Wednesday, May 14, 2025
Wednesday, May 14, 2025

Muncipal Corporation ಸ್ವಚ್ಛತೆ & ಕುಡಿಯುವ ನೀರು‌ ಪೂರೈಕೆಗೆ ಆದ್ಯತೆ-ಪ್ರಭು‌ಮೇಸ್ತ್ರಿ

Date:

Muncipal Corporation ಪುರಸಭೆ ವ್ಯಾಪ್ತಿಗೆ ಒಳಪಡುವ ಕೆಇಬಿ ಕಾಲೋನಿ ಮತ್ತು ಕಾನುಕೊಪ್ಪ ಪ್ರದೇಶಕ್ಕೆ ಪುರಸಭೆ ಅಧ್ಯಕ್ಷ ಪ್ರಭುಮೇಸ್ತ್ರಿ ಗುರುವಾರ ಬೆಳಗ್ಗೆ ದಿಢೀರ್ ಭೇಟಿ ನೀಡಿ, ಸ್ವಚ್ಛತೆ ಮತ್ತು ಮೂಲ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು.
ಮಳೆ ಬಂತೆಂದರೆ ಸಮರ್ಪಕವಾಗಿ ಚರಂಡಿಯಲ್ಲಿ ನೀರು ಹರಿಯುವುದಿಲ್ಲ. ಕೆಲ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿಗಳು ಬೆಳೆದು ನಿಂತಿದೆ. ಇದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಡುತ್ತಿದೆ. ಕೊಡಕಣಿ ಗ್ರಾಮ ಪಂಚಾಯಿತಿಯಿಂದ ಪುರಸಭೆಗೆ ಸೇರ್ಪಡೆಯಾಗಿದ್ದರೂ ಸಹ ಕುಡಿಯುವ ನೀರು ಪೂರೈಸುವ ನಲ್ಲಿಗಳ ದುರಸ್ಥಿ ಕಾರ್ಯವಾಗಬೇಕು. ಕೆಲವಡೆ ಪೈಪ್‌ಗಳು ಒಡೆದು ನೀರು ಪೋಲಾಗುತ್ತದೆ ಎಂದು ಸಾರ್ವಜನಿಕರು ಪುರಸಭೆ ಅಧ್ಯಕ್ಷರಲ್ಲಿ ಅಹವಾಲು ತೋಡಿಕೊಂಡರು.
ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷ ಪ್ರಭುಮೇಸ್ತ್ರಿ ಪುರಸಭೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಿಗೂ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಅಂದಾಜು ಪಟ್ಟಿ ಮಾಡುವಂತೆ ಇಂಜಿನಿಯರ್ ಅವರಿಗೆ ತಿಳಿಸಲಾಗುವುದು. Muncipal Corporation ಮುಂದಿನ ಸಾಮಾನ್ಯ ಸಭೆಯಲ್ಲಿ ಕೆಇಬಿ ಕಾಲೋನಿ ಮತ್ತು ಕಾನುಕೊಪ್ಪ ಪ್ರದೇಶಗಳಿಗೆ ಸೂಕ್ತವಾದ ಸವಲತ್ತುಗಳನ್ನು ಒದಲಾಗಿಸಲಾಗುವುದು ಹಾಗೂ ಗಿಡ-ಗಂಟಿಗಳು ಬೆಳೆದಿರುವ ಖಾಲಿ ನಿವೇಶನದಾರರಿಗೆ ನೋಟೀಸ್ ನೀಡಲಾಗುವುದು ಎಂದ ಅವರು, ನೀರು ಪೋಲಾಗುವ ಸ್ಥಳಗಳನ್ನು ಗುರುತಿಸಿ ತಕ್ಷಣವೇ ದುರಸ್ಥಿ ಮಾಡಬೇಕು ಹಾಗೂ ಸ್ವಚ್ಛತೆ, ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಆರೋಗ್ಯ ನಿರೀಕ್ಷಕ ಎ.ಎನ್. ರವಿಕುಮಾರ್ ನಾಯ್ಕ್, ಗ್ರಾಪಂ ಮಾಜಿ ಸದಸ್ಯ ಚಿನ್ನಪ್ಪ, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ ಸೊರಬ ಸೇರಿದಂತೆ ಪುರಸಭೆ ಸಿಬ್ಬಂದಿ ಮುನಿಸ್ವಾಮಿ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JNNC College ಮೇ 14. ಜೆಎನ್ ಎನ್ ಸಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

JNNC College ರಾಷ್ಟ್ರೀಯ ಶಿಕ್ಷಣ ಸಮಿತಿ, ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ,...