pahalgam attack ಕನ್ನಡಿಗರ ಆಟೋ ಚಾಲಕರ ಸಂಘ ನೊಂದಣಿ ಇವರ ವತಿಯಿಂದ ಕಾಶ್ಮೀರದ ಪೆಹಲ್ಗಾವ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಮೃತಪಟ್ಟ ಶಿವಮೊಗ್ಗದ ದಿವಂಗತ ಶ್ರೀ ಮಂಜುನಾಥ ರಾವ್ ಬೆಂಗಳೂರಿನ ದಿವಂಗತ ಶ್ರೀ ಭರತ್ ಭೂಷಣ್ ಹಾಗೂ ಶ್ರೀ ಮಧುಸೂಧನ್ ರಾವ್ ಹಾಗೂ ಅವರೊಂದಿಗೆ ಮಡಿದ ಎಲ್ಲಾ 26 ಮೃತರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ನೇತಾಜಿ ವೃತ್ತ ಶಿವಮೊಗ್ಗದಲ್ಲಿ ಮೌನಚರಣೆ ಹಾಗೂ ಕ್ಯಾಂಡಲ್ ಬೆಳಗುವ ಮೂಲಕ ವೃತರ ಆತ್ಮಕ್ಕೆ ಶಾಂತಿ ಸಭೆಯನ್ನ ಈ ದಿನ ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಗೌರವಾಧ್ಯಕ್ಷರಾದ ಪಂಚಾಕ್ಷರಿ ಅಧ್ಯಕ್ಷರು ಜಯಪ್ಪ , ಪ್ರಧಾನ ಕಾರ್ಯದರ್ಶಿಯಾದ ಪ್ರಫುಲ್ಲಚಂದ್ರ ಎಚ್. ಮಂಜುನಾಥ್ ಗೌಡ, ಶ್ರೀನಿವಾಸ್. ಕುಳುವ ಯುವಸೇನೆ ಜಿಲ್ಲಾಧ್ಯಕ್ಷರಾದ ಲೋಕೇಶ್ ಪೈಲ್ವಾನ್ , ರಂಗನಾಥ್ ಶಿಲ್ಪಿ ಹಾಗೂ ನರಸಿಂಹಣ್ಣ, ಕಲಾವಿದ ರಾಮಣ್ಣ, ನಾಗಣ್ಣ ಶಾಮ್ ಭೋವಿ, ಚಿನ್ಮಯ್ ಪಿ. ಹಾಗೂ ಸ್ಥಳೀಯರೊಂದಿಗೆ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.
pahalgam attack ಕನ್ನಡಿಗರ ಆಟೋ ಚಾಲಕರ ಸಂಘದ ವತಿಯಿಂದ ಪೆಹಲ್ಗಾವ್ ನಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಮರ್ಪಣೆ
Date: