Monday, February 2, 2026
Monday, February 2, 2026

Klive Special Article ಶ್ರೀಕೃಷ್ಣ ಸ್ಮರಣೆ ಲೇ: ಎನ್.ಜಯಭೀಮ ಜೊಯಿಸ್. ಶಿವಮೊಗ್ಗ

Date:

Klive Special Article ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣ ಪರಮಾತ್ಮನ
ಭಕ್ತಿಯ ಸ್ಮರಣೆ ಮತ್ತು ಪಾದಪದುಮಗಳಿಗೆ ನಮನಗಳಿಂದ ಅರ್ಚನೆ.


ಉಡುಪಿಯಲಿ ಬಾಲಕೃಷ್ಣಹೀಗೆ ನಿಂತಿದ್ದಾನೆ.
ಕೈಯಲ್ಲಿ ಕಡಗೋಲು ಹಿಡಿದಿದ್ದಾನೆ.
ಮಜ್ಜಿಗೆ ಕಡೆಯಲು ಅಲ್ಲ.ನಮ್ಮಲ್ಲಿರುವ ಅಜ್ಞಾನವನ್ನು ಕಡೆದು ಜ್ಞಾನವೆಂಬೋ ಬೆಣ್ಣೆಯು ಹೊರಬರಲು.
ನಾನು,ನನ್ನದು ಎನ್ನುವ ಬಂಧನವ ಕಿತ್ತುಹಾಕು
ನನ್ನೊಡೆಯಾ.ಕಡೆಗಣಿಸಬೇಡ ಸ್ವಾಮಿ ಈ ನಿನ್ನ
ಮಕ್ಕಳ ಕೋರಿಕೆಯನ್ನು.
ಶರಧಿ ಶಯನನಾದ ನಿನಗೆ,.ನಾನು ಎರಡೂ ಕೈಗಳಿಂದ ನಿನ್ನ ಪಾದ ಹಿಡಿದು ಬೇಡಿಕೊಳ್ಳುತ್ತಿರುವೆನು ಗೋವಿಂದ.ಈಸಂಸಾರಬಂಧನವನ್ನುತರಿದುಹಾಕು.ಶಾಶ್ವತವಲ್ಲದಮೋಹವನ್ನು ದೂರಮಾಡು.
ನನ್ನಲ್ಲಿರುವ ಷಡ್ವೈರಿಗಳನ್ನು ನಾಶಮಾಡುಗೋವಿಂದ.
ನಿನ್ನಲ್ಲಿ ಭಕ್ತಿಮಾಡುವ ಮನಸ್ಸನ್ನು ಕೊಟ್ಟು ಕಾಪಾಡು
ಜನಾರ್ಧನ.
Klive Special Article ನಿನ್ನ ಸ್ಮರಣೆ ಮಾಡಿ ಮತ್ತೆಮತ್ತೆಮಾಡಿ,ನೈವೇದ್ಯಕ್ಕೆಂದು ಚೆನ್ನಾಗಿ ಮಾಗಿರುವ ಹಣ್ಣನ್ನು ತಂದಿರುವೆ,ಇದೆಲ್ಲವೂ ನನ್ನದಲ್ಲ,ನೀನೇ ಕೊಟ್ಟದ್ದು ನಿನಗೇ ಅರ್ಪಿಸುತ್ತಿದ್ದೇನೆ.
ನಿನ್ನ ಶಿಖೆಯಲ್ಲಿ ನವಿಲುಗರಿ,ಪಾದಕ್ಕೆ ಘಿಲ್ ಘಿಲ್ ಶಬ್ದಮಾಡುವಗೆಜ್ಜೆಗಳು,ಸೊಂಟಕ್ಕೆಮುತ್ತಿನೊಡ್ಯಾನದಿಂದ ಶೋಭಿತನಾಗಿರುವಜಗದೊಡೆಯ ನನ್ನವನು ನೀನುಚೆಲುವಚೆನ್ನಿಗರಾಯನಾದ ಶ್ರೀಹರಿ. ಇಂತಹಚೆಲುವಶ್ರೀಕೃಷ್ಣನನ್ನು(ವೃಂದಾವನವಿಹಾರಿ)ಶ್ರೀಕೃಷ್ಣಜಯಂತಿಯಂದು ಭಕ್ತಿಯಿಂದ ನಮ್ಮ ತಪ್ಪುಗಳನ್ನೆಲ್ಲಾ ಮನ್ನಿಸಿ,ಎಲ್ಲರನ್ನೂ ಕಾಪಾಡು ಎಂದು ಪ್ರಾರ್ಥಿಸೋಣ.


“ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ
ಎನಬಾರದೆ”.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...