Thursday, June 18, 2026
Thursday, June 18, 2026

ದೇಶದಲ್ಲಿ ವಾರ್ಷಿಕವಾಗಿ ಸರಾಸರಿ ಅರವತ್ತು ಸಾವಿರ ನೇತ್ರದಾನ ಪ್ರಕರಣಗಳು ದಾಖಲಾಗಿವೆ – ಡಾ.ಎಚ್.ಬಿ.ಮಂಜುನಾಥ್

Date:

ಮಧ್ಯಂತರ ಅಂಧತ್ವದಿಂದ ಬಳಲುತ್ತಿರುವ ಲಕ್ಷಾಂತರ ಮಂದಿಯ ಪುನರ್ ದೃಷ್ಟಿಗೆ ನೇತ್ರದಾನಿಗಳ ಅವಶ್ಯವಿದ್ದು ನಿವೃತ್ತ ನೇತ್ರ ಪರೀಕ್ಷಕರು ನೇತ್ರದಾನಕ್ಕೆ ಜನರನ್ನು ಪ್ರೇರೇಪಿಸುವ ಸೇವಾ ಕಾರ್ಯವನ್ನು ಮಾಡಬೇಕು ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು. ಅವರಿಂದು ಕರ್ನಾಟಕ ನಿವೃತ್ತ ನೇತ್ರ ಪರೀಕ್ಷಕರ ಪ್ರಥಮ ರಾಜ್ಯಮಟ್ಟದ ಸ್ನೇಹಕೂಟದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ದೇಶದಲ್ಲಿ ವಾರ್ಷಿಕ ಸುಮಾರು ಒಂದು ಲಕ್ಷ ಮಂದಿ ಮಧ್ಯಂತರ ಅಂಧತ್ವದವರಿಗೆ ನೇತ್ರ ಕಸಿಗಾಗಿ ಸುಮಾರು ಎರಡು ಲಕ್ಷ ಎಪ್ಪತ್ತು ಸಾವಿರ ನೇತ್ರಗಳ ಅವಶ್ಯಕತೆ ಇದ್ದು ವಾರ್ಷಿಕ ನಮ್ಮ ದೇಶದಲ್ಲಿ ಸುಮಾರು 56 ಸಾವಿರದಿಂದ 66 ಸಾವಿರ ಮಾತ್ರ ನೇತ್ರದಾನಗಳು ನಡೆಯುತ್ತಿದ್ದು ಮರಣಾ ನಂತರ ಮಣ್ಣಲ್ಲಿ ಮಣ್ಣಾಗುವ ಬೆಂಕಿಯಲ್ಲಿ ಬೂದಿಯಾಗುವ ಮುನ್ನ ಮೃತರ ನೇತ್ರಗಳನ್ನು ಸೂಕ್ತ ಸಮಯದ ಒಳಗೆ ದಾನ ಮಾಡುವಂತೆ ಸಮಾಜದಲ್ಲಿ ಜಾಗೃತಿ ಉಂಟಾಗಬೇಕಿದೆ. ಕಣ್ಣಿನ ತೊಂದರೆಗೆ ಕಾರಣವಾಗುವ ಅನ್ನಾಂಗಗಳ ಕೊರತೆ ಬಗ್ಗೆ ಸಮಾಜಕ್ಕೆ ತಿಳಿಸಬೇಕಾಗಿದೆ ಅಲ್ಲದೆ ಶಾಲಾ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೇ ನೇತ್ರ ಪರೀಕ್ಷೆಗೆ ಒಳಪಡಿಸಿದಲ್ಲಿ ಮುಂದೆ ಉಂಟಾಗಬಹುದಾದ ಕಣ್ಣಿನ ತೊಂದರೆಗಳು ಈಗಲೇ ತಡೆಯಬಹುದಾಗಿದ್ದು ಈ ನಿಟ್ಟಿನಲ್ಲೂ ನಿವೃತ್ತ ನೇತ್ರ ಪರೀಕ್ಷಕರು ಸ್ವಯಂ ಪ್ರೇರಣೆಯಿಂದ ಜನಜಾಗೃತಿ ಮೂಡಿಸುವ ಕೆಲಸಗಳನ್ನು ವೈಯಕ್ತಿಕವಾಗಿ ಹಾಗೂ ಸಾಂಘಿಕವಾಗಿ ಮಾಡಬೇಕು ಎಂದು ಎಚ್ ಬಿ ಮಂಜುನಾಥ್ ಹೇಳಿದರು . ನಿವೃತ್ತ ನೇತ್ರ ತಜ್ಞ ಡಾ.ಎ ಬಿ ಕಾಕಡೆ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನೇತ್ರ ತಜ್ಞ ಡಾ. ಎಸ್ ಎಸ್ ಕೊಳಕೂರ್ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ ಹೆಚ್ ಎಂ ವೀರಯ್ಯ ಮುಂತಾದವರು ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮದ ನಿರೂಪಣೆಯನ್ನು ನಿವೃತ್ತ ನೇತ್ರಾಧಿಕಾರಿ ಪ್ರಕಾಶ್ ಸವದತ್ತಿ ಮಾಡಿದರು.ರಂಗನಾಥ ಸ್ವಾಗತ ಕೋರಿದರು. ನಿವೃತ್ತ ನೌಕರರ ಮಿನಿ ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...