Monday, February 2, 2026
Monday, February 2, 2026

Sri Rameshwar Temple ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ,ಉಪಮಾಲೋಲ ಕವಿ.- ಡಾ.ಕೃಷ್ಣ ಎಸ್ ಭಟ್

Date:

Sri Rameshwar Temple ಹಳೆ ನಗರದ ಶ್ರೀರಾಮೇಶ್ವರ ದೇವಸ್ಥಾನದ ಹಿಂಭಾಗದ, ಶ್ರೀ ಗಾಯಿತ್ರಿ ಧರ್ಮಶಾಲಾ ಸಭಾಂಗಣದಲ್ಲಿ, ದಿವಂಗತ ಡಾಕ್ಟರ್ ಎಚ್ಎಸ್ ವೆಂಕಟೇಶಮೂರ್ತಿಯವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ, ಭಾವ ಗಾನ ಗೌರವ ಮತ್ತು ಸಂಸ್ಮರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಭೂಮಿಕಾ ವೇದಿಕೆ ಅಧ್ಯಕ್ಷ ಡಾಕ್ಟರ್ ಕೃಷ್ಣ ಎಸ್ ಭಟ್ ಮಾತನಾಡಿದರು.

ಪ್ರಮುಖ ವ್ಯಕ್ತಿಗಳ ಸಂಸ್ಮರಣೆ ಮಾಡುವುದು ಎಂದರೆ ಪ್ರಸಿದ್ಧ ವ್ಯಕ್ತಿಗಳ ಜೀವನ ಪಥ ಅವರು ಸಮಾಜಕ್ಕೆ ಮತ್ತು ತಾವು ಇರುವ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವಾಗಿದೆ ಎಂದು ನುಡಿದರು.

ಡಾಕ್ಟರ್ ಎಚ್ಎಸ್ ವಿ ಅವರ ಕವಿತೆ, ಕವನಗಳು ,ಆಯಾಯ ಕಾಲಘಟ್ಟದಲ್ಲಿ ಆಯಾಯ ವಯೋಮಾನದವರು ಅನುಭವಿಸಿದ ಸಂಗತಿಗಳನ್ನು ,ಪ್ರಕೃತಿಯೊಡನೆ ಹೋಲಿಕೆಯಾಗಿ ನೀಡಿ, ಉಪಮಾಲೋಲ ಕವಿಯಾಗಿ ,ಹಾಡನ್ನು ರಚಿಸಿರುವುದು ಅವರ ವ್ಯಕ್ತಿತ್ವದ ವಿಶೇಷವಾಗಿದೆ. ಅವರು ಇಂದು ಭೌತಿಕವಾಗಿ ನಮ್ಮ ನಗಲಿದರೂ, ಅವರ ಕಾವ್ಯದಲೆಗಳ ಕಂಪು ,ಇನ್ನು ನೂರಾರು ವರ್ಷಗಳ ಕಾಲ ತೇಲಿ ಬರುತ್ತಲೇ ಇರುತ್ತವೆ. ಅವರ ಭಾವಗೀತೆಗಳು ಕನ್ನಡಿಗರ ಹೃದಯಗೀತೆಯಾಗಿ, ಭಾವ ಪ್ರಪಂಚದ ಬೆರಗಾಗಿ, ಮೆರೆಯುತ್ತಾ ಕನ್ನಡಿಗರ ಮನದಲ್ಲಿ, ಸದಾ ನೆಲೆಸಿದ್ದಾರೆ ಎಂದು ತಿಳಿಸಿದರು.

Sri Rameshwar Temple ಭೂಮಿಕ ವೇದಿಕೆ ಸದಸ್ಯರು ,ಡಾಕ್ಟರ್ ಎಚ್ಎಸ್ ವಿ ಅವರು ರಚಿಸಿದ, ಆಯ್ದ 10 ಗೀತೆಗಳನ್ನು ಶುಶ್ರಾವ್ಯವಾಗಿ ಹಾಡಿದರು. ಡಾಕ್ಟರ್ ಎಚ್ಎಸ್ ವಿ ಅವರ ಜೀವನ ಪಥ, ಕುರಿತು ಶ್ರೀಮತಿ ಉಷಾ ಶೇಷಗಿರಿ, ಡಾಕ್ಟರ್ ಎಚ್ಎಸ್ವಿಯವರ ಕಾವ್ಯಪತ ಕುರಿತು ಬಿ ಕಾಂತಪ್ಪ,ನುಡಿ ನಮನ ಸಲ್ಲಿಸಿದರು.
ಶ್ರೀಮತಿ ಶಾಮಲಾ ಮತ್ತು ವೀಣಾ ಪ್ರಾರ್ಥಿಸಿ, ಕಾರ್ಯದರ್ಶಿ ಶಿವರಾಜ್ ಸ್ವಾಗತಿಸಿದರು. ಆನಂದ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಮೇಶ್ ವಂದಿಸಿದರು. ಕೋಶಾಧ್ಯಕ್ಷ ಮುನಿರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...