ಸಂಪಾದಕೀಯ
KLive Special Article ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆ ಬಗ್ಗೆ ವಿವಾದ ನಡೆಯುತ್ತಿದೆ. ಸನ್ಮಾನ್ಯ ಸಚಿವ ಪ್ರಿಯಾಂಕ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ತೆರೆದ ಪುಸ್ತಕವಾಗಿದೆ. ಪ್ರಸ್ತುತ ಅವರು ದೃಶ್ಯಮಾಧ್ಯಮದಲ್ಲಿ ಮಾತಾಡುವಾಗ ತಮ್ಮ ಅಭಿಪ್ರಾಯವನ್ನು ಮಗ್ಗುಲು ಬದಲಿಸುವಂತೆ ಹೇಳಿದ್ದಾರೆ. ಬಿಜೆಪಿ ನಾಯಕರ ಮಕ್ಕಳು ಗಣವೇಷ ಧರಿಸಿ, ದಂಡಧಾರಿಗಳಾಗಿದ್ದಾರೆಯೆ? ಎಂದು ಪ್ರಶ್ನಿಸಿದ್ದಾರೆ. ಅವರ ಮಾತಿಗೆ ಮೇಲ್ಮನೆ ವಿಪಕ್ಷನಾಯಕ ಮಾನ್ಯ ಚಲವಾದಿ ನಾರಾಯಣ ಸ್ವಾಮಿ ಅವರು ಖರ್ಗೆ ಅವರು,ಮಕ್ಕಳು ದಲಿತ ಸಂಘರ್ಷ ಸಮಿತಿಯ ಚಟುವಟಿಕೆಯಲ್ಲಿದ್ದಾರೆಯೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಇಂದಿನ ಸರ್ಕಾರದ ನಿರ್ಧಾರದ ಬಗ್ಗೆ ಒಳನೋಟ ಮುಖ್ಯ.
ಬಿಜೆಪಿ ಸರ್ಕಾರದ ಆಗಿನ ಆದೇಶವನ್ನೇ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಮಾಧ್ಯಮಗಳೊಂದಿಗೆ ಮಾತಾಡಿದ್ದಾರೆ.
ಈಗಾಗಲೇ ಆದೇಶವಿರುವದೇ ವಾಸ್ತವ. ಅದನ್ನ ಬಿಟ್ಟು ಯಾರೂ ಹೇಳಿಕೆಗಳನ್ನ ನೀಡುವುದು ಬೇಕಾಗಿರಲಿಲ್ಲ. ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ಎಷ್ಟು ಸರ್ಕಾರಿ ಸಿಬ್ಬಂದಿ ಮೇಲೆ ಕ್ರಮ ಜರುಗಿಸಲಾಗಿದೆ? ಈ ಬಗ್ಗೆ ಇಂದಿನ ಸರ್ಕಾರದಿಂದ ಒಂದು ಮಾಹಿತಿ ನೀಡಬೇಕಿತ್ತು. ಎಲ್ಲದನ್ನೂ ‘ಟಿಟ್ ಫಾರ್ ಟ್ಯಾಟ್ ‘ ಎನ್ನುವ ಎಳೆಯರ ಆಟವಾದಂತಾಗಿದೆ.
ಪ್ರಸ್ತುತ ಮಾಜಿಲೋಕಾಯುಕ್ತರಾಗಿರುವ ಮಾನ್ಯಶ್ರೀ ಸಂತೋಷ ಹೆಗಡೆ ಅವರು ಆರ್ ಎಸ್ ಎಸ್ ನಿಷೇಧ ಕ್ರಮಕೈಗೊಂಡರೆ ಅದು ಸರ್ಕಾರಕ್ಕೇ ತಿರುಗುಬಾಣವಾಗುತ್ತದೆ ಎಂದು ಧಾರವಾಡದಲ್ಲಿ ಸುದ್ದಿಗಾರರೊಂದಿಗೆ
ಮಾತಾಡಿದ್ದಾರೆ. ಅವರು ಹೀಗೆ ಹೇಳಬೇಕಾದರೆ ಆರ್ ಎಸ್ ಎಸ್ ಪರ ಹೇಳಿಕೆ ಎಂದು ಯಾರೂ ತೀರ್ಮಾನಿಸಲಾಗದು. ಏಕೆಂದರೆ
ಮಾಜಿ ನ್ಯಾಯಮೂರ್ತಿಗಳ ಹೇಳಿಕೆಯಲ್ಲಿ ಹುರುಳಿಲ್ಲ ಎನ್ನಲಾಗದು. ಮಾನ್ಯ ಮುಖ್ಯಮಂತ್ರಿಗಳೂ ನ್ಯಾಯಕೋವಿದರಾಗಿದ್ದಾರೆ. ಅವರೂ ಕೂಡ “ಅಸಿಧಾರಾ ಖಡ್ಗವ್ರತ” ಮಾಡಬೇಕಿದೆ.
