಸ್ಸಿನವರು ಇರುವವರೆಗೂ ಕಾವ್ಯಗಳು ಹುಟ್ಟುತ್ತದೆ. ಕಾವ್ಯಗಳು ರಚನೆಯಾಗುವವರೆಗೂ ಬದುಕಿನಲ್ಲಿ ಮತ್ತು ವಿಶ್ವದಲ್ಲಿ ಶಾಂತಿ ನೆಲೆಸಿರುತ್ತದೆ. ಕವಿತೆಗಳಿಗೆ ಪ್ರಾಣ ಪ್ರತಿಷ್ಠಾಪನೆ ಮಾಡುವವನು ಓದುಗ. ಓದುಗನ ಹೃದಯಕ್ಕೆ ಕವಿತೆ ಸ್ಪಂದಿಸಿತೆಂದರೆ ಅದಕ್ಕೆ ಜೀವ ಬಂದಂತೆ ಎಂದರು.

ಕವಯಿತ್ರಿ, ಸಾಹಿತಿ ಸವಿತಾ ನಾಗಭೂಷಣ ಅವರು ಕಾವ್ಯರಚನೆಯ ಬಗ್ಗೆ, ಕನ್ನಡ ಭಾಷೆಯ ಉಳಿವಿನ ಬಗ್ಗೆ ಮಾತನಾಡಿದರು. ಡಾ. ಚಿತ್ರ ಶ್ರೀನಿವಾಸ್ ಪ್ರಾರ್ಥನೆ ನಡೆಸಿದರು. ಡಾ. ವಿನಯ ಶ್ರೀನಿವಾಸ ಅವರು ಕಾರ್ಯಕ್ರಮ ನಿರ್ವಹಿಸಿದರು.

IMA KARNATAKA ಡಾ. ಗುರುದತ್ತ.ಕೆ.ಎನ್., ಡಾ. ವೈ.ಜೆ.ಅನುಪಮ, ಡಾ. ಡೋ.ನ.ವೆಂಕಟೇಶ್, ಡಾ. ವಿಜಯಲಕ್ಷ್ಮೀ ರವೀಶ್, ಡಾ. ಕೌಸ್ತುಭ ಅರುಣ್, ಡಾ. ಭಾರತಿ.ಎಚ್.ಜಿ., ಡಾ. ಅರವಿಂದನ್, ಡಾ. ಶಾಂತಲಾ ಮತ್ತು ಡಾ. ಚಂದ್ರಕಾಂತ್.ಎಸ್.ಎಸ್ ಸ್ವರಚಿತ ಕವಿತೆಗಳನ್ನು ಓದಿದರು.

ಐಎಂಎ ಶಿವಮೊಗ್ಗದ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭಾ ಅರುಣ್ ಮತ್ತು ಇತರ ವೈದ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...