Sunday, May 25, 2025
Sunday, May 25, 2025

Thirtahalli Police ಸೊಪ್ಪುಗುಡ್ಡೆ ಗ್ರಾಮದಿಂದ ವ್ಯಕ್ತಿ ನಾಪತ್ತೆ, ತೀರ್ಥಹಳ್ಳಿ‌ಪೊಲೀಸ್ ಠಾಣೆ ಪ್ರಕಟಣೆ

Date:

Thirtahalli Police ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಂದು 3 ಜನ ಕಾಣೆಯಾಗಿದ್ದು, ಮಾಹಿತಿ ನೀಡಲು ತಿಳಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ಗ್ರಾಮದ ನಾಗರಾಜ ಟಿ. ಎಂಬುವವರ ತಮ್ಮ ಟಿ.ಡಿ. ಜಯಪ್ರಕಾಶ್ ಬಿನ್ ದೇವಪ್ಪ ನಾಯ್ಕ ಎಂಬ 48 ವರ್ಷದ ವ್ಯಕ್ತಿ ದಿ: 15/03/2010 ರಂದು ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಕೊಂಕಣಿ, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.

ತೀರ್ಥಹಳ್ಳಿ ತಾಲೂಕಿನ ಅಕ್ಲಾಪುರ ಗ್ರಾಮದ ರೇಖಾ ಎಂಬುವವರ ಪತಿ ರಾಘು ಶೆಟ್ಟಿಗಾರ್ ಬಿನ್ ಬಗ್ರು ಶೆಟ್ಟಿಗಾರ್ ಎಂಬ 30 ವರ್ಷದ ವ್ಯಕ್ತಿ 2024ರ ಜುಲೈನಲ್ಲಿ ಮನೆಯಿಂದ ಬೈಕ್ ರಿಪೇರಿ ಮಾಡಿಕೊಂಡು ಬರುತ್ತೇನೆಂದು ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲಿನಲ್ಲಿ ಸುಟ್ಟ ಗಾಯದ ಕಲೆ ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ.
ತೀರ್ಥಹಳ್ಳಿ ತಾಲೂಕಿನ ಯಡೆಹಳ್ಳಿಕೇರೆ ಗ್ರಾಮದ ಶಮೀನಾ ಬಾನು ಎಂಬುವವರ ಪತಿ ಅಕ್ರಮ್ ಬಾಷಾ ಬಿನ್ ಬಾಷಾ ಸಾಬ್ ಎಂಬ 38 ವರ್ಷದ ವ್ಯಕ್ತಿ ದಿ:07/02/2025 ರಂದು ಮನೆಯಿಂದ ಗ್ಯಾರೇಜ್ ಕೆಲಕ್ಕೆಂದು ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ.

Thirtahalli Police ಈತನ ಚಹರೆ 5.8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ.

ಈ ವ್ಯಕ್ತಿಗಳ ಕುರಿತು ಮಾಹಿತಿ ಇದ್ದಲ್ಲಿ ತೀರ್ಥಹಳ್ಳಿ ಪೊಲೀಸ್ ಠಾಣೆ ದೂ.ಸಂ.:08181-228333 ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ದೂ.ಸಂ.: 9480803352 ಇವರನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಮಥುರಾ ಪ್ಯಾರಡೈಸ್ಮಧುರ ಮಾತಿನ ಗೋಪಿನಾಥ್ ಗೆ”ಆತಿಥ್ಯ ರತ್ನ” ಪುರಸ್ಕಾರ

N Gopinath ಕರ್ನಾಟಕ ರಾಜ್ಯ ಹೋಟೆಲ್‌ ಸಂಘದ ಪ್ರತಿಷ್ಠಿತ ಪ್ರಶಸ್ತಿ "ಆತಿಥ್ಯರತ್ನ"ವನ್ನು...

Sagara News ಸಾಗರದ ಚರಕ ಅಂಗಡಿಯಲ್ಲಿ‌ಮೇ 26 ರಂದು‌ “ಅವ್ವ ಸಂತೆ”

Sagara News ಜೀವನ್ಮುಖಿ ಹಾಗೂ ಚರಕ ವತಿಯಿಂದ ದಿನಾಂಕ 26:05:25 ರ...