ನನ್ನ ಮಿತ್ರರೊಬ್ಬರೊಂದಿಗೆ ಮಾತಾಡುವಾಗ ಒಂದು ಸಂಗತಿ ಹೊರಹೊಮ್ಮಿತು. ಸದ್ಯ ಆರ್ ಎಸ್ ಎಸ್ ನ ಗಣವೇಷ, ದಂಡಧಾರಿತ್ವ
ಸರ್ಕಾರದ ದಾಖಲೆಗಳಲ್ಲಿ ಅಧಿಕೃತ ಎಂದು ಇದೆಯೆ? ಅಥವಾ ಇದರ ದುರುಪಯೋಗವಾಗಿ ಅಹಿತಕರ ಘಟನೆ,ಅಶಾಂತಿ ಉಂಟಾಗಿದೆಯೆ? ಮುಂತಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.
ಸದ್ಯ ಜಾರಿಗೆ ತರುವಲ್ಲಿ ಒಂದು ಅವಕಾಶವನ್ನ, ಮುಂಜಾಗ್ರತೆ ವಹಿಸಲು ಸರ್ಕಾರಿ ಸಿಬ್ಬಂದಿಗಳಿಗೆ ವಾರ್ನಿಂಗ್ ಮಾದರಿ ಒಳಸುತ್ತೋಲೆ ಕಳಿಸಿದ್ದರೆ ಅದೊಂದು ಮಾನವೀಯ ಹಿನ್ನೆಲೆ ಇರುತ್ತಿತ್ತು. ಏಕೆಂದರೆ ಇಷ್ಟೂ ವರ್ಷಗಳು ಜಾಣಮೌನ ತಾಳಿ , ಧುತ್ತನೆ ಆರ್ ಎಸ್ ಎಸ್ ಶತಮಾನದ ಸನ್ನಿವೇಶದಲ್ಲಿ ತಕ್ಷಣ ಕೈಗೊಂಡ ಕ್ರಮ ಕಾನೂನು ರೀತ್ಯ ಸಾಧುವೆ. ಆದರೆ ಸರ್ಕಾರಿ ನೌಕರರು ಚಾಲನೆಯಲ್ಲಿರುವ ಸರ್ಕಾರದ ನೀತಿನಿಯಮಗಳನ್ನ , ಜನೋಪಯೋಗಿ ಯೋಜನೆಗಳನ್ನ ಜನತೆಗೆ ಸರ್ಕಾರದ ಧ್ವನಿಯಾಗಿಯೇ ಮುಟ್ಟಿಸಿರುತ್ತಾರೆ. ಆ ಒಂದು ಅಭಿಮಾನ ಸದ್ಯ ತಾಳಲೇ ಬೇಕು.
ಪ್ರಸ್ತುತ ಪಿಡಿಓ ಓರ್ವರನ್ನ ಅಮಾನತ್ತು ಮಾಡಿರುವುದು ಮಾನವೀಯ ನೆಲೆಯಲ್ಲಿ ಸರಿಯಾದ ಕ್ರಮವಲ್ಲ.
ಅಂಥವರಿಗೆ ಒಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿ, ಸಮಜಾಯಷಿ ಕೇಳಿದ್ದರೆ ಅದಕ್ಕೆ ರಾಜಕಿಯಬಣ್ಣ ಬರುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಒಂದು ಮುಚ್ಚಳಿಕೆ ಪಡೆದರೆ ಅದೊಂದು ಸರ್ಕಾರದ ಮಾದರಿ ಕ್ರಮವಾಗುತ್ತದೆ.
