DVS College of Arts and Science ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುರೇಶ್ ಆರ್. ಅವರು “ಕರ್ನಾಟಕ ಅರ್ಬನ್ ಲೋಕಲ್ ಬಾಡಿಸ್ ಎಲೆಕ್ಷನ್ 2007: ಎ ಸ್ಟಡಿ ಆಫ್ ಶಿವಮೊಗ್ಗ ಅರ್ಬನ್ ಲೋಕಲ್ ಬಾಡಿಸ್” ವಿಷಯ ಕುರಿತು ಮಂಡಿಸಿರುವ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.
ಶಿವಮೊಗ್ಗ ನಗರದ ಬಸವನಗುಡಿಯ ಶ್ರೀಮತಿ ಲಕ್ಷ್ಮೀ ಮತ್ತು ದಿ. ಎನ್.ರಾಮಣ್ಣ ಶೆಟ್ಟಿ ದಂಪತಿ ಪುತ್ರ.
