Saturday, May 24, 2025
Saturday, May 24, 2025

Red Cross Sanjeevini Blood Centre ಇಂದಿನ ಪರಿಸ್ಥಿತಿಯಲ್ಲಿ ಆಧುನಿಕ ರಕ್ತ ಪರೀಕ್ಷಾಯಂತ್ರಗಳು‌ತುಂಬಾ ಅಗತ್ಯವಿವೆ- ಗುರುದತ್ತ ಹೆಗಡೆ

Date:

Red Cross Sanjeevini Blood Centre ತಂತ್ರಜ್ಞಾನ ಮುಂದುವರೆದಂತೆ ಆಧುನಿಕ ಯಂತ್ರಗಳಿಂದ ಕಾಯಿಲೆಯನ್ನು ಬೇಗ ಪತ್ತೆ ಹಚ್ಚಬಹುದು ಹಾಗೆ ಬೇಗನೆ ಪರಿಹಾರವನ್ನು ಸಹ ಕಂಡುಕೊಳ್ಳಬಹುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಮಾನ್ಯ ಗುರುದತ್ ಹೆಗಡೆಯವರು ನುಡಿದರು ಅವರು ಇಂದು ಬೆಳಿಗ್ಗೆ ನಗರದ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಸೆಂಟರ್ ನಲ್ಲಿ ಅತ್ಯಾಧುನಿಕ ರಕ್ತ ಪರೀಕ್ಷಾ ಯಂತ್ರ ಉದ್ಘಾಟನೆ ಮಾಡಿ ಮಾತನಾಡಿದರು. ಇಂತಹ ಆಧುನಿಕ ರಕ್ತಪರಿಕ್ಷಾ ಯಂತ್ರಗಳು ಇಂದು ತುಂಬಾ ಅಗತ್ಯತೆ ಇದೆ ಎಂದು ನುಡಿದರು ಇಂದು ರಕ್ತದಲ್ಲಿರುವ ಯಾವುದಾದರೂ ಸಣ್ಣ ಸಮಸ್ಯೆಗಳನ್ನು ಮ್ಯಾನುವಲ್ ಮುಖಾಂತರ ಪರೀಕ್ಷಿಸಿದ ಲೋಪದೋಷಗಳು ಕಂಡು ಬರಬಹುದು ಈಗ ಈ ಹೊಸ ಯಂತ್ರಗಳಿಂದ ಈ ಎಲ್ಲಾ ಲೋಪ ದೋಷಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹಾಗೂ ಸುರಕ್ಷಿತವಾದ ರಕ್ತವನ್ನು ಪೂರೈಕೆ ಮಾಡಲು ಸಹಾಯಕವಾಗುತ್ತದೆ ಹಾಗೂ ಇದರಿಂದ ಮುಂದೆ ಆಗುವ ಆರೋಗ್ಯ ಸಮಸ್ಯೆಯನ್ನು ತಪ್ಪಿಸಬಹುದು ಎಂದು ನುಡಿದರು. ಆಸ್ಪತ್ರೆಯವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಈ ರಕ್ತ ನಿಧಿಯನ್ನು ಇನ್ನೂ ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಎಂದು ಹಾರೈಸಿದರು ಸಮಾರಂಭದಲ್ಲಿ ರೆಡ್ ಕ್ರಾಸ್ ಉಪಾಧ್ಯಕ್ಷ ಟಿ ಎಸ್ ಅಶ್ವಥ್ ನಾರಾಯಣ ಶೆಟ್ಟಿ ರೆಡ್ ಕ್ರಾಸ್ ಚೇರ್ಮನ್ ಎಸ್ ಪಿ ದಿನೇಶ್ ಗೌರವ ಕಾರ್ಯದರ್ಶಿ ಡಾಕ್ಟರ್ ದಿನೇಶ್ ಐಎಂಎ ಅಧ್ಯಕ್ಷ ಡಾ ಶ್ರೀಧರ್ ನಂಜಪ್ಪ ಲೈಫ್ ಕೇರ್ ಡಾಕ್ಟರ್ ನಮೃತ ಉಡುಪ ಡಾಕ್ಟರ್ ಅರವಿಂದನ್ ರೆಡ್ ಕ್ರಾಸ್ ನಿರ್ದೇಶಕರಾದ ನವೀನ್. ಡಾಕ್ಟರ್ ಶಶಿಧರ್ ಅರಸ್ ಸಿ ಸುರೇಶ್. ಡಾ. ರೇಷ್ಮಾ ದೇವಾನಂದ್. ಅಶೋಕ್ ಜಿ ವಿಜಯಕುಮಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಮಥುರಾ ಪ್ಯಾರಡೈಸ್ಮಧುರ ಮಾತಿನ ಗೋಪಿನಾಥ್ ಗೆ”ಆತಿಥ್ಯ ರತ್ನ” ಪುರಸ್ಕಾರ

N Gopinath ಕರ್ನಾಟಕ ರಾಜ್ಯ ಹೋಟೆಲ್‌ ಸಂಘದ ಪ್ರತಿಷ್ಠಿತ ಪ್ರಶಸ್ತಿ "ಆತಿಥ್ಯರತ್ನ"ವನ್ನು...

Sagara News ಸಾಗರದ ಚರಕ ಅಂಗಡಿಯಲ್ಲಿ‌ಮೇ 26 ರಂದು‌ “ಅವ್ವ ಸಂತೆ”

Sagara News ಜೀವನ್ಮುಖಿ ಹಾಗೂ ಚರಕ ವತಿಯಿಂದ ದಿನಾಂಕ 26:05:25 ರ...