Friday, June 20, 2025
Friday, June 20, 2025

JCI Shimoga Sahyadri ಹೊಸ ಆವಿಷ್ಕಾರಗಳೊಂದಿಗೆ ನಾವೂ ಸಹ ಬದಲಾಗಬೇಕು- ಜೆಸಿಐ ಗಣೇಶ್

Date:

JCI Shimoga Sahyadri ಪ್ರತಿಯೊಂದು ಕ್ಷೇತ್ರಗಳಲ್ಲೂ ನಾವು ಎಷ್ಟೇ ಪರಿಣಿತರಾದರು ಸಹ ಬದಲಾದ ಕಾಲಮಾನದಲ್ಲಿ ಹೊಸ ಹೊಸ ಆವಿಷ್ಕಾರಗಳೊಂದಿಗೆ ನಾವು ಸಹ ಬದಲಾಗಬೇಕು ಆ ನಿಟ್ಟಿನಲ್ಲಿ ಹೊಸ ಹೊಸ ತರಬೇತಿಗಳು ಅತಿ ಮುಖ್ಯ ಎಂದು ಜೆ ಸಿ ಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷರಾದ ಜೆಸಿ ಗಣೇಶ್ ಅವರು ಅಬಿಮತ ವ್ಯಕ್ತಪಡಿಸಿದರು ಅವರು ಇಂದು ಬೆಳಿಗ್ಗೆ ನಗರದ ರಾಜೇಂದ್ರ ನಗರದಲ್ಲಿ ಇರುವ ರೋಟರಿ ಸಭಾಂಗಣದಲ್ಲಿ ಸಹ್ಯಾದ್ರಿ ಪ್ರೌಢಶಾಲೆ ಹಾಗೂ ರೋಟರಿ ಪ್ರೌಢಶಾಲೆಯ ಶಿಕ್ಷಕರುಗಳಿಗಾಗಿ ಹಮ್ಮಿಕೊಳ್ಳಲಾದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ರಾಷ್ಟ್ರೀಯ ತರಬೇತಿ ದಿನದ ಅಂಗವಾಗಿ ಇಂದು ಪ್ರಪಂಚಾದ್ಯಂತ ಎಲ್ಲಾ ಜೆಸಿಐ ಘಟಕಗಳ ವತಿಯಿಂದ ವಿವಿಧ ಸಮುದಾಯ ಶಾಲೆ, ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಅವರಿಗೆ ಅವಶ್ಯಕತೆ ಇರುವ ಪರಿಣಾಮಕಾರಿ ತರಬೇತಿ ಶಿವರಗಳನ್ನು ನಡೆಸಲಾಗುತ್ತಿದೆ ಇಂದು ನಮ್ಮ ಘಟಕಗಳಿಂದ ಈ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ಇದರಿಂದ ಶಿಕ್ಷಕರ ಜ್ಞಾನ ಇನ್ನಷ್ಟು ವೃದ್ಧಿಯಾಗುತ್ತದೆ ಜೆಸಿಐ ವತಿಯಿಂದ ನಿರಂತರವಾಗಿ ಹಲವಾರು ಮಾನವೀಯ ಸೇವೆಗಳನ್ನು ಮಾಡುವುದರ ಜೊತೆಗೆ ತರಬೇತಿಯನ್ನು ಮುಖ್ಯವಾಗಿ ಗುರಿಯನ್ನಾಗಿರಿಸಿಕೊಂಡು ಪ್ರತಿಯೊಂದು ಹಂತದಲ್ಲಿ ನೀಡುತ್ತಾ ಬರುತ್ತಿದ್ದೇವೆ ಹಾಗೆ ಬರುವ ದಿನಗಳಲ್ಲಿ ಶಿಕ್ಷಕರು ಸಹ ನಮ್ಮ ಜೆ ಸಿ ಐ ಸಂಸ್ಥೆಗೆ ಸೇರುವುದರ ಮುಖಾಂತರ ಉತ್ತಮ ತರಬೇತುರರಾಗಿ ಹೊರಹೊಮ್ಮುವುದರ ಜೊತೆಗೆ ಮಕ್ಕಳಿಗೆ ಒಳ್ಳೆಯ ಕೌಶಲ್ಯಗಳನ್ನು ಹಾಗೂ ವಿಷಯಗಳನ್ನು ತಿಳಿಸುವುದರ ಮುಖಾಂತರ ಮಕ್ಕಳು ಪರಿಪೂರ್ಣರಾಗುತ್ತಾರೆ ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ರೋಟರಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ನಿವೃತ್ತ ಕಾರ್ಮಿಕ ಅಧಿಕಾರಿಗಳಾದ. ಎಸ್ ಸಿ ರಾಮಚಂದ್ರ ಅವರು ಮಾತನಾಡುತ್ತಾ ಜೆ ಸಿ ಐ.