Saturday, May 17, 2025
Saturday, May 17, 2025

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

Date:

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

ಸಿಇಟಿ ಪರೀಕ್ಷೆಯ ವೇಳೆ, ಶಿವಮೊಗ್ಗ, ಬೀದರ್ ಹಾಗೂ ಇತರ ಕೆಲವೊಂದು ಸ್ಥಳಗಳಲ್ಲಿ ಜನಿವಾರವನ್ನು ಬಿಚ್ಚುವ ಘಟನೆಗಳನ್ನು ಗಂಭೀರವಾಗಿ ಖಂಡಿಸಿ, ಹಿಂದೂ ಸಂಸ್ಕೃತಿಗೆ ಹಾಗೂ ವೈದಿಕ ಪರಂಪರೆಗೆ ಅಪಮಾನವಾಗಿರುವುದರಿಂದ, ಇಂತಹ ಘಟನೆಯನ್ನು ತಕ್ಷಣ ನಿಲ್ಲಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

S.N.Chennabasappa ಈ ಸಂದರ್ಭದಲ್ಲಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರಿ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ವಿಶ್ವಮಧ್ವ ಮಹಾಪರಿಷತ್ ಶಿವಮೊಗ್ಗ ಶಾಖೆಯ ಪ್ರಮುಖರು, ಜಿಲ್ಲಾ ಸರ್ವ ವಿಪ್ರವೃಂದದ ಪದಾಧಿಕಾರಿಗಳು ಹಾಗೂ ಭಕ್ತ ವೃಂದಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

General Cyber Security Advisories ಕೆನರಾ ಬ್ಯಾಂಕ್ ನಲ್ಲಿಕ್ರೆಡಿಟ್ ಕಾರ್ಡ್ ಸೇವಾ ನ್ಯೂನತೆ. ಗ್ರಾಹಕರ ಪರ ತೀರ್ಪು‌ ನೀಡಿದ ಆಯೋಗ

General Cyber Security Advisories ಶಿವಮೊಗ್ಗದ ವಿಷ್ಣುಮೂರ್ತಿ ಕೇಕುಡ ಬಿನ್ ಶ್ರೀನಿವಾಸ...

World Hypertension Day ರಕ್ತದೊತ್ತಡ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ದಿನಾಚರಣೆ ಉದ್ದೇಶ- ಡಾ.ತಿಮ್ಮಪ್ಪ

World Hypertension Day ಪ್ರಸ್ತುತದ ಒತ್ತಡದ ಜಗತ್ತಿನಲ್ಲಿ ರಕ್ತದೊತ್ತಡದ ಕುರಿತಾದ ಅರಿವು,...

Mandya Ramesh ಮಂಡ್ಯ ರಮೇಶ್ ನೇತೃತ್ವದ ” ನಟನ” ಸಂಸ್ಥೆಯಲ್ಲಿ ರಂಗಭೂಮಿ ಡಿಪ್ಲೋಮಾ ಪಡೆಯಲು ಆಸಕ್ತರಿಗೆ ಅವಕಾಶ

Mandya Ramesh ಮೈಸೂರಿನ ಪ್ರತಿಷ್ಟಿತ ನಟನ ರಂಗಶಾಲೆಯ ರಂಗಭೂಮಿ ಡಿಪ್ಲೊಮಾ 2025-26...