Rotary Club Shimoga ಭಾರತೀಯ ಸಂಸ್ಕೃತಿಯಲ್ಲಿ ಪುರಾತನವಾದದ್ದು ದೇವಭಾಷೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ವಾನ್ ಶಿವಾನಂದ್ ಭಟ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರಸ್ವತಿ ಶ್ಲೋಕಗಳನ್ನು ಕಲಿಸಲು ಜೂನ್ ನಿಂದ ಶಿಬಿರ ಪ್ರಾರಂಭಿಸಲು ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ನಮಗೆ ಜನ್ಮ ಇತ್ತ, ನಮ್ಮ ತಂದೆ-ತಾಯಿಗೆ ಮೊದಲು ನಮಸ್ಕರಿಸಬೇಕು. ಪೂರ್ವಜನ್ಮದ ಆತ್ಮಗಳಿಂದ ನಮ್ಮ ನಡೆನುಡಿಗಳು ಬಿಂಬಿತವಾಗುತ್ತದೆ. ಶಿಕ್ಷಕರ ಮಕ್ಕಳು ಶಿಕ್ಷಕರೇ ಆಗುವುದಿಲ್ಲ. ದೇಹ ಮಣ್ಣಿನಲ್ಲಿ ಲೀನವಾಗುತ್ತೆ ಆದರೆ, ಆತ್ಮನಶಿಸುವುದಿಲ್ಲ ಎಂಬ ನಂಬಿಕೆ ಇದೆ. ಮಕ್ಕಳಿಗೆ ಅಂಕಗಳಿಸುವ ಶಿಕ್ಷಣದಿಂದ ಯಾವುದೇ ಅನುಕೂಲಗಳಿಲ್ಲ. ಸಂಸ್ಕೃತದಿಂದ ಎಲ್ಲಾ ಭಾಷೆ ಸುಲಭವಾಗಿ ಕಲಿಯಬಹುದು. ದೇಶದ್ರೋಹಿಗಳು ಸಂಸ್ಕೃತ ಸತ್ತಭಾಷೆ ಎನ್ನುತ್ತಾರೆ. ಸಂಸ್ಕಾರದಿಂದ ಬದಲಾವಣೆ ಸಾದ್ಯ. ಇಂದಿಗೂ ನಾಸದವರು ನಮ್ಮ ನಂಬಿಕೆಗಳನ್ನು ಗೌರವಿಸುತ್ತಾರೆ ಹಾಗೂ ಪಾಲಿಸುತ್ತಾರೆ. ಶಸ್ತ್ರಚಿಕಿತ್ಸೆಯಲ್ಲಿ ಜೀವ ಇರುವುದು ಕಾಣುವುದಿಲ್ಲ, ವಿಜ್ಞಾನಕ್ಕೂ ಸವಾಲಾಗಿದೆ ಎಂದು ಹೇಳಿದರು.
Rotary Club Shimoga ಅಧ್ಯಕ್ಷತೆ ವಹಿಸಿದ್ದ ರೊ.ರೂಪಪುಣ್ಯಕೊಟಿ ಮಾತನಾಡಿ, ನಮ್ಮ ದೇಶದ ಆಚಾರ ವಿಚಾರಗಳನ್ನು ಇಂತಹ ವಿದ್ವಾಂಸರಿಂದ ಮಾತ್ರ ಉಳಿಸಿ ಬೆಳೆಸಲು ಸಾದ್ಯ. ನಮ್ಮ ಸಂಸ್ಕೃತಿಯನ್ನು ನಾವು ಗೌರವಿಸುವುದನ್ನು ಮೊದಲು ಕಲಿಯಬೇಕು ಹಾಗೂ ಉಳಿಸಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ರೊ.ಸತ್ಯನಾರಾಯಣ್ ಸ್ವಾಗತಿಸಿ, ರೊ.ರೇಣುಕಾರಾದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೊ.ಪ್ರಕೃತಿ ಮಂಚಾಲೆ ವಂದಿಸಿದರು. ಭಾರದ್ವಾಜ್, ಜಿ.ವಿಜಯಕುಮಾರ್, ವಾಗೇಶ್, ನಾಗರಾಜ್ ರಾಜಶೇಖರ್ ಮುಂತಾದವರಿದ್ದರು.