Monday, February 2, 2026
Monday, February 2, 2026

Ayanur Manjunath ಶಾಸಕರ ಅಮಾನತ್ತು ವಾಪಸ್, ಸಂವಿಧಾನ ವಿರೋಧಿ‌ ಕ್ರಮ- ಮಾಜಿ ಶಾಸಕ ಆಯನೂರು ಮಂಜುನಾಥ್

Date:

Ayanur Manjunath ಶಾಸಕರ ಅಮಾನತ್ತು ಹಿಂದೆ ತೆಗೆದುಕೊಂಡಿದ್ದಕ್ಕೆಮಾಜಿ ಶಾಸಕ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮಾನತು ವಾಪಸ್ ಪಡೆದುಕೊಂಡಿರುವ ನಿರ್ಣಯ ಸಂವಿಧಾನ ವಿರೋಧಿಯಾಗಿದೆ.
ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಸದನದ ಕೊನೆಯ ಘಳಿಗೆಯಲ್ಲಿ ವಿಧಾನಸಭೆಯ ಕಾರ್ಯವಿಧಾನ 348 ಪ್ರಕಾರ ಪ್ರಸ್ತಾವವನ್ನು ಸದನದಲ್ಲಿ ಮಂಡನೆ ಮಾಡಬೇಕಿತ್ತು.

ನಿನ್ನೆ ಸಭೆಯಲ್ಲಿ ಹಾಜರಿದ್ದವರು ಒಂದು ತೀರ್ಮಾನವನ್ನು ಮಾಡಿ ಅಮಾನತು ವಾಪಸ್ ಪಡೆಯಲಾಗಿದೆ. 348 ನೇ ಪ್ರಸ್ತಾಪವನ್ನು ಸದನದಲ್ಲಿ ಪಡೆಯಲಾಗಿತ್ತು. ಸದನದಲ್ಲಿ ಆದ ಪ್ರಸ್ತಾವವನ್ನು ಸದನದಲ್ಲಿಯೆ ವಾಪಸ್ ಪಡೆಯಬೇಕಿತ್ತು, ಆದರೆ ಹೊರಗಡೆ ತೆಗೆದುಕೊಳ್ಳುವಂತಿಲ್ಲ.ಸದನದ ಹೊರಗೆ ತೀರ್ಮಾನ ಮಾಡಲು ಸ್ಪೀಕರ್ ಗೂ ಬರಲ್ಲ.

ಸನದ ತೆಗೆದುಕೊಂಡ ತೀರ್ಮಾನ ಸದನದ ಹೊರಗೆ ತೆಗೆದುಕೊಳ್ಳಲು ಸ್ಪೀಕರ್ ಗೂ ಅಧಿಕಾರ ಇಲ್ಲ ಎಂದರು. ಇಲ್ಲಿ ಸ್ವಲ್ಪ ಎಡವಿದ್ದಾರೆ. ವಿಧಾನಸಭೆ ಕಾರ್ಯದರ್ಶಿಯವರು ಸದನದ ಹೊರಗೆ ತೀರ್ಮಾನ ಮಾಡಲು ಬರಲ್ಲ ಎಂದು ಹೇಳಿದ್ದಾರೆ.

ಆದರೂ ಅಶೋಕ್ ರವರು ವಿರೋಧ ಪಕ್ಷದ ನಾಯಕ, ಸಿಎಂ, ಕಾನೂನು ಸಚಿವರು ಹಾಗೂ ಸ್ಪೀಕರ್ ಇದ್ದಾರೆಂದು ಹೇಳಿದ್ದಾರೆ.
ಸಂವಿಧಾನ ವಿರೋಧ, ಸದನದ ವಿರೋಧಿ ಆಗಿದೆ. ಯಾರೇ ತಪ್ಪು ಮಾಡಿದ್ರು ಅದು ತಪ್ಪು. ನಿನ್ನೆ ದೊಡ್ಡವರಾಗಿಯೇ ಅವರು ತಪ್ಪು ಮಾಡಿದ್ದಾರೆ. ಇದು ಕೆಟ್ಟ ಸಂಪ್ರದಾಯವಾಗಿದೆ. ಸಂಸದಿಯ ವ್ಯವಸ್ಥೆಯ ದೊಡ್ಡಲೋಪ. ಸಂವಿಧಾನ ತಜ್ಞರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

Ayanur Manjunath ಸಂವಿಧಾನದ ಹುದ್ದೆಯಲ್ಲಿರುವವರು ಭಾವವೇಶಕ್ಕೆ ಒಳಗಾಗಬಾರದು.
ಮುಂದಿನ ಸದನದ ವೇಳೆ ಇವರನ್ನು ಹೊರಗಿಟ್ಟು. ನಂತರ ತೀರ್ಮಾನ ಮಾಡಿದ ಮೇಲೆ ಒಳಗ ಹೋಗಬೇಕು. ಶಾಸಕರುಗಳು ಸಹ ಇದು ಸರಿ ಇಲ್ಲ ಎಂದು ಹೇಳಿ ಮುಂದಿನ ಅಧಿವೇಶದ ವರೆಗೂ ಒಳಗೆ ಹೋಗಬಾರದು.
ನಿನ್ನೆ ಪಡೆದ ತೀರ್ಮಾನ ವಾಪಸ್ ಪಡೆಯಬೇಕು. ಶಾಸಕರ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಅವರಿಗೆ ಅವಕಾಶ ನೀಡಬೇಕೆಂದರು.

ನಾನು ಹೇಳುತ್ತಿರುವುದು ಸರಿ ಇದೆ. ಈ ಕುರಿತು ಚರ್ಚೆ ನಡೆಯಲಿ. ಒಂದು ತಪ್ಪನ್ನು ಮುಚ್ಚಲು ಇನ್ನೂಂದು ತಪ್ಪು ಮಾಡಬಾರದು ಎಂದರು. ಇದು ನನ್ನ ವೈಯಕ್ತಿಕ ನೆಲೆಯಾಗಿದೆ. ಅಮಾನತು ಆದೇಶ ವಾಪಸ್ ಪಡೆಯಬೇಕು.
ವಿರೋಧ ಪಕ್ಷದ ಶಾಸಕರು ಸದನದ ಒಳಗೆ ಹೋಗಬಾರದು. ಶಾಸನ ಮಾಡುವವರೇ ಶಾಸಕಾಂಗ ಅಪಮಾನ ಮಾಡಬಾರದು ಎಂದು ಆಯನೂರು ಮಂಜುನಾಥ್ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...