ಯಶಸ್ವಿ ಪತ್ರಿಕೋದ್ಯಮ ಹಾಗೂ ಅಲಕ್ಷಿತ ಸಣ್ಣ ಸಮುದಾಯಗಳ ಪರವಾಗಿ ದುಡಿದ ಅನುಪಮ ಸೇವೆಗಾಗಿ ಪ್ರಸ್ತುತ ಸಾಲಿನ ಬಸವ ಸೇವಾರತ್ನ ಪ್ರಶಸ್ತಿಯನ್ನು ಇಲ್ಲಿನ ಬಸವ ಮಂಟಪದಿಂದ ಪ್ರಕಟಿಸಲಾಗಿದೆ.
ರಂಗಯ್ಯನಬಾಗಿಲು ಬಳಿ ಇರುವ ಬಸವ ಮಂಟಪದಲ್ಲಿ ಜರುಗುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗಡಿನಾಡು ಚಳ್ಳಕೆರೆ ತಾಲ್ಲೂಕಿನಲ್ಲಿ ಕಳೆದ 29 ವರ್ಷಗಳಿಂದಲೂ ನಿರಂತರವಾಗಿ ‘ಕನ್ನಡ ಸಂಪಿಗೆ’ ಪತ್ರಿಕೆಯನ್ನು ಯಶಸ್ವಿಯಾಗಿ ಪ್ರಕಟಣೆ ಮಾಡುತ್ತಾ ಬರುತ್ತಿದ್ದು, ಪತ್ರಿಕೋದ್ಯಮ ಸೇವೆ ಹಾಗೂ ಅಲಕ್ಷಿತ ಸಣ್ಣ ಸಮುದಾಯಗಳ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಟಿ.ತಿಪ್ಪೇಸ್ವಾಮಿ ಸಂಪಿಗೆ ಅವರ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಬಸವಮಂಟಪ ಮೂಲಗಳು ತಿಳಿಸಿವೆ.
ಚಿತ್ರದುರ್ಗ ಜಿಲ್ಲೆಯ “ಕನ್ನಡ ಸಂಪಿಗೆ” ಪತ್ರಕರ್ತ ಟಿ.ತಿಪ್ಪೆಸ್ವಾಮಿ “ಬಸವಸೇವಾರತ್ನ” ಪ್ರಶಸ್ತಿ
Date: