Thursday, June 18, 2026
Thursday, June 18, 2026

Sahyadri Narayana Multispeciality Hospital ಜುಲೈ 28. ವಿಶ್ವ ಹೆಪಟೈಟಿಸ್ ದಿನ. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

Date:

Sahyadri Narayana Multispeciality Hospital ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ಉಚಿತ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರ ನಡೆಯಲಿದೆ.

ಪ್ರತಿ ವರ್ಷ ಜುಲೈ ೨೮ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ ೨೮ ರಿಂದ ಆಗಸ್ಟ್ ೨ನೇ ತಾರೀಖಿನವರೆಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಉಚಿತವಾಗಿ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಉಚಿತವಾಗಿ ನೊಂದಣಿ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಹೆಪಟೈಟಿಸ್‌ ʼಬಿʼ ಲಸಿಕೆ ಪಡೆಯಬಹುದು.

ಭಾರತ ದೇಶದಲ್ಲಿ ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಗಣನಿಯವಾಗಿ ಏರಿಕೆಯಾಗುತ್ತಿದೆ. ಹೆಪಟೈಟಿಸ್ ‘ಬಿ’ ರೋಗಕ್ಕೆ ಔಷದಿ ಹಾಗೂ ಲಸಿಕೆ ನೀಡದಿದ್ದರೆ ಅದು ಅಪಾಯಕಾರಿ ಮತ್ತು ಮರಣಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆಯ ಯಕೃತ್‌ ಮತ್ತು ಗ್ಯಾಸ್ಟೊಎಂಟರಾಲಜಿ ವಿಭಾಗದ ವೈದ್ಯರಾದ ಡಾ. ಶಿವಕುಮಾರ್ ವಿ. ಹಾಗೂ ಡಾ. ಸುಮೇಶ್ ನಾಯರ್ ಎಸ್ ತಿಳಿಸಿದರು.

Sahyadri Narayana Multispeciality Hospital ಹೆಪಟೈಟಿಸ್ ‘ಬಿ’ ರೋಗವನ್ನು ತಡೆಗಟ್ಟಲು ಹೆಪಟೈಟಿಸ್ ‘ಬಿ’ ಲಸಿಕೆಯು ಹೇರಳವಾಗಿ ಲಭ್ಯವಿದ್ದು ಅದನ್ನು ಮುಂಚಿತವಾಗಿ ಹಾಕಿಸಿಕೊಂಡಲ್ಲಿ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಹೆಪಟೈಟಿಸ್ ‘ಸಿ’ ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈವಸ್ಥಾಪಕ ನಿರ್ದೆಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್ ರವರು ತಿಳಿಸಿದ್ದಾರೆ.
ಮುಂಗಡವಾಗಿ ನೋಂದಣಿ ಮಾಡಿಸಲು ಕರೆಮಾಡಿ – ೯೫೧೩೦೯೭೪೦೦
ದಿನಾಂಕ – ಜುಲೈ ೨೮ರಿಂದ ಆಗಸ್ಟ್ ೨ರವರೆಗೆ
ಸಮಯ – ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಶಿಬಿರ ನಡೆಯಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...