Thursday, June 18, 2026
Thursday, June 18, 2026

Friends Center Shivamogga ಶಿವಮೊಗ್ಗದ “ಸಿನಿ ಟ್ಯಾಲೆಂಟ್”‌ ಸಂತೋಷ್ ರಾಮ್ ನಿರ್ದೇಶನದ “ಬಂಡೆ ಸಾಹೇಬ್” ಚಿತ್ರ ಮೇ 16 ರಂದು ತೆರೆಗೆ

Date:

Friends Center Shivamogga ಶಿವಮೊಗ್ಗ ಸಾಂಸ್ಕೃತಿಕ ನಗರಗಳ ತವರೂರು. ಈ ಜಿಲ್ಲೆಯಲ್ಲಿ ಸಾಕಷ್ಟು ಜನ ಅದ್ಭುತವಾದ ಕಲಾವಿದರು ರಾಜ್ಯ, ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿ ತಮ್ಮದೇ ಆದ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗ ಜಿಲ್ಲೆಯ ಪ್ರತಿಭೆಯಾದ ಸಂತೋಷ್ ರಾಮ್ ರವರು ರಾಜ್ಯದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಕರ್ತವ್ಯದಲ್ಲಿದ್ದಾಗಲೇ ರೌಡಿ ಗಳ ಗುಂಡೇಟಿಗೆ ಬಲಿಯಾದ ದಿ. ಮಲ್ಲಿಕಾರ್ಜುನ್ ಬಂಡೆ ರವರ ಜೀವನಾಧಾರಿತ ಚಲನಚಿತ್ರ ” ಬಂಡೆ ಸಾಹೇಬ್ ” ದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಇದು ಅವರ ಎರಡನೇ ಸಿನಿಮಾ. ಈ ಹಿಂದೆ ‘ ಪಂಟ್ರು ‘ ಸಿನಿಮಾ ದಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು.

ಈ ಸಿನಿಮಾ ಇದೇ ಮೇ 16 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಇದೇ ಚಿತ್ರದಲ್ಲಿ ನಮ್ಮ ಶಿವಮೊಗ್ಗದ ಮತ್ತೊಬ್ಬ ಪ್ರತಿಭೆಯಾದ ವಿಶಾಕ್ ನಾಗಲಾಪುರ ರವರು ಹಾಡನ್ನು ಹಾಡಿದ್ದಾರೆ.

ಆದ್ದರಿಂದ ಶಿವಮೊಗ್ಗದ ಎಲ್ಲಾ ನಾಗರಿಕರು, ಚಿತ್ರ ಪ್ರೇಮಿಗಳು, ಕಲಾಸಕ್ತರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ನಮ್ಮ ಸ್ಥಳೀಯ ಪ್ರತಿಭೆಗಳನ್ನು ಹರಸಿ ಪ್ರೋತ್ಸಾಹಿಸಬೇಕೆಂದು ವಿನಂತಿಸಿದರು.

Friends Center Shivamogga ಇದೇ ವೇಳೆ ಫ್ರೆಂಡ್ಸ್ ಸೆಂಟರ್ ನ ಮಾಜಿ ಅಧ್ಯಕ್ಷರುಗಳಾದ ಎಸ್ ದತ್ತಾತ್ರಿ ರವರು, ವಿಜಯ್ ಕುಮಾರ್ ರವರು, ಮಾತನಾಡುತ್ತಾ ಸಂತೋಷ್ ರಾಮ ಅವರು ಹಲವಾರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ ಮತ್ತು ವಿಶಾಖ ನಾಗಲಾಪುರವರು ೩೦ಕ್ಕೂ ಹೆಚ್ಚು ಕನ್ನಡ ಸಿನಿಮಾ ಹಾಗೂ ತೆಲುಗು ಮಲಯಾಳಿ ಹಿಂದಿ ತಮಿಳು ಚಿತ್ರಗಳಿಗೆ ಹಿನ್ನೆಲೆ ಗಾಯಕ ರಾಗಿ ವಿಶೇಷ ಸಾಧನೆ ಮಾಡಿದ್ದಾರೆ ಎಂದು ಬಸವನಗೌಡ ಹೆಚ್. ಎನ್. ನಮ್ಮ ಟಿವಿ ಮಾಲೀಕರಾದ ಜಗದೀಶ ಶ್ರೀಕಾಂತ್. ತರುಣ. ಫ್ರೆಂಡ್ಸ್ ಸೆಂಟರ್ ನ ಮಾಜಿ ಅಧ್ಯಕ್ಷರಾದ ನಾಗರಾಜ್ ವಿ. ಮಲ್ಲಿಕಾರ್ಜುನ ಕಾನೂರು

ಕಾರ್ಯದರ್ಶಿ ಎಲ್‌ಎಂ ಮೋಹನ ರವರು ಹಾಜರಿದ್ದು ಚಿತ್ರ ತಂಡವನ್ನು ಸನ್ಮಾನಿಸಿ ಚಿತ್ರಕ್ಕೆ ಶುಭ ಕೋರಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...