Thursday, June 18, 2026
Thursday, June 18, 2026

Vagdevi Charitable Trust ವಿಶೇಷ ಚೇತನರಿಗೆ ಉಚಿತ ಪೆಟ್ಟಿಗೆ ನೆರವು ನೀಡಿದ ವಾಗ್ದೇವಿ ಟ್ರಸ್ಟ್

Date:

Vagdevi Charitable Trust ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಎಪ್ಪತ್ತೊಂಭತ್ತನೇ ಸ್ವಾತಂತ್ರ್ಯೋತ್ಸವ ವಿಶೇಷವಾಗಿ ಜರುಗಿತು.

ತೀರ್ಥಹಳ್ಳಿ ತಾಲೂಕು ಕೊಂಡ್ಲೂರು ಎಂಬಲ್ಲಿ ವಾಸವಾಗಿರುವ ವಿಕಲಚೇತನ ವ್ಯಕ್ತಿ ಶ್ರೀ ಕೆ ಎಂ ಸುಧೀರ್ ಇವರಿಗೆ ಟ್ರಸ್ಟ್ ನ ವತಿಯಿಂದ ಒಂದು ಪೆಟ್ಟಿಗೆ ಅಂಗಡಿ (petty shop) ಯನ್ನು ಉಚಿತವಾಗಿ ನೀಡಲಾಯಿತು.
ಅವರ ವಾಸಸ್ಥಾನದ ಸಮೀಪದಲ್ಲಿ ಐತಿಹಾಸಿಕ ಸ್ಥಳ ಕವಲೆ ದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಈ ಪೆಟ್ಟಿಗೆ ಅಂಗಡಿಯನ್ನು ಇರಿಸಲಾಗಿದೆ.

ಕೊಂಡ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಟ್ರಸ್ಟಿನ ಸೇವಾಕಾರ್ಯವನ್ನ ಶ್ಲಾಘಿಸಿದರು.

Vagdevi Charitable Trust ಟ್ರಸ್ಟ್ ನ ಅಧ್ಯಕ್ಷರು ಮತ್ತು ಎಲ್ಲ ಟ್ರಸ್ಟಿಗಳು ಹಾಗೂ ಅನೇಕ ದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾನಿಗಳ ಔದಾರ್ಯದಿಂದಲೇ ನಮ್ಮ ಸಂಸ್ಥೆ ನಡೆಯುತ್ತಿದೆ. ನಮ್ಮ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಾಯಿಲೆ ಪೀಡಿತ ಬಡವರಿಗೆ ಔಷಧೋಪಚಾರ, ತುಂಬಾ ಬಡವರಿಗೆ ರೇಶನ್ ಕೊಡುವುದು, ಅನಾಥಾಶ್ರಮಗಳಿಗೆ ಸಹಾಯ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ವರ್ಷವಿಡಿ ಮಾಡುತ್ತಿರುತ್ತೇವೆ. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿರುವುದರಿಂದ 10 ವಿಶೇಷವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಚಟುವಟಿಕೆ ಬಗ್ಗೆ
ಕೆ ಲೈವ್ ನ್ಯೂಸ್ ಗೆ ಶ್ರೀರವಿರಾಜ ವೈದ್ಯ ಅವರು ತಿಳಿಸಿದರು .

ಪ್ರಸ್ತುತ ಶ್ರೀ ಸುಧೀರ್ ಅವರಿಗೆ ನೀಡಿರುವ ಮಳಿಗೆಯ ನೆರವು ಒಂಭತ್ತನೆಯ ಕಾರ್ಯಕ್ರಮವಾಗಿದೆ ಎಂದು ಉಪಸ್ಥಿತರಿದ್ದ ಟ್ರಸ್ಟಿ ಡಿ.ಜಿ.ಮಂಜುನಾಥ್ ಈ ಸಂದರ್ಭದಲ್ಲಿ ನುಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...