ಲೇ; ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ
ನವರಾತ್ರಿ(ಆರನೆಯ ದಿನ) ಕಾತ್ಯಾಯಿನಿದೇವಿ
Klive Special Article “ಚಂದ್ರಹಾಸೋ ಜ್ವಲಕರಾ
ಶಾರ್ದೂಲ ವರ ವಾಹನಾ/
ಕಾತ್ಯಾಯನೀ ಶುಭಂ ದದ್ಯಾತ್
ದೇವಿ ದಾನವಘಾತಿನೀ//
ಇಂದು ನವರಾತ್ರಿ ಹಬ್ಬದ ಆರನೆಯ ದಿನ.
ನವದುರ್ಗೆಯರ ರೂಪವಾದ “ಕಾತ್ಯಾಯನಿ ದೇವಿ”
ಯನ್ನು ಆರಾಧಿಸಿ ಪೂಜಿಸಲಾಗುತ್ತದೆ.
ಕಾತ್ಯಾಯನ ಎನ್ನುವ ಮುನಿಯು ಪಾರ್ವತೀದೇವಿಯಂತಹ ಮಗಳನ್ನು ಪಡೆಯುವುದಕ್ಕಾಗಿ ತಪಸ್ಸು ಮಾಡುತ್ತಾನೆ. ಈ ಋಷಿ
ಮುನಿಯ ತಪಸ್ಸಿಗೆ ಮೆಚ್ಚಿ ದುರ್ಗಾಮಾತೆಯು
ಮಗಳನ್ನು ಕರುಣಿಸುತ್ತಾಳೆ.ಅದರಂತೆ ಈ ಮಗುವಿಗೆ
ಕಾತ್ಯಾಯನಿ ಎಂದು ಹೆಸರಿಡಲಾಗುತ್ತದೆ.
Klive Special Article ಕಾತ್ಯಾಯನಿ ದೇವಿಯ ಸ್ವರೂಪವು ಉಗ್ರವಾಗಿರುತ್ತದೆ. ರಾಕ್ಷಸನ ಸಂಹಾರಕ್ಕೆ ಸಿದ್ಧವಾಗಿರು
ವಂತೆ ಕಾಣುವಳು.ಸಿಂಹ ವಾಹಿನಿಯಾದ ಈ ದೇವಿಯು ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿ ಮತ್ತು
ಮಾತೃ ಸ್ವರೂಪಿಣಿಯೂ ಆಗಿದ್ದಾಳೆ.ದುಷ್ಟಶಕ್ತಿಗಳನ್ನು
ದಮನಮಾಡುವ ದುರ್ಗಾಮಾತೆಯಾಗಿದ್ದಾಳೆ.
ಇಂತಹ ಮಾತೃಸ್ವರೂಪಿಣಿಯಾದ ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸಿ ದೇವಿಯ
ಅನುಗ್ರಹ ಪಡೆಯೋಣ.
