H. S. Venkateshamurthy ಕಲಾ ಕ್ಷೇತ್ರದಲ್ಲಿ ಚಲನಚಿತ್ರ ಹಾಗೂ ಧಾರವಾಹಿಗಳಿಗೆ ಸಂಭಾಷಣೆಯನ್ನು ಬರೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಚ್ಎಸ್ ವೆಂಕಟೇಶ್ ಮೂರ್ತಿಯವರ ಕಲಾಸೇವೆ ಮರೆಯವಂತಿಲ್ಲ. ಅವರ ಕವನ ಕವಿತೆಗಳು ಇಂದಿಗೂ ಸಹ ಪ್ರಸ್ತುತ ಎಲ್ಲಾ ವರ್ಗದವರಿಗೂ ಸಹ ವಿಶೇಷ ಕವನಗಳನ್ನು ರಚಿಸುವುದರ ಸುಗಮ ಸಂಗೀತ ಕ್ಷೇತ್ರವನ್ನು ಸದೃಢಗೊಳಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸುಗಮ ಸಂಗೀತ ಪರಿಷತ್ತಿನ ನಿರ್ದೇಶಕರು ಹಾಗೂ ಆಕಾಶವಾಣಿ ಕಲಾವಿದರಾದ ಶ್ರೀಮತಿ ಜಯಶ್ರೀ ಶ್ರೀಧರ್ ಅವರು ಅಭಿಮತ ವ್ಯಕ್ತಪಡಿಸಿದರು. ನಗರದ ಮಧುರ ಪ್ಯಾರಡೈಸ್ ಸಭಾಂಗಣದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಶಿವಮೊಗ್ಗ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್. ಭಾವಗಾನ ಶಿವಮೊಗ್ಗ ನಾದಶ್ರೀ ಸುಗಮ ಸಂಗೀತ ಶಾಲೆ. ಹಾಗೂ ತರಂಗಿಣಿ ಸಂಗೀತ ಶಾಲೆ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಕೀರ್ತಿಶೇಶ ಕವಿ ಡಾಕ್ಟರ್ ಎಚ್ಎಸ್ ವೆಂಕಟೇಶ್ ಮೂರ್ತಿಯವರ ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ ನುಡಿಗಾನ ನಮನ ಕಾರ್ಯಕ್ರಮ ವನ್ನು ಎಚ್ ಎಸ್ ವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಬಾವಗಾನ ಸಂಸ್ಥೆಯ ಅಧ್ಯಕ್ಷರಾದ ಭದ್ರಾವತಿ ವಾಸು ಅವರು ಮಾತನಾಡುತ್ತ ಹೆಚ್ ಎಸ್ ವಿ ಅವರು. ಈ ನಾಡು ಕಂಡ ಒಬ್ಬ ಶ್ರೇಷ್ಠ ಕವಿ ಅವರ ಲೋಕದ ಕಣ್ಣಿಗೆ ರಾಧೆಯು ಕೂಡ. ಸಾವಿರದಳ ಕಮಲಿನಿ ಹಾಗೆ ಹಲವಾರು ಭಾವಗೀತೆಗಳು ಇಂದಿಗೂ ಸಹ ಜೀವನಂತಿಕೆಯಿಂದ ಇದೆ ಎಂದು ನುಡಿದರು. ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಜಿಲ್ಲಾ ಘಟಕದ ಖಜಾಂಚಿ ಜಿ ವಿಜಯ್ ಕುಮಾರ್ ಅವರು ಮಾತನಾಡುತ್ತಾ ಸುಗಮ ಸಂಗೀತ ಕ್ಷೇತ್ರ ಗಟ್ಟಿಗೊಳ್ಳಲು ಇಂತಹ ಕವಿಗಳು ಸಾಧಕರು ಬಹಳ ಮುಖ್ಯ ಇವರ ಕಥೆ ಕವನ ಹಾಗೂ ನಾಟಕಗಳು ರಾಜ್ಯ ರಾಷ್ಟ್ರಮಟ್ಟದಲ್ಲೂ ಸಹ ವಿಶೇಷ ಸ್ಥಾನಮಾನವನ್ನ ಪಡೆದಿದೆ ಸುಗಮ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ನಾವು ಮರೆಯಲು ಸಾಧ್ಯವೇ ಇಲ್ಲ ಎಂದು ನುಡಿದರು. H. S. Venkateshamurthy ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಪರಿಷತ್ತಿನ ಕಲಾವಿದರು ಭಾವಗಾನ ತಂಡದ ಕಲಾವಿದರು ಹಾಗೂ ಎಲ್ಲಾ ಸಂಗೀತ ಪಾಠಶಾಲೆಯ ಕಲಾವಿದರು ಎಚ್ ಎಸ್ ವಿ ಅವರ ಕವಿತೆಗಳನ್ನು ಹಾಡಿ ಮನತಣಿಸಿದರು. ವೇದಿಕೆಯಲ್ಲಿ ಸಂಚಾಲಕರಾದ ಶೋಭಾ ಸತೀಶ್. ಭುಜಂಗಪ್ಪ. ಕಾರ್ಯದರ್ಶಿ ಮಥುರಾ ನಾಗರಾಜ್. ಬಸವರಾಜ್. ಲಲಿತಮ್ಮ. ವಿಜಯಕುಮಾರ್. ಮತ್ತು ಪರಿಷತ್ತಿನ ಕಲಾವಿದರು ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು
H. S. Venkateshamurthy ಎಚ್ ಎಸ್ ವಿ ಯವರ ಕವಿತೆ ನಾಟಕ ಪ್ರಬಂಧ ಕಾದಂಬರಿ ಮಕ್ಕಳ ಸಾಹಿತ್ಯ ಇಂದಿಗೂ ಪ್ರಸ್ತುತ : ಜಯಶ್ರೀ ಶ್ರೀಧರ್
Date: