Sri Venkataramana Temple Rathotsava ನಗರದ ಸಮೀಪ ಹೊಳೆಹೊನ್ನೂರು ರಸ್ತೆಯಲ್ಲಿರುವ ಪಿಳ್ಳಯ್ಯನಗಿರಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಬ್ರಹ್ಮ ರಥೋತ್ಸವ ಮೇ.೧೯ ೨೦೨೫ರಂದು ಸೋಮವಾರ ನಡೆಯಲಿದೆ.
ಮೇ.೧೮ರಿಂದ ೨೧ರಿಂದ ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿದ್ದು, ನಾಳೆ ಮೇ೧೮ರ ಭಾನುವಾರ ಬೆಳಗ್ಗೆ ೯ಗಂಟೆಗೆ ನಿತ್ಯಸೇವೆ, ದ್ವಾರತೋರಣ, ಕುಂಭಾರಾಧನೆ ಹೋಮ, ಧ್ವಜಾರೋಹಣ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಾಗಲಿದೆ. ಅಂದು ಸಂಜೆ ೬ಗಂಟೆಗೆ ಗರುಡೋತ್ಸವ, ವಸಂತ ಸೇವೆ, ಶ್ರೀನಿವಾಸ ಕಲ್ಯಾಣೋತ್ಸವ ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿದೆ.
ಮೇ ೧೯ರ ಸೋಮವಾರದಂದು ಬೆಳಗ್ಗೆ ೭.೩೦ಕ್ಕೆ ನಿತ್ಯಸೇವೆ,
Sri Venkataramana Temple Rathotsava ಯಾಗ ಶಾಲೆಯಲ್ಲಿ ರಥಾಂಗ ಹೋಮಾದಿಗಳು ಜರುಗಲಿದ್ದು ೯ಗಂಟೆಯಿಂದ ಮಂಟಪೋತ್ಸವದ ನಂತರ ಅಭಿಜಿನ್ ಮಹೂರ್ತದಲ್ಲಿ ೧೨ಗಂಟೆಗೆ ಶ್ರೀಯವರ ರಥಾರೋಹಣ ಮತ್ತು ರಥೋತ್ಸವ ನಡೆಯಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀನಿವಾಸ ಕಲ್ಯಾಣ ಹಾಗು ರಥೋತ್ಸವದಲ್ಲಿ ಪಾಲ್ಗೊಂಡು
ಶ್ರೀಲಕ್ಷ್ಮಿ ವೆಂಕಟರಮಣ ದೇವರ ಕೃಪೆಗೆ ಪಾತ್ರರಾಗಬೇಕೆಂದು ಉಪವಿಭಾಗಾಧಿಕಾರಿಗಳು ಮತ್ತು ತಹಶಿಲ್ದಾರ್ ಮತ್ತು ಮುಜರಾಯಿ ಅಧಿಕಾರಿಗಳು ಅರ್ಚಕರು ಮತ್ತು ಗ್ರಾಮಸ್ಥರು ಸ್ವಾಗತ ಕೋರಿದ್ದಾರೆ.
Sri Venkataramana Temple Rathotsava ಮೇ19. ಪಿಳ್ಳಂಗಿರಿ ಶ್ರೀ ವೆಂಕಟರಮಣ ರಥೋತ್ಸವ
Date: