Tuesday, February 3, 2026
Tuesday, February 3, 2026

Dr. Besagarahalli Ramanna Foundation ಕುಪ್ಪಳಿಯಲ್ಲಿ ಸಾಹಿತ್ಯ ಕಮ್ಮಟ-೨೦೨೫. ಅರ್ಜಿ ಸಲ್ಲಿಕೆಗೆ ಕೊನೇ ದಿನ

Date:

Dr. Besagarahalli Ramanna Foundation ಡಾ. ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಜೊತೆಯಲ್ಲಿ ಆಯೋಜಿಸಿರುವ ‘ಸಾಹಿತ್ಯ ಕಮ್ಮಟ – ೨೦೨೫’ ಕ್ಕೆ ಅರ್ಜಿ ಸಲ್ಲಿಸಲು ಇಂದು ಕಡೆಯ ದಿನ. ಭಾಗವಹಿಸಲು ಇಚ್ಚಿಸುವ ಎಲ್ಲರಿಗೂ ಅರ್ಜಿ ಸಲ್ಲಿಸುವುದು ಕಡ್ಡಾಯ. ಆಯ್ಕೆಗೊಂಡವರಿಗೆ ಇಮೇಲ್ ಮೂಲಕ ತಿಳಿಸಲಾಗುವುದು.

ಈ ಬಾರಿ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಕುರಿತಾಗಿ ಚರ್ಚೆ, ಸಂವಾದಗಳು ನಡೆಯಲಿವೆ. ಹಿರಿಯರಾದ ಡಾ. ಕೆ.ವಿ. ನಾರಾಯಣ ಅವರು ಕಮ್ಮಟ ನಿರ್ದೇಶಕರಾಗಿದ್ದಾರೆ. ಜೊತೆಯಲ್ಲಿ ಓ ಎಲ್ ನಾಗಭೂಷಣಸ್ವಾಮಿ, ಕೆ.ವೈ. ನಾರಾಯಣಸ್ವಾಮಿ, ಕೆ. ಪುಟ್ಟಸ್ವಾಮಿ, ಮೇಟಿ ಮಲ್ಲಿಕಾರ್ಜುನ, ವಿಕ್ರಂ ವಿಸಾಜಿ, ಬಿ ಎಲ್ ರಾಜು, ಆರ್ ಶಿವಪ್ಪ, ಬಿ ಎಂ ಪುಟ್ಟಯ್ಯ, ಸಬಿತಾ ಬನ್ನಾಡಿ, ಗೀತಾ ವಸಂತ ಮುಂತಾದ ಬರಹಗಾರರು ಸಂವಾದಗಳನ್ನು ಮುನ್ನಡೆಸುವರು.

  • ಕುಪ್ಪಳಿಯಲ್ಲಿ ನವಂಬರ್ 14, 15, 16 ಮೂರು ದಿನಗಳ ಕಮ್ಮಟ ನಡೆಯಲಿದ್ದು. ಮೂರೂ ದಿನಗಳ ಕಾಲ ಭಾಗವಹಿಸುವಿಕೆ ಕಡ್ಡಾಯ.
  • ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಚಿತವಾದ ಊಟ ಮತ್ತು ಸರಳವಾದ ವಸತಿ ವ್ಯವಸ್ಥೆ ಇರುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
  • ಅರ್ಜಿಸಲ್ಲಿಸದೇ, ಆಯ್ಕೆಗೊಳ್ಳದೇ ನೇರ ಪ್ರವೇಶವಿಲ್ಲ.
  • 60 ಮಂದಿಗೆ ಮಾತ್ರ ಅವಕಾಶ. ಅದರಲ್ಲಿ 30 ಸೀಟುಗಳು ಹೆಣ್ಣುಮಕ್ಕಳಿಗೆ ಮೀಸಲು.

ಆಸಕ್ತರು ನಿಮ್ಮ‌ ಹೆಸರು, ವಯಸ್ಸು, ಉದ್ಯೋಗ, ವಿಳಾಸ ಮತ್ತು ಆಸಕ್ತಿಗಳ ವಿವರಗಳುಳ್ಳ ಅರ್ಜಿಯನ್ನು email ಮಾಡಬಹುದು. Email : drbrtrust@gmail.com

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...