Saturday, December 6, 2025
Saturday, December 6, 2025

Vagdevi Charitable Trust ವಿಶೇಷ ಚೇತನರಿಗೆ ಉಚಿತ ಪೆಟ್ಟಿಗೆ ನೆರವು ನೀಡಿದ ವಾಗ್ದೇವಿ ಟ್ರಸ್ಟ್

Date:

Vagdevi Charitable Trust ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಇವರ ಆಶ್ರಯದಲ್ಲಿ ಎಪ್ಪತ್ತೊಂಭತ್ತನೇ ಸ್ವಾತಂತ್ರ್ಯೋತ್ಸವ ವಿಶೇಷವಾಗಿ ಜರುಗಿತು.

ತೀರ್ಥಹಳ್ಳಿ ತಾಲೂಕು ಕೊಂಡ್ಲೂರು ಎಂಬಲ್ಲಿ ವಾಸವಾಗಿರುವ ವಿಕಲಚೇತನ ವ್ಯಕ್ತಿ ಶ್ರೀ ಕೆ ಎಂ ಸುಧೀರ್ ಇವರಿಗೆ ಟ್ರಸ್ಟ್ ನ ವತಿಯಿಂದ ಒಂದು ಪೆಟ್ಟಿಗೆ ಅಂಗಡಿ (petty shop) ಯನ್ನು ಉಚಿತವಾಗಿ ನೀಡಲಾಯಿತು.
ಅವರ ವಾಸಸ್ಥಾನದ ಸಮೀಪದಲ್ಲಿ ಐತಿಹಾಸಿಕ ಸ್ಥಳ ಕವಲೆ ದುರ್ಗಕ್ಕೆ ಹೋಗುವ ಮಾರ್ಗದಲ್ಲಿ ಈ ಪೆಟ್ಟಿಗೆ ಅಂಗಡಿಯನ್ನು ಇರಿಸಲಾಗಿದೆ.

ಕೊಂಡ್ಲೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಟ್ರಸ್ಟಿನ ಸೇವಾಕಾರ್ಯವನ್ನ ಶ್ಲಾಘಿಸಿದರು.

Vagdevi Charitable Trust ಟ್ರಸ್ಟ್ ನ ಅಧ್ಯಕ್ಷರು ಮತ್ತು ಎಲ್ಲ ಟ್ರಸ್ಟಿಗಳು ಹಾಗೂ ಅನೇಕ ದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾನಿಗಳ ಔದಾರ್ಯದಿಂದಲೇ ನಮ್ಮ ಸಂಸ್ಥೆ ನಡೆಯುತ್ತಿದೆ. ನಮ್ಮ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕಾಯಿಲೆ ಪೀಡಿತ ಬಡವರಿಗೆ ಔಷಧೋಪಚಾರ, ತುಂಬಾ ಬಡವರಿಗೆ ರೇಶನ್ ಕೊಡುವುದು, ಅನಾಥಾಶ್ರಮಗಳಿಗೆ ಸಹಾಯ ಮಾಡುವುದು ಮುಂತಾದ ಕಾರ್ಯಕ್ರಮಗಳನ್ನು ವರ್ಷವಿಡಿ ಮಾಡುತ್ತಿರುತ್ತೇವೆ. ಈ ವರ್ಷ ಡಿಸೆಂಬರ್ ತಿಂಗಳಲ್ಲಿ ದಶಮಾನೋತ್ಸವವನ್ನು ಆಚರಿಸುತ್ತಿರುವುದರಿಂದ 10 ವಿಶೇಷವಾದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತೀರ್ಮಾನಿಸಲಾಗಿದೆ ಎಂದು ಟ್ರಸ್ಟಿನ ಚಟುವಟಿಕೆ ಬಗ್ಗೆ
ಕೆ ಲೈವ್ ನ್ಯೂಸ್ ಗೆ ಶ್ರೀರವಿರಾಜ ವೈದ್ಯ ಅವರು ತಿಳಿಸಿದರು .

ಪ್ರಸ್ತುತ ಶ್ರೀ ಸುಧೀರ್ ಅವರಿಗೆ ನೀಡಿರುವ ಮಳಿಗೆಯ ನೆರವು ಒಂಭತ್ತನೆಯ ಕಾರ್ಯಕ್ರಮವಾಗಿದೆ ಎಂದು ಉಪಸ್ಥಿತರಿದ್ದ ಟ್ರಸ್ಟಿ ಡಿ.ಜಿ.ಮಂಜುನಾಥ್ ಈ ಸಂದರ್ಭದಲ್ಲಿ ನುಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...