ಮತ್ತೂ ಒಂದು ಅಂಶವೆಂದರೆ ಎಬಿವಿಪಿ ಅಂತೆಯೇ ಎನ್ ಎಸ್ ಯು ಐ ಸಂಘಟನೆ ಕಾಲೇಜು ವಿದ್ಯಾರ್ಥಿಗಳ ಮಟ್ಟದಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ಅಂತಹ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಪ್ರತಿಭಟನೆ ಕೈಗೊಳ್ಳುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸುತ್ತೀರಿ? ಯುವಜನತೆಯ ಉರಿಗಣ್ಣಿಗೆ ಆಡಳಿತ ತುತ್ತಾಗುವುದಿಲ್ಲವೆ?. ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಉಪೇಕ್ಷೆ ಮಾಡುವಂತೆಯೇ ಇಲ್ಲ. ಅದು ಜೆ ಎನ್ ಯು ಇರಬಹುದು, ಅಸ್ಸಾಂ ಇರಬಹುದು ಕೊನೆಗೆ ನೇಪಾಳ ದೇಶದಂಥ ಸರ್ಕಾರ ಬದಲಿಸಿದ ಪ್ರಕ್ರಿಯೆ ಇರಬಹುದು.
ಯುವಶಕ್ತಿಯ ಯಾವಾಗ ಏನು ಮಾಡುತ್ತದೆ ಕಲ್ಪಿಸಲಸಾಧ್ಯ.
ಇಲ್ಲಿ ನನ್ನ ವಿಚಾರವೆಂದರೆ ಸರ್ಕಾರವನ್ನ ಅಧೀರಗೊಳಿಸುವುದಲ್ಲ. ಕೆಲವೊಮ್ಮೆ ಬಿಜೆಪಿಯ ಸರ್ಕಾರದ ಕೃತ್ಯವಿದ್ದಾಗ ಕೆಲವಕ್ಕೆ ಮಾತ್ರ ಕ್ರಮ. ಮತ್ತೆ ಕೆಲವಕ್ಕೆ ಜಾಣ ಮೌನ. ಬಿಜೆಪಿ ಸರ್ಕಾರವಿದ್ದಾಗ ಅವರೂ ಅಷ್ಟೆ ಕೆಲವಕ್ಕೆ ಕ್ರಮ ,ಕೆಲವಕ್ಕೆ ಜಾಣ
ಉಪೇಕ್ಷೆ . ಯಾಕೆ ಹೀಗೆ?.
KLive Special Article ಪ್ರತಿಯೊಂದು ಪಕ್ಷವೂ ಆಡಳಿತದಲ್ಲಿದ್ದಾಗ ವಿರೋಧಪಕ್ಷಗಳ ದೌರ್ಬಲ್ಯಗಳನ್ನ ಗುರಾಣಿ ಮಾಡಿಕೊಳ್ಳುವುದು ಸಾಮಾನ್ಯ.
ಈಗ ಅದೇ ಆಗುತ್ತಿದೆ. ಒಂದು ಕೋಮಿನ ಬಗ್ಗೆ ಉದಾರತೆ. ಮಿಕ್ಕಂತೆ
ಬಹುಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ. ಇದು ಆಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂದಾಗ
ಬಹು ಸಂಖ್ಯಾತ ಮತ್ತು ಅಲ್ಪ ಸಂಖ್ಯಾತರನ್ನ ಸಮದೃಷ್ಟಿಯಲ್ಲಿ ಕಾಣುವ ಕ್ರಮ ದಾಖಲಾಗಬೇಕು. ಕೇವಲ ರಾಜಕೀಯ ನೀತಿಯೇ ಆದರೆ ಅದು ಬಹುಕಾಲ ನಿಲ್ಲದು. ಪ್ರಜಾಪ್ರಭುತ್ವದಲ್ಲಿ ಕೇವಲ ತುಷ್ಡೀಕರಣವೊಂದೇ ಆಗಿರಬಾರದು.
ಬಹುಸಂಖ್ಯಾತರೂ ಕೂಡ ತೆರಿಗೆ ನೀಡುವ ಸಂಪನ್ಮೂಲ ಎಂಬ ಮನವರಿಕೆ ಇರಬೇಕು.
