Monday, February 2, 2026
Monday, February 2, 2026

Klive Special Article ನವರಾತ್ರಿಯ ಎಂಟನೇ ದಿನ, ದೇವಿಯ ಮಹಾಗೌರಿ ರೂಪಾರಾಧನೆ. “ಮಹಾಗೌರಿ ಶುಭಂ ದದ್ಯಾತ್”

Date:

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ

Klive Special Article ನವರಾತ್ರಿ(ಎಂಟನೆಯದಿನ)


ಶ್ರೀಮಹಾಗೌರಿ ಮಾತೆಯ ಆರಾಧನೆಯ ದಿನ….
ಇಂದು ಸಪ್ತಮಿಯಂದು ಆಹ್ವಾನಿಸಿದ ಶ್ರೀಸರಸ್ವತಿದೇವಿಯನ್ನು ಪೂಜಿಸುವ ದಿನವೂ ಆಗಿದೆ.
“”*
“ಶ್ವೇತೆ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ/
ಮಹಾಗೌರೀ ಶುಭಂ ದದ್ಯಾತ್ ಮಹಾದೇವ
ಪ್ರಮೋದದಾ//


ಇಂದು ನವರಾತ್ರಿಯ ಎಂಟನೆಯ ದಿವಸ.
ಇಂದು ದೇವಿಯ ಎಂಟನೆಯ ರೂಪವಾದ ಮಹಾ
ಗೌರಿಯ ಆರಾಧನೆಯ ದಿನ.
ಸರ್ವ ಸನ್ಮಂಗಳ ಕಾರಿಣಿಯಾದ ದೇವಿಯ ರೂಪ
ಮಹಾಗೌರಿಯ ಅವತಾರ ರೂಪ.
ಶ್ವೇತ ವರ್ಣದಿಂದ ಕಂಗೊಳಿಸುವ ಮಾತೆಯ ದೇಹವೆಲ್ಲಾಪ್ರಭೆಯಿಂದಹೊಳೆಯುವುದು.ನಂದಿವಾಹನರೂಢಳಾದ ದೇವಿಯು ಶಾಂತಿ ಮತ್ತು ಸಂತೋಷದ ಪ್ರತೀಕ.
ನಾಲ್ಕು ಭುಜಗಳನ್ನು ಹೊಂದಿರುವ ಮಾತೆ,ಅಭಯ ಹಸ್ತದಿಂದ ಭಕ್ತರನ್ನು ಹರಸುತ್ತಿದ್ದಾಳೆ.ಒಂದು ಕೈಯಲ್ಲಿ
ದುಷ್ಟಶಕ್ತಿಗಳನ್ನು ನಿಗ್ರಹಿಸಲು ತ್ರಿಶೂಲವನ್ನು ಹಿಡಿದಿರು
ತ್ತಾಳೆ.ಪಾರ್ವತೀದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು.ಶಿವನನ್ನು ಪಡೆಮಾಡುತ್ತಾಯುವುದು ಅವಳ ಗುರಿಯಾಗಿರುತ್ತದೆ.ನಾರದ ಮಹರ್ಷಿಗಳ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡುವರು.ಸುದೀರ್ಘತಪಸ್ಸನ್ನು ನೀರು ಆಹಾರವನ್ನೂ ತ್ಯಜಿಸುತ್ತಾಳೆ.
ಬಿಸಿಲಿನಿಂದ ಆಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುವುದು ಮತ್ತು ದೀರ್ಘಕಾಲ ತಪಸ್ಸನ್ನು ಮಾಡುತ್ತಾ ಕುಳಿತ ಕಾರಣ ಆಕೆಯ ಮುಂಬೈಗೆ ಧೂಳು ಮೆತ್ತಿಕೊಳ್ಳುತ್ತದೆ.
ಇವಳ ತಪಸ್ಸಿಗೆ ಸಂತುಷ್ಟನಾದ ಶಿವನು ಪಾರ್ವತಿಯ ಮೈಮೇಲಿನ ಕಪ್ಪುಬಣ್ಣ ಮತ್ತು ಇಷ್ಟು ದಿನಗಳ ಕಷ್ಟಗಳಪರಿಹಾರಕ್ಕಾಗಿ ಗಂಗಾಜಲವನ್ನು ಮೈಮೇಲೆ ಹರಿಸಿದ್ದರಿಂದ ಮೈಯೆಲ್ಲಾ ಕಾಂತಿಯಿಂದ ಹೊಳೆಯ
ತೊಡಗಿತು.
Klive Special Article ಆಕೆಯುಮಹಾಗೌರಿಯಾಗಿಹೊಸಜನ್ಮಎತ್ತಿದಳು.ಶಿವನು ಆಕೆಯ ಭಕ್ತಿಗೆ ಮೆಚ್ಚಿ ಅವಳ ಇಷ್ಟದ ಪ್ರಕಾರ ಆಕೆಯನ್ನು ವರಿಸಿದ.
ಆಶ್ವಯುಜ ಮಾಸದ ಶುಕ್ಲಪಕ್ಷದ ಸಪ್ತಮಿಯಂದು
ವಿದ್ಯಾಪ್ರದಾಯಿಕೆಯಾದ ಶ್ರೀಸರಸ್ವತೀಮಾತೆಯನ್ನು
ಆಹ್ವಾನಿಸುವ ದಿನ.ಶ್ರೀಸರಸ್ವತಿ ಮಾತೆಯನ್ನು ಅಷ್ಟಮಿಯಂದು ಪೂಜಿಸಲಾಗುತ್ತದೆ.ಈ ದಿನವನ್ನು ದುರ್ಗಾಷ್ಟಮಿ ಎಂದು ಕರೆಯಲಾಗುತ್ತದೆ.
ಭಕ್ತರಿಗೆ ಶಾಂತಿ ಮತ್ತು ಸಂತೋಷವನ್ನುಕೊಟ್ಟು
ಅನುಗ್ರಹಿಸುವ ಮಹಾಗೌರಿಮಾತೆಗೆ ಭಕ್ತಿಯ ನಮನಗಳನ್ನು ಅರ್ಪಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗೋಣ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...