Thursday, June 18, 2026
Thursday, June 18, 2026

B.Y.Raghavendra ಸೀಎಂ ಕುರ್ಚಿ ಹಗ್ಗ ಜಗ್ಗಾಟದಲ್ಲಿ ರಾಜ್ಯದ ಅಭಿವೃದ್ಧಿ ಕುಸಿದಿದೆ. ಸಂಸದ ರಾಘವೇಂದ್ರ ಮಾತಿನ ಚಾಟಿ

Date:

B.Y.Raghavendra ಶಿವಮೊಗ್ಗದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಸಾರ್ವಜನಿಕರಿಗೆ ಒಂದು ಸಂದೇಶ ಕೊಡಬೇಕಿದೆ.
ಡಿಸಿಎಂ ಹೇಳ್ತಾರೆ ಹಿಂದೆ ಸಿಎಂ ಬದಲಾವಣೆ ಒಪ್ಪಂದ ಆಗಿದೆ ಅಂತ.ಆದರೆ ನಾನೇ ಐದು ವರ್ಷ ಸಿಎಂ ಅಂತ ಸಿದ್ದರಾಮಯ್ಯನವರು ಹೇಳ್ತಾರೆ.ಯಾರು ಎಷ್ಟೇ ವರ್ಷ ಇರಲಿ ಆದರೆ ನಿಮ್ಮ ಚರ್ಚೆಯಲ್ಲಿ ಅಭಿವೃದ್ದಿ ವಿಚಾರ ಪ್ರಸ್ತಾಪ ಆಗ್ತಿಲ್ಲ ಎಂದರು.

ನಿಮ್ಮ ಕುರ್ಚಿಯ ಹಗ್ಗಾಜಗ್ಗಾಟದಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ.ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭ ಆಗದೆ ರೈತರು ಬೀದಿಗೆ ಬಿದ್ದಿದ್ದಾರೆ.ಬೆಳೆಹಾನಿ ಪರಿಹಾರ ನೀಡಿಲ್ಲ, ರಸ್ತೆ ಗುಂಡಿಗಳು ಮುಚ್ಚುವ ಕೆಲಸ ಆಗಿಲ್ಲ.
ರಾಜ್ಯದ ಜನರು ನಿಮ್ಮನ್ನ ನೋಡಿ ನಗ್ತಾ ಇದ್ದಾರೆ ಎಂದು ಹೇಳಿದರು.

B.Y.Raghavendra ಏನೇ ಮಾಡಿಕೊಂಡರು ನಾಲ್ಕು ಗೋಡೆ ಮಧ್ಯೆ ಮಾತಾಡಿಕೊಂಡು ಆಡಳಿತದ ಕಡೆ ಗಮನ ನೀಡಿ.
ನೂರಕ್ಕೆ ನೂರು ಸಿಎಂ ಬದಲಾವಣೆ ಆಗುತ್ತೆ.
ಈಗ ಮತ್ತೆ ಮಾಧ್ಯಮದಲ್ಲಿ ಸಂಕ್ರಾತಿ ನಂತರ ಅಂತಾ ಬರ್ತಿದೆ.
ನಮಗೇನು ಯಾರು ಸಿಎಂ ಆದರೂ ರಾಜ್ಯಕ್ಕೆ ಉತ್ತಮ ಆಡಳಿತ ಕೊಡಲಿ ಅಂತ ಒತ್ತಾಯ ಮಾಡ್ತೇನೆ.
ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ.
ವಿಜಯೇಂದ್ರ ಅವರು ತಮ್ಮ ಪೂರ್ಣ ಅವಧಿವರೆಗೆ ಮುಂದುವರಿಯುತ್ತಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...