ಸದ್ಯ ಜಾರಿಗೆ ತರುವಲ್ಲಿ ಒಂದು ಅವಕಾಶವನ್ನ, ಮುಂಜಾಗ್ರತೆ ವಹಿಸಲು ಸರ್ಕಾರಿ ಸಿಬ್ಬಂದಿಗಳಿಗೆ
ವಾರ್ನಿಂಗ್ ಮಾದರಿ ಒಳಸುತ್ತೋಲೆ
ಕಳಿಸಿದ್ದರೆ.ಅದೊಂದು ಮಾನವೀಯ ಹಿನ್ನೆಲೆ ಇರುತ್ತಿತ್ತು. ಏಕೆಂದರೆ ಇಷ್ಟೂ ವರ್ಷಗಳು ಜಾಣಮೌನ ತಾಳಿ , ಧುತ್ತನೆ ಆರ್ ಎಸ್ ಎಸ್ ಶತಮಾನದ ಸನ್ನಿವೇಶದಲ್ಲಿ ತಕ್ಷಣ ಕೈಗೊಂಡ ಕ್ರಮ
ಕಾನೂನು ರೀತ್ಯ ಸಾಧುವೆ. ಆದರೆ
ಸರ್ಕಾರಿ ನೌಕರರು ಚಾಲನೆಯಲ್ಲಿರುವ
ಸರ್ಕಾರದ ನೀತಿನಿಯಮಗಳನ್ನ , ಜನೋಪಯೋಗಿ ಯೋಜನೆಗಳನ್ನ
ಜನತೆಗೆ ಸರ್ಕಾರದ ಧ್ವನಿಯಾಗಿಯೇ ಮುಟ್ಟಿಸಿರುತ್ತಾರೆ. ಆ ಒಂದು ಅಭಿಮಾನ ಸದ್ಯ ತಾಳಲೇ ಬೇಕು.
ಪ್ರಸ್ತುತ ಪಿಡಿಓ ಓರ್ವರನ್ನ ಅಮಾನತ್ತು ಮಾಡಿರುವುದು ಮಾನವೀಯ ನೆಲೆಯಲ್ಲಿ ಸರಿಯಾದ ಕ್ರಮವಲ್ಲ.
ಅಂಥವರಿಗೆ ಒಂದು ಎಚ್ಚರಿಕೆ ನೋಟೀಸ್ ಜಾರಿ ಮಾಡಿ, ಸಮಜಾಯಷಿ ಕೇಳಿದ್ದರೆ ಅದಕ್ಕೆ ರಾಜಕಿಯಬಣ್ಣ ಬರುತ್ತಿರಲಿಲ್ಲ.
ಇಂತಹ ಸಂದರ್ಭದಲ್ಲಿ ಒಂದು ಮುಚ್ಚಳಿಕೆ ಪಡೆದರೆ ಅದೊಂದು ಸರ್ಕಾರದ ಮಾದರಿ ಕ್ರಮವಾಗುತ್ತದೆ.
ಮತ್ತೂ ಒಂದು ಅಂಶವೆಂದರೆ ಎಬಿವಿಪಿ ಅಂತೆಯೇ ಎನ್ ಎಸ್ ಯು ಐ ಸಂಘಟನೆ ಕಾಲೇಜು ವಿದ್ಯಾರ್ಥಿಗಳ ಮಟ್ಟದಲ್ಲಿ ಈಗಾಗಲೇ ಪ್ರಚಲಿತದಲ್ಲಿದೆ. ಅಂತಹ ವಿದ್ಯಾರ್ಥಿ ಸಂಘಟನೆಗಳು ಕಾಲೇಜಿನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಪ್ರತಿಭಟನೆ ಕೈಗೊಳ್ಳುತ್ತವೆ. ಇವುಗಳನ್ನು ಹೇಗೆ ನಿಯಂತ್ರಿಸುತ್ತೀರಿ?
ಯುವಜನತೆಯ ಉರಿಗಣ್ಣಿಗೆ ಆಡಳಿತ ತುತ್ತಾಗುವುದಿಲ್ಲವೆ?. ವಿದ್ಯಾರ್ಥಿ ಸಂಘಟನೆಗಳ ಬಗ್ಗೆ ಉಪೇಕ್ಷೆ ಮಾಡುವಂತೆಯೇ ಇಲ್ಲ. ಅದು ಜೆ ಎನ್ ಯು ಇರಬಹುದು, ಅಸ್ಸಾಂ ಇರಬಹುದು ಕೊನೆಗೆ ನೇಪಾಳ ದೇಶದಂಥ ಸರ್ಕಾರ ಬದಲಿಸಿದ ಪ್ರಕ್ರಿಯೆ ಇರಬಹುದು.
