Thursday, June 18, 2026
Thursday, June 18, 2026

ಶಿವಮೊಗ್ಗದಲ್ಲಿ ಅಕ್ಟೋಬರ್ 4 ರಿಂದ ಬಾಳಗಾರು ಮಠದ ಶ್ರಿ ರಾಮಪ್ರಿಯತೀರ್ಥರಿಂದ ಜ್ಞಾನಪ್ರಸರಣ ಸಪ್ತಾಹ

Date:

ಶ್ರೀಶ್ರೀಅಕ್ಷೋಭ್ಯರಾಮಪ್ರಿಯತೀರ್ಥ ಶ್ರೀಪಾದಂಗಳವರು,ಬಾಳಗಾರು ಕ್ಷೇತ್ರ.
(ಶಿವಮೊಗ್ಗ ಭಕ್ತಮಂಡಳಿಯಿಂದ ನುಡಿ ನಮನಗಳು)


ಪವಿತ್ರ ತುಂಗೆಯ ದಡದಲ್ಲಿರುವುದು ಬಾಳಗಾರು. ಇಲ್ಲಿರುವುದು ಶ್ರೀಬಾಳಗಾರು ಅಕ್ಷೋಭ್ಯತೀರ್ಥ ಮಠ. ಇಲ್ಲಿ ನೆಲೆಯೂರಿ ನಿಂತಿರುವರು ಶ್ರೀ ನರಸಿಂಹ ದೇವರು.
ನರಸಿಂಹ ದೇವರ ಅಂತರಂಗ ಭಕ್ತರಾದ ರಾಯರೂ ಇಲ್ಲಿನೆಲೆಸಿರುವರು. ಶ್ರೀ ನರಸಿಂಹ ದೇವರ ಅರ್ಚನೆಗೆ ಸೇವಾರತರಾದವರು
ಶ್ರೀಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು. ಶ್ರೀರಘುಭೂಷಣ ತೀರ್ಥರ ಕರ ಕಮಲ ಸಂಜಾತರು.
ನಗುಮುಖದ ಸ್ವಾಮಿಗಳಿವರು.
ಶ್ರೇಷ್ಠ “ಮಾನಕರಿ”ಮನೆತನದಲ್ಲಿ ಹುಟ್ಟಿದವರು. ಮಾನಕರಿ ಹುಲಿಕುಂಠಾಚಾರ್ಯ ಮತ್ತು ಸಾವಿತ್ರಮ್ಮ ಇವರಪೂರ್ವಾಶ್ರಮದ ತಂದೆತಾಯಿಯರು . ತಂದೆತಾಯಿಯರು ಮಾನಕರಿ ಶ್ರೀನಿವಾಸಾಚಾರ್ಯರು ಎಂದು ಕರೆದರು.
ಪದವಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಪಡೆದು ಚಿನ್ನದ ಪದಕ ಗಳಿಸಿದವರು.
ಮಾತೃಭಾಷೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.
ತಮ್ಮ ವಿದ್ಯಾ ಪ್ರೌಢಿಮೆಯಿಂದ ಹಲವಾರು ಪ್ರತಿಷ್ಠಿತ ಪದಕ ಗೌರವಗಳನ್ನು ಪಡೆದವರು. ಹಲವಾರು ಧಾರ್ಮಿಕ ಪುಸ್ತಕಗಳನ್ನು ಬರೆದಿರುವರು. ಹಂಪಿ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿಯ ಗೌರವ ಪಡೆದವರು.
ಬಾಲ್ಯದಿಂದಲೂ ಧಾರ್ಮಿಕ ವಿಷಯದಲ್ಲಿ ಆಸಕ್ತಿ ಹೊಂದಿದವರು. ಶ್ರೀರಾಯರ ಪರಮ ಭಕ್ತರು.ಬಾಳಗಾರು ಮಠದ ಪೀಠಕ್ಕೆಶ್ರೀಮೂಲರಾಮನ ಸೂಚನೆ ಮತ್ತು ರಾಯರ ಅನುಗ್ರಹದಿಂದಆಯ್ಕೆಯಾದವರು.
ತಮ್ಮೆಲ್ಲ ಸಾಂಸಾರಿಕ ಬಂಧನವನ್ನು ಕಳಚಿ ಶ್ರೀರಘುಭೂಷಣತೀರ್ಥರಿಂದ ಪ್ರಣವ ಮಂತ್ರ ಉಪದೇಶ ಪಡೆದು ಶ್ರೀಮಠದ ಸರ್ವಜ್ಞ ಪೀಠವನ್ನಲಂಕರಿಸಿದರು.
ಶ್ರೀಗಳವರು ಜ್ಞಾನ ದಾಸೋಹಕ್ಕೆ ಆದ್ಯತೆ ಕೊಟ್ಟಿರುವರು. ಯುವ ಪಡೆಯ ಉನ್ನತಿಗೆ ಗುರಿ ಹೊಂದಿರುವರು.
ಮಠಕ್ಕೆ ಹೋದ ಭಕ್ತರಿಗೆ ಹೊಟ್ಟೆತುಂಬ ಅನ್ನ ಪ್ರಸಾದ ನೀಡುವರು.
ತಲೆಯ ತುಂಬಾ ಜ್ಞಾನ ಪ್ರಕಾಶ ತುಂಬಿಸುವರು. ನಮ್ಮ ಶಿವಮೊಗ್ಗೆಯ ಭಕ್ತರು ಭಾಗ್ಯವಂತರು. ಎಲ್ಲರನ್ನೂ ಹರಸಲು ಬಂದಿರುವರು ಶ್ರೀಬಾಳಗಾರು ಶ್ರೀಗಳವರು. ಇಂತಹ ಶ್ರೀಗಳನ್ನು ಪಡೆದ ನಾವೇ ಧನ್ಯರು ಧನ್ಯರು. ನಮ್ಮ ಶಿವಮೊಗ್ಗೆಯ ಭಕ್ತರು ಶ್ರೀಗಳವರ ಚರಣಾರ
ವಿಂದಗಳಲ್ಲಿ ಭಕ್ತಿಪೂರ್ವಕ ನಮನಗಳನ್ನು ಅರ್ಪಿಸುತ್ತಿರುವೆವು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...