Shivamogga Karnataka Sanga ದಿನಾಂಕ 09 ಆಗಸ್ಟ್ 2025ರ ಶನಿವಾರ, ಸಂಜೆ 5:30ಕ್ಕೆ ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತ್ರಿ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಂಗಳೂರಿನ ಶ್ರೀಮತಿ ಸಹನಾ ವಿಜಯಕುಮಾರ್, ಸಾಹಿತಿಗಳು ಇವರು ‘ಭರಪ್ಪನವರ ಕೃತಿಗಳಲ್ಲಿ ಮೌಲ್ಯ ಮೀಮಾಂಸೆ’ ವಿಷಯದ ಕುರಿತು ಮಾತನಾಡಲಿದ್ದಾರೆ.
ಕನ್ನಡದಲ್ಲಿ ಬರೆದು ವಿಶ್ವಮಾನ್ಯತೆ ಪಡೆದ ಸಾಹಿತಿ, ಕಾದಂಬರಿ ಪ್ರಪಂಚದ ಪ್ರಖರ ಸೂರ್ಯ, ಕನ್ನಡ ಸಾಹಿತ್ಯ ಲೋಕದ ಭೀಮಕಾಯ ಡಾ. ಎಸ್. ಎಲ್ ಭೈರಪ್ಪನವರ 95ರ ಹುಟ್ಚು ಹಬ್ಬದ ಸಂದರ್ಭದಲ್ಲಿ ಶಿವಮೊಗ್ಗೆಯ ಕರ್ನಾಟಕ ಸಂಘ ಒಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
“ಕಶೀರ” ಖ್ಯಾತಿಯ ಶ್ರೀಮತಿ ಸಹನಾ ವಿಜಯಕುಮಾರ್ ತಮ್ಮ ವಿಶಿಷ್ಠವಾದ ಕಾದಂಬರಿಗಳ ಮೂಲಕ ಈಗಾಗಲೇ ಕನ್ನಡಸಾಹಿತ್ಯಾಸಕ್ತರ ಮನಸ್ಸನ್ನು ಆವರಿಸಿದ್ದಾರೆ.
Shivamogga Karnataka Sanga ಇವರು, ಇದೇ ಬರುವ ಶನಿವಾರ ಸಂಜೆ (09/08/2025) ಕರ್ನಾಟಕ ಸಂಘದಲ್ಲಿ ನಡೆಯಲಿರುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ “ಭೈರಪ್ಪನವರ ಕೃತಿಗಳಲ್ಲಿ ಮೌಲ್ಯ ಮೀಮಾಂಸೆ” ಕುರಿತು ಮಾತನಾಡಲಿದ್ದಾರೆ .