ಯುವಶಕ್ತಿಯ ಯಾವಾಗ ಏನು ಮಾಡುತ್ತದೆ ಕಲ್ಪಿಸಲಸಾಧ್ಯ.
ಇಲ್ಲಿ ನನ್ನ ವಿಚಾರವೆಂದರೆ ಸರ್ಕಾರವನ್ನ ಅಧೀರಗೊಳಿಸುವುದಲ್ಲ.
ಕೆಲವೊಮ್ಮೆ ಬಿಜೆಪಿಯ ಸರ್ಕಾರದ ಕೃತ್ಯವಿದ್ದಾಗ ಕೆಲವಕ್ಕೆ ಮಾತ್ರ ಕ್ರಮ.
ಮತ್ತೆ ಕೆಲವಕ್ಕೆ ಜಾಣ ಮೌನ. ಬಿಜೆಪಿ ಸರ್ಕಾರವಿದ್ದಾಗ ಅವರೂ ಅಷ್ಟೆ ಕೆಲವಕ್ಕೆ ಕ್ರಮ ,ಕೆಲವಕ್ಕೆ ಜಾಣ
ಉಪೇಕ್ಷೆ . ಯಾಕೆ ಹೀಗೆ?.
ಪ್ರತಿಯೊಂದು ಪಕ್ಷವೂ ಆಡಳಿತದಲ್ಲಿದ್ದಾಗ ವಿರೋಧಪಕ್ಷಗಳ ದೌರ್ಬಲ್ಯಗಳನ್ನ ಗುರಾಣಿ ಮಾಡಿಕೊಳ್ಳುವುದು ಸಾಮಾನ್ಯ.
ಈಗ ಅದೇ ಆಗುತ್ತಿದೆ. ಒಂದು ಕೋಮಿನ ಬಗ್ಗೆ ಉದಾರತೆ. ಮಿಕ್ಕಂತೆ
ಬಹುಸಂಖ್ಯಾತರ ಬಗ್ಗೆ ನಿರ್ಲಕ್ಷ್ಯ.
ಇದು ಆಗಬಾರದು. ಸರ್ವಜನಾಂಗದ ಶಾಂತಿಯ ತೋಟ ಎಂದಾಗ
ಬಹು ಸಂಖ್ಯಾತ ಮತ್ತು ಅಲ್ಪ ಸಂಖ್ಯಾತರನ್ನ
ಸಮದೃಷ್ಟಿಯಲ್ಲಿ ಕಾಣುವ ಕ್ರಮ ದಾಖಲಾಗಬೇಕು. ಕೇವಲ ರಾಜಕೀಯ ನೀತಿಯೇ ಆದರೆ
ಅದು ಬಹುಕಾಲ ನಿಲ್ಲದು.
ಪ್ರಜಾಪ್ರಭುತ್ವದಲ್ಲಿ ಕೇವಲ ತುಷ್ಡೀಕರಣವೊಂದೇ ಆಗಿರಬಾರದು.
ಬಹುಸಂಖ್ಯಾತರೂ ಕೂಡ ತೆರಿಗೆ ನೀಡುವ
ಸಂಪನ್ಮೂಲ ಎಂಬ ಮನವರಿಕೆ ಇರಬೇಕು.
ಸದ್ಯ ಕಲಬುರ್ಗಿ ಜಿಲ್ಲಾಡಳಿತ ಕರೆದ ಶಾಂತಿ ಸಭೆ ಯಶಸ್ವಿಯಾಗಲಿಲ್ಲ. ಇಲ್ಲಿ ಸಭೆಗೆ ಬಂದವರೇ ಪರಸ್ಪರ ವಾಗ್ವಾದಮಾಡಿಕೊಂಡ ಹಗರಣ ವರದಿಯಾಗಿದೆ. ಹೈಕೊರ್ಟ್ ಸರ್ಕಾರದ ಕ್ರಮಕ್ಕೆ ಮದ್ಯಕಾಲೀನ ತಡೆ ನೀಡಿದೆ.
ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಸರ್ಕಾರ ಬಹಳ ಜಾಗರೂಕ ನಡೆ ತೋರಿಸಬೇಕಿದೆ.
ಬರಹ : ಡಾ.ಎನ್.ಸುಧೀಂದ್ರ
ಪ್ರಧಾನ ಸಂಪಾದಕರು
ಕೆ ಲೈವ್ ನ್ಯೂಸ್
