Saturday, May 23, 2026
Saturday, May 23, 2026

JCI ಜೆಸಿಐ ಸಂಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ- ಕೆ.ಎಸ್.ಈಶ್ವರಪ್ಪ

Date:

JCI ಜೆಸಿಐ ಸಂಸ್ಥೆಯಿಂದ ಉತ್ತಮ ಸಮಾಜ ನಿರ್ಮಾಣ- ಕೆ.ಎಸ್.ಈಶ್ವರಪ್ಪ ಸಿಐ ಸಪ್ತಾಹ 2025 – ಕೆ.ಎಸ್ ಈಶ್ವರಪ್ಪನವರಿಂದ ಧ್ವಜಾರೋಹಣ , ವಾಕಥಾನ್ ಜಾಥಕ್ಕೆ ಚಾಲನೆ ಜೆಸಿಐ ಭಾರತ – ವಲಯ 24, ನಾಯಕತ್ವ, ಕಲಿಕೆ, ಕ್ರೀಡೆ, ವ್ಯವಹಾರ ಮತ್ತು ಸಮುದಾಯದ ಪ್ರಭಾವದ ಒಂದು ವಾರದ ಹಬ್ಬವಾದ ಜೆಸಿಐ ಸಪ್ತಾಹ 2025 ರ ಭವ್ಯ ಆಚರಣೆಯ ಅಂಗವಾಗಿ ನೆಹರು ಕ್ರೀಡಾಂಗಣದಲ್ಲಿ ಏಕತೆ ಮತ್ತು ಬದ್ಧತೆಯನ್ನು ಸಂಕೇತಿಸುವ ಧ್ವಜಾರೋಹಣವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪನವರು ನೆರವೇರಿಸಿ ನಂತರ ವಾಕ್ಥಾನ್ ಜಾಥಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಜೆಸಿಐ ಸಂಸ್ಥೆಯು ಸುಮಾರು ವರ್ಷಗಳಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಒಂದು ಉತ್ತಮವಾದ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸಹಕಾರಿಯಾಗಿದೆ, ಅದೇ ರೀತಿ ಒಂದು ವಾರಗಳ ಕಾಲ ಜೆಸಿಐ ಸಪ್ತಾಹ ಆಚರಣೆ ಮುಖಾಂತರ ಕಲಿಕೆ, ಕ್ರೀಡೆ, ಯುವ ಸಮುದಾಯವನ್ನು ನಾಯಕತ್ವ, ಕೌಶಲ್ಯಾಭಿವೃದ್ಧಿಗೆ ಆಕರ್ಷಿಸುವಂತಹ ಸಂವಾದಗಳನ್ನು ನಡೆಸುವ ಮುಖಾಂತರ ಉತ್ತಮವಾದ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಸಂಗತಿ ಎಂದರು. JCI ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಲಯ ಅಧ್ಯಕ್ಷರು ಸೆನೇಟರ್ ಗೌರೀಶ್ ಭಾರ್ಗವ, ಅವರು ಜೆಸಿಐ ಸಪ್ತಾಹಕ್ಕೆ ಶಿವಮೊಗ್ಗದ ಎಲ್ಲಾ ಘಟಕಗಳಿಗೆ ಶುಭ ಕೋರಿದರು. ವಲಯ ಉಪಾಧ್ಯಕ್ಷರುಗಳಾದ JFM ಪ್ರಮೋದ್ ಶಾಸ್ತ್ರಿ, JFS ಸುದರ್ಶನ್ ತಾಯಿ ಮನೆ, ವಲಯ ಕಾರ್ಯದರ್ಶಿ JFS ಆದರ್ಶ್,ಜೈಕಾಂ ಚೇರ್ಮನ್ JFM ಮೋಹನ್ ಕಲ್ಪತರು, ಮೀಡಿಯಾ ಟಾಸ್ಕ್ ಫೋರ್ಸ್ Jc ನವೀನ್ ಕುಮಾರ್ ಶಿವಮೊಗ್ಗದ ಎಲ್ಲಾ ಘಟಕ ಅಧ್ಯಕ್ಷರುಗಳಾದ JC ರೇಖಾ ರಂಗನಾಥ್, JC ರುದ್ರೇಶ್ ಕೋರಿ,JC ಸ್ಮಿತಾ ಮೋಹನ್, JC ಗಣೇಶ್ ಪೈ, JC ಸಂತೋಷ್ ,JC ಗಣೇಶ್ ಜಿ, JC ನಿವೇದಿತಾ, JC ಶಿಲ್ಪಾN, JC ಮಂಜುಳಾ ಕೇಶವ್, JC ಸ್ವಾತಿ, JC ಶಿಲ್ಪಾ, JC ನರಸಿಂಹ JC ವಿನೋದ್ ಹಾಗೂ ಎಲ್ಲಾ ಘಟಕಗಳ ಪದಾಧಿಕಾರಿಗಳು , ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga jyanendra ಉಪಲೋಕಾಯುಕ್ತರ ಅನಿಸಿಕೆ ಸರಿ. ರಾಜ್ಯದಲ್ಲಿ ಭ್ರಷ್ಠಾಚಾರದ ತಾಂಡವ- ಆರಗ ಜ್ಞಾನೇಂದ್ರ

Araga jyanendra ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂಬ ಉಪ ಲೋಕಾಯುಕ್ತ ಬಿ...

Backward Classes Welfare Department ವಿದ್ಯಾರ್ಥಿನಿಲಯಗಳ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಆಹ್ವಾನ

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2026-27...

Nidhi Apke Nikat ಮೇ 27 .ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನಿಧಿ ಆಪ್ ಕೆ ನಿಕಟ್ 2.0 ಕಾರ್ಯಕ್ರಮ

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ...

Shivamogga Police ಅನಾಮಧೇಯ ಶವದ ವಾರಸುದಾರರ ಪತ್ತೆಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

Shivamogga Police ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಬಸ್...