ಸಂಸ್ಥೆ ಸಂಸ್ಕಾರದ ಜೊತೆಗೆ ವ್ಯಕ್ತಿತ್ವ ವಿಕಸನ ಹಾಗೂ ಪರಿಣಾಮಕಾರಿ ಭಾಷಣದ ಕಲೆ ವಿದ್ಯಾರ್ಥಿಗಳಿಗೆ ಗೋಲ್ ಸೆಟ್ಟಿಂಗ್ ಹಾಗೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸ್ತಾ ಬಂದಿದ್ದು ಇಂದಿಗೂ ಸಹ ಪ್ರಚಲಿತವಾಗಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ರೋಟರಿ ಮಾಜಿ ಸಹಾಯಕ ಗೌರ್ನರಾದ ಜಿ ವಿಜಯಕುಮಾರ್ ಮಾತನಾಡುತ್ತಾ ಜೆಸಿಐ ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿರಬಹುದು JCI Shimoga Sahyadri ಶಿಕ್ಷಕರಿರಬಹುದು ಹಾಗೂ ಯಾವುದೇ ವ್ಯಕ್ತಿ ಆಗಿರಬಹುದು ಸಮಾಜಕ್ಕೆ ಒಂದು ಆಸ್ತಿಯಾಗುತ್ತಾರೆ ಅವರಲ್ಲಿ ಸೇವಾ ಮನೋಭಾವನೆ ಹಾಗೂ ಸಮಾಜದ ಓರೆ ಕೋರೆಗಳನ್ನು ತಿದ್ದುವ ದರ ಜೊತೆಗೆ ಒಳ್ಳೆಯ ಆಕಾಂಕ್ಷೆ ವೃದ್ಧಿಯಾಗುತ್ತದೆ ಜೆಸಿಐ ನಲ್ಲಿ ಮಕ್ಕಳಿಂದ ಹಿರಿಯ ವಯಸ್ಸಿನವರಿಗೂ ಸಹ ಬೇರೆ ಬೇರೆ ಹಂತದಲ್ಲಿ ತರಬೇತಿ ನೀಡಲಾಗುವುದು ಇದರಿಂದ ಅವರಲ್ಲಿ ಆತ್ಮವಿಶ್ವಾಸ ವೃದ್ಧಿಯಾಗಿ ಎಂತಹ ಕಷ್ಟಗಳನ್ನು ಸಹ ನಿಭಾಯಿಸುವ ಧೈರ್ಯ ಬರುತ್ತದೆ ಎಂದು ನುಡಿದರು ಜೆ ಸಿಐ ನ ವಲಯ ತರಬೇತುದಾರರಾದ ನಿವೇದಿತಾ ವಿಕಾಸ್ ಅವರು ಮಾತನಾಡುತ್ತಾ ತರಬೇತಿಯಿಂದ ನಾವು ಪರಿಪೂರ್ಣರಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಣದಲ್ಲಿ ಹೊಸ ಹೊಸ ಬದಲಾವಣೆಗಳನ್ನು ತರಬಹುದು ಆದ್ದರಿಂದ ಪರಿಪೂರ್ಣ ಶಿಕ್ಷಕರಾಗಲು ಮಕ್ಕಳಲ್ಲಿ ಮಕ್ಕಳಾಗಿ. ದೊಡ್ಡವರಲ್ಲಿ ದೊಡ್ಡವರಾಗಿ ಕಲಿಯಬೇಕು ಕಲಿಕೆ ನಿರಂತರ ಹಾಗೆ ಕಲಿಕೆಯಲ್ಲಿ ಆಸಕ್ತಿಯು ಕೂಡ ತುಂಬಾ ಅವಶ್ಯಕ ಈ ನಿಟ್ಟಿನಲ್ಲಿ ಜೆಸಿಐ ಸಂಸ್ಥೆ ಮಾತ್ರ ಪ್ರಪಂಚಾದ್ಯಂತ ತರಬೇತಿ ನೀಡುವುದರಲ್ಲಿ ಮುಂಚೂಣಿಯಲ್ಲಿದೆ ಎಂದು ನೋಡಿದರು ಈ ತರಬೇತಿ ಕಾರ್ಯಗಾರದಲ್ಲಿ ಪ್ರಾಂಶುಪಾಲರಾದ ಸೂರ್ಯನಾರಾಯಣ್. ಸಹ್ಯಾದ್ರಿ ಪ್ರೌಢಶಾಲೆಯ ಆಡಳಿತ ಅಧಿಕಾರಿ ಟಿಪಿ ನಾಗರಾಜ್. ರೋಟರಿ ಚಾರಿಟೇಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಕೆ ಬಿ ರವಿಶಂಕರ್ ಜೆ ಸಿ ಐ ಸಂಸ್ಥೆಯ ಸುಪ್ರಿಯಾ ವಿಜಯಕುಮಾರ್ ರಕ್ಷಾ. ಮಂಜುನಾಥ್ ರಾವ್ ಕದಂ. ರಕ್ಷಿತಾ ಜಿ ಕೆ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...